ಬಾಗಲಕೋಟೆ: ಆಸಿಡ್ ಮಿಶ್ರಿತ ನೀರು ಎಸೆದ ಭಗ್ನಪ್ರೇಮಿ, ಮಹಿಳೆಗೆ ಗಾಯ

ಭಗ್ನಪ್ರೇಮಿಯೊಬ್ಬ ಪ್ರಿಯತಮೆಯ ಮುಖಕ್ಕೆ ಆಸಿಡ್ ಎರಚಿದ ಪರಿಣಾಮ ಮಹಿಳೆಯ ಮುಖ ಹಾಗೂ ಎಡಗಣ್ಣಿಗೆ ಹಾನಿಯಾಗಿರುವ ಘಟನೆ ನಡೆದಿದೆ.
ಸಂತ್ರಸ್ತೆ, ಆರೋಪಿ ಚಿತ್ರ
ಸಂತ್ರಸ್ತೆ, ಆರೋಪಿ ಚಿತ್ರ
Updated on

ಬಾಗಲಕೋಟೆ: ಭಗ್ನಪ್ರೇಮಿಯೊಬ್ಬ ಪ್ರಿಯತಮೆಯ ಮುಖಕ್ಕೆ ಆಸಿಡ್ ಎರಚಿದ ಪರಿಣಾಮ ಮಹಿಳೆಯ ಮುಖ ಹಾಗೂ ಎಡಗಣ್ಣಿಗೆ ಹಾನಿಯಾಗಿರುವ ಘಟನೆ ನಡೆದಿದೆ. ಸಂತ್ರಸ್ತೆಯನ್ನು ಲಕ್ಷ್ಮಿ ಬಡಿಗೇರ್ (32), ಆರೋಪಿ ಮೌನೇಶ್ ಪತ್ತಾರ್ (40) ಎಂದು ಗುರುತಿಸಲಾಗಿದೆ. ಸಂತ್ರಸ್ತೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕಿನ ಗದ್ದನಕೇರಿ ಕ್ರಾಸ್‌ನಲ್ಲಿರುವ ಮನೆಯ ಬಾಗಿಲು ತೆರೆಯದಿದ್ದಾಗ ಕಿಟಕಿಯಿಂದ ಆಸಿಡ್ ಎಸೆದಿದ್ದಾನೆ ಎನ್ನಲಾಗಿದೆ.

ಸಂತ್ರಸ್ತೆ, ಆರೋಪಿ ಚಿತ್ರ
ದಕ್ಷಿಣ ಕನ್ನಡ: 23 ವರ್ಷದ ಯುವತಿಯನ್ನು ಇರಿದು ಕೊಂದ 'ಭಗ್ನಪ್ರೇಮಿ'

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಲಕ್ಷ್ಮಿಯ ಎಂಟು ವರ್ಷದ ಮಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸಂತ್ರಸ್ತೆ ಹಾಗೂ ಆರೋಪಿಗಳು ವಿಜಯಪುರ ನಗರದ ಮೂರನಕೇರಿ ನಿವಾಸಿಗಳು ಎನ್ನಲಾಗಿದೆ. ಇಬ್ಬರೂ ಈಗಾಗಲೇ ಬೇರೆಯವರನ್ನು ಮದುವೆಯಾಗಿದ್ದಾರೆ, ಆದರೆ ಅವರು ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೌನೇಶ್ ಲಕ್ಷ್ಮಿಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದು, ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು.ಇಂತಹ ಒಂದು ಜಗಳದ ನಂತರ ಮೌನೇಶ್ ವಾರದ ಹಿಂದೆ ಮನೆ ಬಿಟ್ಟು ಹೋಗಿದ್ದು, ಲಕ್ಷ್ಮಿ ಆತನ ನಂಬರ್ ಬ್ಲಾಕ್ ಮಾಡಿದ್ದಳು.

ಮೌನೇಶ್ ಮಂಗಳವಾರ ಮನೆಗೆ ಮರಳಿದ್ದು, ಲಕ್ಷ್ಮಿ ಬಾಗಿಲು ತೆರೆಯದಿದ್ದಾಗ ಕೋಪಗೊಂಡ ಮೌನೇಶ್ ಕಿಟಕಿ ತಳ್ಳಿ ಆಸಿಡ್ ಎಸೆದಿದ್ದಾನೆ. ಮೌನೇಶ್ ಗೆ ಆಸಿಡ್ ಹೇಗೆ ಬಂತು ಮತ್ತು ಲಕ್ಷ್ಮಿ ಮೇಲೆ ಎಸೆಯುವ ಮನಸ್ಸು ಬಂದಿದ್ದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com