ಸಾಮಾಜಿಕ ಮಾಧ್ಯಮ ಮಾನಸಿಕ ಆರೋಗ್ಯಕ್ಕೆ ಹಾನಿಕರ: ಅಮೆರಿಕಾದ ಪ್ರಸಿದ್ಧ ವೈದ್ಯ ಡಾ. ವಿವೇಕ್ ಮೂರ್ತಿ

ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತನಾಡಿದ ಅವರು, ಮಾನಸಿಕ ಆರೋಗ್ಯದ ಕುರಿತು ಕಾಳಜಿ ವಹಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
 ಡಾ. ವಿವೇಕ್ ಮೂರ್ತಿ
ಡಾ. ವಿವೇಕ್ ಮೂರ್ತಿ
Updated on

ಬೆಂಗಳೂರು: ಸಾಮಾಜಿಕ ಮಾಧ್ಯಮಗಳು ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದ್ದು, ಮಾನಸಿಕ ಆರೋಗ್ಯದ ಕುರಿತು ಗಮನಹರಿಸಬೇಕಾದ ತುರ್ತು ಅಗತ್ಯವಿದೆ ಎಂದು ಯುಎಸ್ ಸರ್ಜನ್ ಜನರಲ್ ಡಾ ವಿವೇಕ್ ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತನಾಡಿದ ಅವರು, ಮಾನಸಿಕ ಆರೋಗ್ಯದ ಕುರಿತು ಕಾಳಜಿ ವಹಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಅನೇಕ ಯುವಕರು ಆನ್‌ಲೈನ್‌ನಲ್ಲಿ ಸಂಪರ್ಕ ಹೊಂದಿದ್ದರೂ ಸಂಪರ್ಕ ಕಡಿತಗೊಂಡಿದೆ ಎಂದು ವರದಿ ಮಾಡುತ್ತಾರೆ, ಸಾಮಾಜಿಕ ಮಾಧ್ಯಮದಲ್ಲಿ ಆದರ್ಶ ಜೀವನವನ್ನು ಪ್ರದರ್ಶಿಸುವ ಒತ್ತಡವು ಈ ಭಾವನೆಗಳಿಗೆ ಕೊಡುಗೆ ನೀಡುತ್ತದೆ.

"ಮಾನಸಿಕ ಆರೋಗ್ಯಕ್ಕೆ ಬಂದಾಗ ಮೂರು ಪ್ರಮುಖ ಅಂಶಗಳು ಅತ್ಯಗತ್ಯ ,ಭಾರತದಲ್ಲಿರುವ ಸಾಮಾಜಿಕ ಮೌಲ್ಯಗಳು, ಸಹಜೀವನ ಹಾಗೂ ಸಮಾಜದೊಂದಿಗೆ ಬೆರೆಯುವುದೇ ಮಾನಸಿಕವಾಗಿ ಒಬ್ಬ ಮನುಷ್ಯನನ್ನು ಮಾನಸಿಕವಾಗಿ ಸದೃಢಗೊಳಿಸುತ್ತವೆ. ನನ್ನ ಬಾಲ್ಯವನ್ನು ಕಳೆದ, ನನ್ನ ಪೂರ್ವಜರು ಬದುಕಿ ಬಾಳಿದ ನನ್ನ ದೇಶಕ್ಕೆ ಪುನಃ ಭೇಟಿ ನೀಡಲು ನನಗೆ ಇದೊಂದು ಸುವರ್ಣಾವಕಾಶ ಬಂದಿದ್ದು ಅದರಿಂದ ನನಗೆ ಖುಷಿಯಾಗಿದೆ ಎಂದು ತಿಳಿಸಿದರು. ಯುಎಸ್ ಮತ್ತು ಭಾರತದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಅಪಾರ ಶೈಕ್ಷಣಿಕ ಮತ್ತು ಸಾಮಾಜಿಕ ಒತ್ತಡಗಳನ್ನು ಉದ್ದೇಶಿಸಿ ಮಾತನಾಡಿದ ಡಾ ವಿವೇಕ್ ಮೂರ್ತಿ, ಶೈಕ್ಷಣಿಕವಾಗಿ ಯಶಸ್ವಿಯಾಗಲು ಈ ಒತ್ತಡವು ಸಾಮಾಜಿಕ ಮಾಧ್ಯಮದಿಂದ ಪೋಷಿಸಿದ ಹೋಲಿಕೆಯೊಂದಿಗೆ ಗಮನಾರ್ಹ ಒತ್ತಡಕ್ಕೆ ಕಾರಣವಾಗಬಹುದು ಎಂದು ಹೇಳಿದರು. ಮಾನಸಿಕ ಆರೋಗ್ಯ ತರಬೇತಿಯನ್ನು ಉತ್ತಮವಾಗಿ ಸಂಯೋಜಿಸಲು ವೈದ್ಯಕೀಯ ಶಿಕ್ಷಣದಲ್ಲಿ ತುರ್ತು ಸುಧಾರಣೆಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.

 ಡಾ. ವಿವೇಕ್ ಮೂರ್ತಿ
ಡಾ. ವಿವೇಕ್ ಮೂರ್ತಿ ಅವರ ಕನಸಿನ 'ಮದರ್ ಆಫ್ ಅರ್ಥ್' ಪ್ರಾಜೆಕ್ಟ್ ಮಂಡ್ಯದಲ್ಲಿ ನಿರ್ಮಾಣ!

ಅನೇಕ ವೈದ್ಯಕೀಯ ಪಠ್ಯಕ್ರಮಗಳು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಸಮರ್ಪಕವಾಗಿ ತಿಳಿಸಿಲ್ಲ ಎಂದು ಅವರು ಪ್ರಸ್ತಾಪಿಸಿದರು, ದೀರ್ಘಕಾಲದವರೆಗೆ ಮಾನಸಿಕ ಮತ್ತು ಸಾಮಾಜಿಕ ಆರೋಗ್ಯಕ್ಕೆ ದೈಹಿಕ ಆರೋಗ್ಯಕ್ಕಿಂತ ಕಡಿಮೆ ಪ್ರಾಮುಖ್ಯತೆ ನೀಡಲಾಗಿತ್ತು. ಈ ರೀತಿಯ ಅಭಿಪ್ರಾಯವನ್ನು ಸುಧಾರಿಸಲು, ನಾವು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಯ ಅವಕಾಶಗಳನ್ನು ರಚಿಸಬೇಕಾಗಿದೆ, ಉದಾಹರಣೆಗೆ ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸುತ್ತಿರುವ ವ್ಯಕ್ತಿಗಳೊಂದಿಗೆ ತೊಡಗಿಸಿಕೊಳ್ಳುವುದು ಪ್ರಮುಖವಾಗಿದೆ ಎಂದಿದ್ದಾರೆ.

ಇದೇ ವೇಳೆ, ಯಾವುದೇ ಜನರು ತಮ್ಮಲ್ಲಿರುವ ಮಾನಸಿಕ ಖಿನ್ನತೆ ಹಾಗೂ ಮಾನಸಿಕ ಸಮಸ್ಯೆಯನ್ನು ಹೇಳಿಕೊಳ್ಳಲು ಯಾರೂ ಮುಂದೆ ಬರುವುದಿಲ್ಲ. ಮಾನಸಿಕ ಸಮಸ್ಯೆಯ ಬಗ್ಗೆ ಹೇಳಿಕೊಂಡರೆ ತಮಗೆ ಅಪಮಾನವೆಂಬ ಕೀಳರಿಮೆಯಿಂದ ಅವರು ತಮ್ಮ ಕಾಯಿಲೆಗಳನ್ನು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಅದರಿಂದ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುತ್ತಿವೆ. ತಮ್ಮಲ್ಲಿನ ಕೀಳರಿಮೆಯನ್ನು ಬಿಟ್ಟು ಜನರು ತಮ್ಮ ಮಾನಸಿಕ ಚಿಕಿತ್ಸೆಗಳತ್ತ ಮುಂದಾಗಬೇಕು ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com