ನೀರಿನ ಮೇಲೆ ಗ್ರೀನ್ ಸೆಸ್: ಆಕ್ಷೇಪಣೆ ಬಂದರೆ ಪ್ರಸ್ತಾವನೆ ಕೈ ಬಿಡುತ್ತೇವೆ- ಸಚಿವ ಈಶ್ವರ್ ಖಂಡ್ರೆ

ಇದು ಕೇವಲ ಪ್ರಸ್ತಾವನೆಯಾಗಿದ್ದು, ಅಂತಿಮ ನಿರ್ಧಾರ ಕೈಗೊಂಡಿಲ್ಲ. ಈ ಚಿಂತನೆಗೆ ಒಬ್ಬರು ಆಕ್ಷೇಪ ವ್ಯಕ್ತಪಡಿಸಿದರೂ ಕಾರ್ಯರೂಪಕ್ಕೆ ತರುವುದಿಲ್ಲ. ಪ್ರಸ್ತಾವನೆಗೆ ಮೊದಲು ಜನಾಭಿಪ್ರಾಯ ತೆಗೆದುಕೊಳ್ಳುತ್ತೇವೆ.
ಸಚಿವ ಈಶ್ವರ್ ಖಂಡ್ರೆ
ಸಚಿವ ಈಶ್ವರ್ ಖಂಡ್ರೆ
Updated on

ಬೆಂಗಳೂರು: ಪಟ್ಟಣ ಮತ್ತು ನಗರಗಳಲ್ಲಿನ ನೀರಿನ ಬಿಲ್‌ಗಳ ಮೇಲೆ ಗ್ರೀನ್ ಸೆಸ್ ವಿಧಿಸುವ ಚಿಂತನೆಗೆ ಆಕ್ಷೇಪಣೆಗಳು ವ್ಯಕ್ತವಾದರೆ ಪ್ರಸ್ತಾವನೆ ಕೈಬಿಡಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆಯವರು ಗುರುವಾರ ಹೇಳಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಶ್ಚಿಮ‌ ಘಟ್ಟಗಳ ಬಗ್ಗೆ ಜಾಗೃತಿ ಮೂಡಿಸಲು ಅದರ ಸಂರಕ್ಷಣೆ ಮಾಡಲು ಸೆಸ್ ವಿಧಿಸುವ ಕುರಿತು ಚಿಂತನೆಗಳು ನಡೆಯುತ್ತಿವೆ. ಎಲ್ಲ ನದಿಗಳಿಗೆ ನೀರು ಹರಿಯುವುದು ಪಶ್ಚಿಮಘಟ್ಟ ಪ್ರದೇಶದಿಂದ. ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಒಂದು ಮನೆಗೆ 2 - 3 ರೂ. ಹಸಿರು ಸೆಸ್ ವಿಧಿಸಲಾಗುತ್ತದೆ. ಒಂದು ಮನೆಗೆ 2-3 ರೂ. ಅಂದರೆ ದಿನಕ್ಕೆ 10 ಪೈಸೆ ಆಗುತ್ತದೆ. ಶುದ್ಧ ಕುಡಿಯುವ ನೀರಿಗಾಗಿ ಪ್ರಕೃತಿ ಸಂರಕ್ಷಣೆ ಮಾಡಲು ಸೆಸ್ ವಿಧಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಸಚಿವ ಈಶ್ವರ್ ಖಂಡ್ರೆ
ಸರ್ಕಾರದಿಂದ ನೀರಿನ ಮೇಲೆ ಗ್ರೀನ್ ಸೆಸ್ ವರದಿ ತಳ್ಳಿಹಾಕಿದ ಡಿಸಿಎಂ ಡಿಕೆ ಶಿವಕುಮಾರ್

ಇದು ಕೇವಲ ಪ್ರಸ್ತಾವನೆಯಾಗಿದ್ದು, ಅಂತಿಮ ನಿರ್ಧಾರ ಕೈಗೊಂಡಿಲ್ಲ. ಈ ಚಿಂತನೆಗೆ ಒಬ್ಬರು ಆಕ್ಷೇಪ ವ್ಯಕ್ತಪಡಿಸಿದರೂ ಕಾರ್ಯರೂಪಕ್ಕೆ ತರುವುದಿಲ್ಲ. ಪ್ರಸ್ತಾವನೆಗೆ ಮೊದಲು ಜನಾಭಿಪ್ರಾಯ ತೆಗೆದುಕೊಳ್ಳುತ್ತೇವೆ. ಅದರ ಆಧಾರದ ಮೇಲೆ ಸಿಎಂ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಜನರು ಶುದ್ಧ ಕುಡಿಯುವ ನೀರನ್ನು ಬಳಸುತ್ತಾರೆ. ಅವರಿಗೆ ಮಿತವಾಗಿ ಬಳಸಬೇಕು, ನೀರು ವ್ಯಯ ಮಾಡಬಾರದು, ನೀರು ಅನ್ನೋದು ಜೀವ ಜಲ. ಹೀಗಾಗಿ, ಅದರ ಬಗ್ಗೆ ಜಾಗೃತಿ ಮೂಡಿಸಲು ಹಸಿರು ಸೆಸ್ ಹಾಕಲು ಪ್ರಸ್ತಾವನೆ ಇದೆ. ಅದು ಯಾರಿಗೂ ಹೊರೆ ಆಗುವುದಿಲ್ಲ. ಅದಾಗ್ಯೂ ಜನಾಭಿಪ್ರಾಯ ಬೇಡ ಅಂದರೆ ಅದನ್ನು ಕೈ ಬಿಡುತ್ತೇವೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com