ಬೆಂಗಳೂರು: ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು

ವ್ಯಾನ್ ಮಾಲೀಕ ಅರುಣ್ ಕೆಲವು ತಿಂಗಳ ಹಿಂದೆ ಒಎಂಬಿಆರ್ ಲೇಔಟ್‌ನಲ್ಲಿರುವ ಅಗ್ನಿಶಾಮಕ ಠಾಣೆಯ ಬಳಿ ವಾಹನವನ್ನು ನಿಲ್ಲಿಸಿದ್ದರು ಎಂದು ಹೇಳಲಾಗುತ್ತದೆ. ಅವರು ವ್ಯಾನ್ ಅನ್ನು ಬಳಸುತ್ತಿರಲಿಲ್ಲ.
Charred body found inside van
ಖಾಸಗಿ ಶಾಲಾ ಬಸ್ ಗೆ ಬೆಂಕಿ
Updated on

ಬೆಂಗಳೂರು: ಒಎಂಬಿಆರ್ ಲೇಔಟ್‌ನಲ್ಲಿ ಮಂಗಳವಾರ ರಾತ್ರಿ 10.15 ರ ಸುಮಾರಿಗೆ ಬೆಂಕಿ ಹೊತ್ತಿಕೊಂಡ ಶಾಲಾ ವ್ಯಾನ್‌ನಲ್ಲಿ ಅಪರಿಚಿತ ವ್ಯಕ್ತಿಯ ಸುಟ್ಟ ಶವ ಪತ್ತೆಯಾಗಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂಬುದು ತಿಳಿದುಬಂದಿಲ್ಲ.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಬೆಂಕಿಯನ್ನು ನಂದಿಸಿದ ನಂತರ ವ್ಯಾನ್‌ನಲ್ಲಿ ಸುಟ್ಟ ಶವ ಕಂಡಿದ್ದಾರೆ. ವ್ಯಾನ್ ಮಾಲೀಕ ಅರುಣ್ ಕೆಲವು ತಿಂಗಳ ಹಿಂದೆ ಒಎಂಬಿಆರ್ ಲೇಔಟ್‌ನಲ್ಲಿರುವ ಅಗ್ನಿಶಾಮಕ ಠಾಣೆಯ ಬಳಿ ವಾಹನವನ್ನು ನಿಲ್ಲಿಸಿದ್ದರು ಎಂದು ಹೇಳಲಾಗುತ್ತದೆ. ಅವರು ವ್ಯಾನ್ ಅನ್ನು ಬಳಸುತ್ತಿರಲಿಲ್ಲ ಮತ್ತು ಅದನ್ನು ಮಾರಾಟ ಮಾಡಲು ಬಯಸಿದ್ದರು.

ಸತ್ತ ವ್ಯಕ್ತಿ ಸುಮಾರು 40 ವರ್ಷ ವಯಸ್ಸಿನವರಾಗಿದ್ದಾರೆ. ಮೃತರು ವ್ಯಾನ್ ಒಳಗೆ ಮಲಗುತ್ತಿದ್ದರು ಎಂದು ಅವರು ಶಂಕಿಸಿದ್ದಾರೆ. ವ್ಯಾನ್ ಒಳಗೆ ಒಂದು ದಿಂಬು, ಚಾಪೆ ಮತ್ತು ಬೀಡಿ ತುಂಡುಗಳು ಕಂಡುಬಂದಿವೆ. "ಅರುಣ್ ಅವರಿಗೆ ವ್ಯಾನ್‌ನ ದಾಖಲೆಗಳನ್ನು ನೀಡುವಂತೆ ಕೇಳಲಾಗಿದೆ. ಡೋರ್ ಲಾಕ್ ಕೆಲಸ ಮಾಡದ ಕಾರಣ, ಸ್ಥಳೀಯ ಯುವಕರು ವ್ಯಾನ್ ಒಳಗೆ ಮದ್ಯಪಾನ ಮಾಡಿ ಧೂಮಪಾನ ಮಾಡುತ್ತಿದ್ದರು.

ಬೆಂಕಿ ಹೊತ್ತಿಕೊಂಡ ತಕ್ಷಣ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಬೆಂಕಿ ಅವಘಡಕ್ಕೆ ಕಾರಣಗಳನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಮಮೂರ್ತಿನಗರ ನಗರ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ.

Charred body found inside van
ರಾಜಸ್ಥಾನ: ಕಂಟೇನರ್-ಪಿಕಪ್​ ಟ್ರಕ್​ ಮಧ್ಯೆ ಭೀಕರ ಅಪಘಾತ; 7 ಮಕ್ಕಳು ಸೇರಿ 11 ಮಂದಿ ಸಾವು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com