ಬೆಂಗಳೂರು: ಹೊತ್ತಿ ಉರಿಯುತ್ತಿದ್ದ ಸಿಲಿಂಡರ್ ಎಸೆದ ಅಂಗಡಿ ಮಾಲೀಕ, ಆರು ವಾಹನಗಳು ಸುಟ್ಟು ಭಸ್ಮ!

ಈಜಿಪುರ ಮುಖ್ಯರಸ್ತೆಯಲ್ಲಿರುವ ಕಬಾಬ್ ಅಂಗಡಿಯಲ್ಲಿ ರಾತ್ರಿ 9.30ರ ಸುಮಾರಿಗೆ ರೀಫಿಲ್ ಮಾಡಿದ್ದ ಸಿಲಿಂಡರ್ ನೊಂದಿಗೆ ಖಾಲಿ ಗ್ಯಾಸ್ ಸಿಲಿಂಡರ್ ಬದಲಿಸಲು ಪ್ರಯತ್ನಿಸುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ.
ಸುಟ್ಟು ಭಸ್ಮವಾದ ವಾಹನಗಳು
ಸುಟ್ಟು ಭಸ್ಮವಾದ ವಾಹನಗಳು
Updated on

ಬೆಂಗಳೂರು: ಕಬಾಬ್ ಅಂಗಡಿ ಮಾಲೀಕರೊಬ್ಬರು ಹೊತ್ತು ಉರಿಯುತ್ತಿದ್ದ ಎಲ್‌ಪಿಜಿ ಸಿಲಿಂಡರ್ ಅನ್ನು ಅಂಗಡಿಯಿಂದ ಹೊರಕ್ಕೆ ಎಸೆದ ಪರಿಣಾಮ ಐದು ದ್ವಿಚಕ್ರ ವಾಹನಗಳು ಮತ್ತು ಆಟೋರಿಕ್ಷಾ ಸುಟ್ಟು ಭಸ್ಮವಾಗಿರುವ ಘಟನೆ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಈಜಿಪುರ ಮುಖ್ಯರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಈಜಿಪುರ ಮುಖ್ಯರಸ್ತೆಯಲ್ಲಿರುವ ಕಬಾಬ್ ಅಂಗಡಿಯಲ್ಲಿ ರಾತ್ರಿ 9.30ರ ಸುಮಾರಿಗೆ ರೀಫಿಲ್ ಮಾಡಿದ್ದ ಸಿಲಿಂಡರ್ ನೊಂದಿಗೆ ಖಾಲಿ ಗ್ಯಾಸ್ ಸಿಲಿಂಡರ್ ಬದಲಿಸಲು ಪ್ರಯತ್ನಿಸುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಸ್ಟೌ ಆಫ್ ಮಾಡಲು ಮರೆತಿದ್ದು, ರೆಗ್ಯುಲೇಟರ್ ಸಂಪರ್ಕ ಕಡಿತಗೊಳಿಸಿದಾಗ ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡಿದೆ.

ಇದರಿಂದ ಗಾಬರಿಗೊಂಡ ಮಾಲೀಕ ತನ್ನನ್ನು ಮತ್ತು ಅಂಗಡಿಯನ್ನು ಉಳಿಸಿಕೊಳ್ಳಲು ಹೊತ್ತಿ ಉರಿಯುತ್ತಿರುವ ಸಿಲಿಂಡರ್ ಅನ್ನು ರಸ್ತೆಗೆ ಎಸೆದಿದ್ದಾರೆ. ಪರಿಣಾಮವಾಗಿ ಆಟೋರಿಕ್ಷಾಕ್ಕೆ ಮೊದಲು ಬೆಂಕಿ ಹೊತ್ತಿಕೊಂಡಿದ್ದು, ಸ್ವಲ್ಪದರಲ್ಲೇ ಪಕ್ಕದಲ್ಲಿ ನಿಲ್ಲಿಸಿದ್ದ ಐದು ದ್ವಿಚಕ್ರ ವಾಹನಗಳಿಗೆ ಬೆಂಕಿ ವ್ಯಾಪಿಸಿದೆ.

ಸುಟ್ಟು ಭಸ್ಮವಾದ ವಾಹನಗಳು
ಬೆಂಗಳೂರಿನಲ್ಲಿ ಅಗ್ನಿ ಆಕಸ್ಮಿಕ: ಹೊತ್ತಿ ಉರಿದ ಆಯಿಲ್ ಫ್ಯಾಕ್ಟರಿ

ಘಟನೆ ನೋಡಿದ ಜನರು ನೀಡಿದ ಮಾಹಿತಿಯಿಂದ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸಮೀಪದ ಅಂಗಡಿಗಳ ಸಿಬ್ಬಂದಿ ಮತ್ತು ಜನರು ಕೂಡಾ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ವಿವೇಕ್ ನಗರ ಪೊಲೀಸರು ಅಂಗಡಿ ಮಾಲೀಕರ ವಿರುದ್ಧ BNS ನ ಸೆಕ್ಷನ್ 287 (ಬೆಂಕಿ ಅಥವಾ ದಹನಕಾರಿ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com