ನಟ ದರ್ಶನ್‌ ಎರಡನೇ ಮದುವೆ ಆಗಿಲ್ವಾ, ನಾನು ಆದ್ರೆ ತಪ್ಪೇನು ಎನ್ನುತ್ತಿದ್ದ ಪತಿ: ಮನನೊಂದು ಪತ್ನಿ ಆತ್ಮಹತ್ಯೆ

ಅನುಷಾ ಮೃತ ದುರ್ದೈವಿ. ಎರಡು‌ ದಿನದ ಹಿಂದೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ಅನುಷಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದಂಪತಿಯ ಮದುವೆ ಸಂದರ್ಭದ ಚಿತ್ರ ಮತ್ತು ಮನೆಯ ಬಾತ್ ರೂಂ
ದಂಪತಿಯ ಮದುವೆ ಸಂದರ್ಭದ ಚಿತ್ರ ಮತ್ತು ಮನೆಯ ಬಾತ್ ರೂಂ
Updated on

ಬೆಂಗಳೂರು: ಪತಿಯ ಅನೈತಿಕ ಸಂಬಂಧ, ನಿರಂತರ ಕಿರುಕುಳ ತಾಳಲಾರದೆ ಹುಳಿಮಾವು ಸಮೀಪದ ಅಕ್ಷಯನಗರದಲ್ಲಿ ಮಹಿಳೆಯೊಬ್ಬರು ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಅನುಷಾ ಮೃತ ದುರ್ದೈವಿ. ಎರಡು‌ ದಿನದ ಹಿಂದೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ಅನುಷಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬೆಂಕಿ ಕೆನ್ನಾಲಿಗೆ ಸುಟ್ಟು ಕರಕಲಾಗಿದ್ದ ಅನುಷಾ ಸಾವು-ಬದುಕಿನ ಮಧ್ಯೆ ಹೋರಾಡಿ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ದಂಪತಿಯ ಮದುವೆ ಸಂದರ್ಭದ ಚಿತ್ರ ಮತ್ತು ಮನೆಯ ಬಾತ್ ರೂಂ
ನಟ ದರ್ಶನ್, ಗ್ಯಾಂಗ್ ನಿಜಕ್ಕೂ ಮನುಷ್ಯರಲ್ಲ, ರಾಕ್ಷಸರು: ರೇಣುಕಾಸ್ವಾಮಿ ತಂದೆ ಆಕ್ರೋಶ

ಆಗಿದ್ದೇನು?: ಅನುಷಾ ಐದು ವರ್ಷಗಳ ಹಿಂದೆ ಶ್ರೀಹರಿ ಎಂಬಾತನ ಜತೆಗೆ ವಿವಾಹವಾಗಿದ್ದರು. ದಂಪತಿಗೆ ಎರಡು ವರ್ಷದ ಮಗು ಇದೆ. ಇತ್ತೀಚೆಗೆ ಪತಿ ಶ್ರೀಹರಿಗೆ ಮತ್ತೊಬ್ಬಳ ಜತೆಗೆ ಅನೈತಿಕ ಸಂಬಂಧ ಇದೆ ಎಂಬುದು ಅನುಷಾಗೆ ಗೊತ್ತಾಯಿತು. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಮೊನ್ನೆಯೂ ಇದೇ ವಿಚಾರಕ್ಕೆ ಗಲಾಟೆ ಆಗಿ ತೀವ್ರ ಮನನೊಂದ ಅನುಷಾ ಬಾತ್ ರೂಂನಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.

ಆಕೆಯ ಕಿರುಚಾಟ ಕೇಳಿ ಕುಟುಂಬಸ್ಥರು ಕೂಡಲೇ ಬಾಗಿಲು ಮುರಿದು ಬೆಂಕಿ ನಂದಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅನುಷಾ ಇಂದು ಮೃತಪಟ್ಟಿದ್ದಾರೆ.

ಸದ್ಯ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಪೊಲೀಸರು ತನಿಖೆಯನ್ನು‌ ನಡೆಸುತ್ತಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ದಂಪತಿಯ ಮದುವೆ ಸಂದರ್ಭದ ಚಿತ್ರ ಮತ್ತು ಮನೆಯ ಬಾತ್ ರೂಂ
'ನಾನು ದರ್ಶನ್ ನೋಡ್ಬೇಕು, ಅವ್ರನ್ನ ಮದುವೆಯಾಗ್ತೀನಿ': ಬಳ್ಳಾರಿ ಸೆಂಟ್ರಲ್ ಜೈಲು ಮುಂದೆ ಮಹಿಳೆ ಹೈಡ್ರಾಮಾ!

ದರ್ಶನ್‌ ಎರಡನೇ ಮದುವೆ ಆಗಿಲ್ವಾ ಎಂದ ಗಂಡ: ಈ ಬಗ್ಗೆ ಅನುಷ ತಂದೆ ಹೇಮಂತ್ ಪ್ರತಿಕ್ರಿಯಿಸಿದ್ದು, ಕಳೆದ ಮೂರು ತಿಂಗಳಿನಿಂದ ಮಗಳು ಮತ್ತು ಅಳಿಯ ಮಧ್ಯೆ ಜಗಳ ಹೆಚ್ಚಾಗಿತ್ತು. ನನ್ನ ಮಗಳಿಗೆ ಮಹಿಳಾ ಠಾಣೆಗೆ ದೂರು ಕೊಡೋಣಾ ಅಂದಿದ್ದೆ. ಇಲ್ಲ ಬೇಡ ನನ್ನ ಸಂಸಾರನ ಸರಿ ಮಾಡಿಕೊಳ್ಳುತ್ತೀನಿ ಅಂತಿದ್ದಳು. ಮಗಳು ಬೆಂಕಿ ಹಚ್ಚಿಕೊಳ್ಳುವಾಗ ಅವನು ಮನೆಲೇ ಇದ್ದ, ಆದರೂ ಕಾಪಾಡಿಲ್ಲ.

ವಾಶ್ ರೂಂನಲ್ಲಿ ವಾಟ್ಸಪ್ ವಿಡಿಯೋ ಕಾಲ್ ಮಾಡಿಕೊಂಡೇ ಬೆಂಕಿ ಹಚ್ಚಿಕೊಂಡಿದ್ದಾಳೆ. ಮೊದಲೇ ಪೆಟ್ರೋಲ್ ತೆಗೆದುಕೊಂಡು ಬಂದು ಮನೆಯಲಿ ಇಟ್ಟಿದ್ದಾಳೆ. ವೀಡಿಯೊ‌ ಕಾಲ್ ರಿಸೀವ್ ಮಾಡಿ ಸುಮ್ಮನೆ ಇದ್ದ ಎಂದು ಹೇಳುತ್ತಾರೆ.

ಪತಿಯ ಅನೈತಿಕ ಸಂಬಂಧ ಬಗ್ಗೆ ಅನುಷಾ ಪ್ರಶ್ನೆ ಮಾಡುತ್ತಿದ್ದಾಗ, ನಟ ದರ್ಶನ್ ಎರಡನೆ ಮದುವೆ ಆಗಿದ್ದಾನೆ ಆತ ಸಂತೋಷವಾಗಿಲ್ವಾ? ನಾನು ಎರಡನೇ ಮದುವೆ ಆದರೆ ತಪ್ಪೇನು ಎಂದು ಪ್ರಶ್ನೆ ಮಾಡಿದ್ದನಂತೆ ಎಂದರು.

ಪತಿಗೆ ವಿಡಿಯೊ ಕಾಲ್ ಮಾಡುತ್ತಲೇ ಬೆಂಕಿ ಹಚ್ಚಿಕೊಂಡಿದ್ದ ಅನುಷಾ: ಅನುಷಾ ಗಂಡನಿಗೆ ವಾಟ್ಸಪ್ ಕಾಲ್ ಮಾಡುತ್ತಲೇ ಬೆಂಕಿ ಹಚ್ಚಿಕೊಂಡಿದ್ದಾಳೆ. ಆದರೂ ಶ್ರೀಹರಿ ಸುಮ್ಮನಾಗಿದ್ದ. ನನಗೆ ಬೇರೆ ಸಂಬಂಧ ಇದೆ ನನ್ನ ಬಿಟ್ಟು ಬಿಡು ಅಂತಿದ್ದ. ಆಕೆ ಬೆಂಕಿ ಹಚ್ಚಿಕೊಂಡಾಗ ಕಾಪಾಡಬಹುದಿತ್ತು, ಆದರೆ ಸಾಯಲಿ ಅಂತಾನೇ ಸುಮ್ಮನೆ ಇದ್ದ. ಮದುವೆ ಆದಾಗಿನಿಂದಲೂ ಚಿತ್ರಹಿಂಸೆ ನೀಡುತ್ತಿದ್ದ ಎಂದು ಮೃತಳ ಅಕ್ಕ ಉಷಾ ಆಕ್ರೋಶ ಹೊರಹಾಕಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com