ಬೆಂಗಳೂರು: ಮನೆಯಲ್ಲಿ ಒಂಟಿ ಮಹಿಳೆ ಹತ್ಯೆ; ಮಗ, ಸೋದರಳಿಯನ ಬಂಧನ

ನವೆಂಬರ್ 8 ರಂದು ರಾತ್ರಿ 8 ಗಂಟೆ ಸುಮಾರಿಗೆ ಉಮೇಶ್ ತನ್ನ ತಾಯಿಯ ಮನೆಗೆ ಹೋಗಿ ಹಣ ನೀಡಲಿಲ್ಲ ಎಂದು ಜಗಳವಾಡಿದ್ದಾನೆ. ತೀವ್ರ ವಾಗ್ವಾದದಲ್ಲಿ ಆಕೆಯ ಮುಖಕ್ಕೆ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಹೊಂಗಸಂದ್ರದಲ್ಲಿ ನ.8ರಂದು ನಡೆದ ಒಂಟಿ ಮಹಿಳೆಯ ಹತ್ಯೆ ಪ್ರಕರಣದಲ್ಲಿ ಮಹಿಳೆಯ ಮಗ ಮತ್ತು ಆಕೆಯ ಸೋದರಳಿಯನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ಕಿರಿಯ ಮಗ ಉಮೇಶ್ ಮತ್ತು ಆಕೆಯ ಸೋದರಳಿಯ ಸುರೇಶ್ ಬಂಧಿತರು.

ಜಯಮ್ಮ ಎಂಬ ಮಹಿಳೆ ಇತ್ತೀಚೆಗೆ ಆಸ್ತಿ ಮಾರಾಟ ಮಾಡಿದ್ದು, ಆಟೋರಿಕ್ಷಾ ಚಾಲಕ ಉಮೇಶ್‌ಗೆ ಪಾಲು ಕೊಡಲು ನಿರಾಕರಿಸಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ. ಅವರ ಹಿರಿಯ ಮಗ ಆನೇಕಲ್‌ನಲ್ಲಿದ್ದು, ಕೆಎಸ್‌ಆರ್‌ಟಿಸಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ತಮಿಳುನಾಡಿನ ಜಯಮ್ಮ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ನವೆಂಬರ್ 8 ರಂದು ರಾತ್ರಿ 8 ಗಂಟೆ ಸುಮಾರಿಗೆ ಉಮೇಶ್ ತನ್ನ ತಾಯಿಯ ಮನೆಗೆ ಹೋಗಿ ಹಣ ನೀಡಲಿಲ್ಲ ಎಂದು ಜಗಳವಾಡಿದ್ದಾನೆ. ತೀವ್ರ ವಾಗ್ವಾದದಲ್ಲಿ ಆಕೆಯ ಮುಖಕ್ಕೆ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಮರುದಿನ ಕಟ್ಟಡದ ಮಾಲೀಕರು ಜಯಮ್ಮ ಅವರ ಮನೆಯ ಮುಂಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಹತ್ಯೆಗೆ ಸಹಾಯ ಮಾಡಿದ್ದಕ್ಕಾಗಿ ಸುರೇಶ್ ನನ್ನು ಬಂಧಿಸಲಾಗಿದೆ. ಬೊಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Representational image
Duniya Vijay ಶ್ಯೂರಿಟಿ ನೀಡಿದ್ದ ಆರೋಪಿಯಿಂದ ಜೋಡಿ ಕೊಲೆ!; ಕಾರಣ ಸಿಟ್ಟು, ಅವಮಾನ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com