ಕಂಚಿ ಕಾಮಕೋಟಿ ಪೀಠದ ಕಿರಿಯ ಮಠಾಧೀಶರಾಗಿ ಶ್ರೀ ಶ್ರೀ ಗಣೇಶ ಶರ್ಮಾ ದ್ರಾವಿಡ್ ಸನ್ಯಾಸ ದೀಕ್ಷೆ ಸ್ವೀಕಾರ

ಆಂಧ್ರಪ್ರದೇಶದ ಅಣ್ಣಾವರಂ ಕ್ಷೇತ್ರದ ಋಗ್ವೇದ ವಿದ್ವಾಂಸ (ಸಲಕ್ಷಣ ಘನಪತಿ) ಶ್ರೀ ಗಣೇಶ ಶರ್ಮಾ ದ್ರಾವಿಡ್ ಅವರು ತೆಲಂಗಾಣದ ನಿಜಾಮಾಬಾದ್‌ನ ಬಸರಂನಲ್ಲಿರುವ ಶ್ರೀ ಜ್ಞಾನ ಸರಸ್ವತಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದ್ದಾರೆ.
Sri Ganesha Sharma Dravid
ಶ್ರೀ ಗಣೇಶ ಶರ್ಮಾ ದ್ರಾವಿಡ್
Updated on

ಬೆಂಗಳೂರು: ತಮಿಳುನಾಡಿನ ಕಾಂಚೀಪುರಂನಲ್ಲಿ ಶ್ರೀ ದುಡ್ಡು ಸತ್ಯ ವೆಂಕಟ ಸೂರ್ಯ ಸುಬ್ರಹ್ಮಣ್ಯ ಗಣೇಶ ಶರ್ಮ ದ್ರಾವಿಡ್ ಅವರಿಗೆ ಕಂಚಿ ಕಾಮಕೋಟಿ ಪೀಠಾಧಿಪತಿ ಜಗದ್ಗುರು ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮಿಗಳು ಅಕ್ಷಯ ತೃತೀಯ ಸಂದರ್ಭದಲ್ಲಿ ಸನ್ಯಾಸ ದೀಕ್ಷೆ ನೀಡಲಿದ್ದಾರೆ ಎಂದು ಕಂಚಿ ಕಾಮಕೋಟಿ ಪೀಠದ ಪ್ರಕಟಣೆ ತಿಳಿಸಿದೆ.

ಕಾಂಚೀಪುರಂನಲ್ಲಿ ಶ್ರೀ ಕಂಚಿ ಕಾಮಕೋಟಿ ಪೀಠವನ್ನು ಸ್ಥಾಪಿಸಿದ ಜಗದ್ಗುರು ಆದಿ ಶಂಕರಾಚಾರ್ಯರ 2534 ನೇ ಜಯಂತಿ ಮಹೋತ್ಸವ (ಮೇ 2) ರಂದು ಇದೆ ಎಂದು ಪ್ರಕಟಣೆ ತಿಳಿಸಿದೆ.

ಆಂಧ್ರಪ್ರದೇಶದ ಅಣ್ಣಾವರಂ ಕ್ಷೇತ್ರದ ಋಗ್ವೇದ ವಿದ್ವಾಂಸ (ಸಲಕ್ಷಣ ಘನಪತಿ) ಶ್ರೀ ಗಣೇಶ ಶರ್ಮಾ ದ್ರಾವಿಡ್ ಅವರು ತೆಲಂಗಾಣದ ನಿಜಾಮಾಬಾದ್‌ನ ಬಸರಂನಲ್ಲಿರುವ ಶ್ರೀ ಜ್ಞಾನ ಸರಸ್ವತಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದರು. 2006 ರಲ್ಲಿ ವೇದಾಧ್ಯಯನ ಆರಂಭಿಸಿದಂದಿನಿಂದ, ಅವರಿಗೆ ಶ್ರೀ ಕಾಂಚಿ ಕಾಮಕೋಟಿ ಪೀಠದ ಶ್ರೀ ಶಂಕರಾಚಾರ್ಯ ಸ್ವಾಮಿಗಳ ಆಶೀರ್ವಾದ ಮತ್ತು ಅನುಗ್ರಹ ದೊರೆತಿದೆ.

ಶ್ರೀ ಗಣೇಶ್ ಶರ್ಮಾ ದ್ರಾವಿಡ್ ಅವರು ಋಗ್ವೇದದ ಜೊತೆಗೆ ಯಜುರ್ವೇದ, ಸಾಮವೇದ, ಷಡಂಗಗಳು, ದಶೋಪನಿಷತ್ತುಗಳನ್ನು ಸಹ ಪೂರ್ಣಗೊಳಿಸಿದ್ದಾರೆ ಮತ್ತು ಶಾಸ್ತ್ರಿ ಅಧ್ಯಯನವನ್ನು ಮುಂದುವರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Sri Ganesha Sharma Dravid
ಕರ್ನಾಟಕದಲ್ಲಿ ಕಂಚಿ ಕಾಮಕೋಟಿ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ: ಬೆಂಗಳೂರು, ಧರ್ಮಸ್ಥಳ, ಹಾಸನಕ್ಕೆ ಭೇಟಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com