ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ: 'ಆಂತರಿಕ ಕಲಹ ಮುಚ್ಚಿಹಾಕಲು ಜನರನ್ನು ದಾರಿ ತಪ್ಪಿಸುವ ಯತ್ನ'- ಪ್ರಿಯಾಂಕ್ ಖರ್ಗೆ

'ಈ ಎಲ್ಲ ಬೆಲೆ ಏರಿಕೆಗೆ ಯಾರು ಹೊಣೆ, ಪ್ರಧಾನಿ ಮೋದಿಯವರ ಮಾಸ್ಟರ್ ಸ್ಟ್ರೋಕ್‌ನಿಂದ ಆರ್ಥಿಕತೆ ಕುಸಿದಿದೆ. ಅದಾನಿ ಅಂಬಾನಿಯಿಂದಾಗಿಯೇ ಪರಿಸ್ಥಿತಿ ಹೀಗಿದೆ'.
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ತಮ್ಮ ಆರ್ಥಿಕ ನೀತಿಗಳ ಕುರಿತು ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿರುವ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಆಳ್ವಿಕೆಯಲ್ಲಿ ದೇಶದ ಆರ್ಥಿಕತೆ ಕುಸಿದಿದೆ ಎಂದು ಮಂಗಳವಾರ ಆರೋಪಿಸಿದರು.

ಬೆಲೆ ಏರಿಕೆ ವಿಚಾರವಾಗಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಕೇಳಿದಾಗ, ಬಿಜೆಪಿ ನಾಯಕ ಬಿವೈ ವಿಜಯೇಂದ್ರ ಅವರು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಹೊರಹಾಕಿದ್ದಾರೆ. ತಮ್ಮ ಪಕ್ಷದೊಳಗಿನ ಕಲಹವನ್ನು 'ಮುಚ್ಚಿಹಾಕಲು' ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪ್ರಧಾನಿ ಮೋದಿಯವರ ಆರ್ಥಿಕ ನೀತಿಯಿಂದಾಗಿ ಸಾಮಾನ್ಯ ಜನರ ಜೀವನ ನರಕವಾಗಿದೆ. ಈ ಎಲ್ಲ ಬೆಲೆ ಏರಿಕೆಗೆ ಯಾರು ಹೊಣೆ, ಪ್ರಧಾನಿ ಮೋದಿಯವರ ಮಾಸ್ಟರ್ ಸ್ಟ್ರೋಕ್‌ನಿಂದ ಆರ್ಥಿಕತೆ ಕುಸಿದಿದೆ. ಅದಾನಿ ಅಂಬಾನಿಯಿಂದಾಗಿಯೇ ಪರಿಸ್ಥಿತಿ ಹೀಗಿದೆ' ಎಂದು ಆರೋಪಿಸಿದರು.

'ಬಜೆಟ್ ಬಗ್ಗೆ ಚರ್ಚೆ ಏಕೆ ನಡೆಯಲಿಲ್ಲ, ಸಿದ್ದರಾಮಯ್ಯ ಅವರು 4 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ಅದನ್ನು ಎಳೆ ಎಳೆಯಾಗಿ ಬಿಚ್ಚಬಹುದಿತ್ತು. ಆದರೆ, ಇಂದು ವಿಜಯೇಂದ್ರ ಮತ್ತು ಯತ್ನಾಳ್ ನಡುವಿನ ಜಗಳವನ್ನು ಮುಚ್ಚಿಹಾಕಲು ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರಲ್ಲಿ ಸಮನ್ವಯದ ಕೊರತೆ ಇದೆ' ಎಂದು ಹೇಳಿದರು.

ಪ್ರಿಯಾಂಕ್ ಖರ್ಗೆ
ದರ ಏರಿಕೆ, ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ: ಏಪ್ರಿಲ್ 7 ರಿಂದ ರಾಜ್ಯ ಸರ್ಕಾರದ ವಿರುದ್ಧ BJP 'ಜನಾಕ್ರೋಶ ಯಾತ್ರೆ'

18 ಬಿಜೆಪಿ ಶಾಸಕರ ಅಮಾನತು ಕುರಿತು ಮಾತನಾಡಿದ ಖರ್ಗೆ, ಸರ್ಕಾರಿ ಗುತ್ತಿಗೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ 4ರಷ್ಟು ಮೀಸಲಾತಿ ನೀಡುವ ಮಸೂದೆಗೆ ರಾಜ್ಯಪಾಲರು ಸಹಿ ಹಾಕದಿದ್ದರೆ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಲಿದೆ ಎಂದು ಹೇಳಿದರು.

'ಬಜೆಟ್ ಅಧಿವೇಶನದ ವೇಳೆಯಲ್ಲಿ ಅವರು ಅದೇ ರೀತಿ ವರ್ತಿಸಿದ್ದಾರೆ. 18 ಶಾಸಕರನ್ನು ಏಕೆ ಅಮಾನತುಗೊಳಿಸಲಾಗಿದೆ ಎಂದರೆ, ಸ್ಪೀಕರ್ ಮಸೂದೆಯನ್ನು ಓದುತ್ತಿರುವಾಗ ಅದನ್ನು ಕಸಿದುಕೊಳ್ಳಲು ಹೋದರು, ಸ್ಪೀಕರ್ ಕುರ್ಚಿ ಪಕ್ಕಕ್ಕೆ ಹೋಗಿ ಮಸೂದೆಯನ್ನು ಹರಿದು ಅವರ ಮೇಲೆ ಎಸೆದರು. ನಾನು ಸ್ಪೀಕರ್ ಆಗಿದ್ದರೆ, ಅವರನ್ನು 1 ವರ್ಷ ಅಮಾನತುಗೊಳಿಸುತ್ತಿದ್ದೆ. ರಾಜ್ಯ ಸರ್ಕಾರವು ಮಸೂದೆಯನ್ನು ಅಂಗೀಕರಿಸಿದೆ. ಆದರೆ, ರಾಜ್ಯಪಾಲರು ಅದಕ್ಕೆ ಸಹಿ ಹಾಕಲು ನಿರಾಕರಿಸಿ, ಅದನ್ನು ವಾಪಸ್ ಕಳುಹಿಸಿದ್ದಾರೆ. ಸದನ ಅಂಗೀಕರಿಸಿದ ಮಸೂದೆಗೆ ರಾಜ್ಯಪಾಲರು ಸಹಿ ಹಾಕದಿದ್ದರೆ, ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com