Representational image
ಸಾಂದರ್ಭಿಕ ಚಿತ್ರ

ಚಾಮರಾಜನಗರ: ವಿಷಕಾರಿ ಬೀಜಗಳನ್ನು ತಿಂದು 9 ಮಕ್ಕಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಚಾಮರಾಜನಗರ ಜಿಲ್ಲೆಯ ಯರಿಯೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಕ್ಕಳು 'ಮರಳೇಕಾಯಿ'ಯನ್ನು ತಿಂದು, ವಾಂತಿ ಮಾಡಿದ್ದಾರೆ.
Published on

ಚಾಮರಾಜನಗರ: ವಿಷಕಾರಿ ಬೀಜಗಳನ್ನು ತಿಂದು ಒಂಬತ್ತು ಮಕ್ಕಳು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಯರಿಯೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹಾರಾಷ್ಟ್ರದಿಂದ ಕಬ್ಬು ಕೊಯ್ಲು ಮಾಡಲು ಬಂದಿದ್ದ ಪೋಷಕರ ಜೊತೆಗೆ ಮಕ್ಕಳು ಬಂದಿದ್ದರು ಎಂದು ಅವರು ತಿಳಿಸಿದ್ದಾರೆ.

ಭಾನುವಾರ, ಈ ಮಕ್ಕಳಲ್ಲಿ ಕೆಲವರು 'ಮರಳೇಕಾಯಿ'ಯನ್ನು ತಿಂದಿದ್ದಾರೆ ಮತ್ತು ನಂತರ ವಾಂತಿ ಮಾಡಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಅವರು ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತದೆ.

Representational image
ಕೊಚ್ಚಿ: ವಿಷಾಹಾರ ಸೇವನೆಯಿಂದ 80 ವಿದ್ಯಾರ್ಥಿಗಳು ಅಸ್ವಸ್ಥ, NCC ಶಿಬಿರ ಬಂದ್!

ಈ ಸಂಬಂಧ ಅವರ ಪೋಷಕರು ಇನ್ನೂ ಯಾವುದೇ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com