ಜ್ಞಾನದ ಹಣತೆ ಬೆಳಗುವ ಮೂಲಕ ಅಜ್ಞಾನದ ಕತ್ತಲನ್ನು ಹಿಮ್ಮೆಟ್ಟಿಸೋಣ: ರಾಜ್ಯದ ಜನತೆಗೆ ಸಿಎಂ ದೀಪಾವಳಿ ಶುಭಾಶಯ

ಅಜ್ಞಾನದ ಕತ್ತಲನ್ನು ಜ್ಞಾನದ ಹಣತೆ ಬೆಳಗುವ ಮೂಲಕ ಹಿಮ್ಮೆಟ್ಟಿಸೋಣ. ಸಂಭ್ರಮ-ಸಡಗರದಿಂದ ದೀಪಾವಳಿಯನ್ನು ಆಚರಿಸೋಣ.
 ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಅಜ್ಞಾನದ ಕತ್ತಲನ್ನು ಜ್ಞಾನದ ಹಣತೆ ಬೆಳಗುವ ಮೂಲಕ ಹಿಮ್ಮೆಟ್ಟಿಸೋಣ. ಸಂಭ್ರಮ-ಸಡಗರದಿಂದ ದೀಪಾವಳಿಯನ್ನು ಆಚರಿಸೋಣ ಎಂದು ಹೇಳಿದ್ದಾರೆ.

 ಸಿಎಂ ಸಿದ್ದರಾಮಯ್ಯ
ದೀಪಾವಳಿ ಬೆಳಕಲ್ಲಿ ಹೊಳೆಯುತ್ತಿವೆ ಭರತಭೂಮಿಯ ತರಹೇವಾರಿ ವಿಜಯಗಾಥೆಗಳು! (ತೆರೆದ ಕಿಟಕಿ)

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅರು ಪೋಸ್ಟ್ ಮಾಡಿ, ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು! ಈ ದೀಪೋತ್ಸವ ನಿಮ್ಮ ಜೀವನವನ್ನು ಜ್ಯೋತಿರ್ಮಯಗೊಳಿಸಲಿ. ಈ ಬೆಳಕಿನ ಹಬ್ಬವು ನಿಮ್ಮ ಬದುಕಲ್ಲಿ ಸಮೃದ್ಧಿ, ಸಂತೋಷ ಮತ್ತು ಸಾಮರಸ್ಯದಿಂದ ಬೆಳಗಲಿ. ದೀಪಾವಳಿಯ ಚೈತನ್ಯವು ಎಲ್ಲರ ನಡುವೆ ಏಕತೆ ಮತ್ತು ಸಹೋದರತ್ವವನ್ನು ಉತ್ತೇಜಿಸಲಿ ಎಂದು ಹಾರೈಸುತ್ತೇನೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com