ಬೆಂಗಳೂರಿನಲ್ಲಿ GIM-2025: ರಾಜ್ಯದ ದ್ವಿತೀಯ ದರ್ಜೆ ನಗರಗಳಲ್ಲಿ ಹೂಡಿಕೆಗೆ ಹೆಚ್ಚು ಒಲವು!

ಬೆಂಗಳೂರಿನ ಮೂಲಸೌಕರ್ಯವು ವಿಶ್ವ ದರ್ಜೆಯದ್ದಾಗಿದೆ, ನಮ್ಮಲ್ಲಿ ಪ್ರತಿಭೆ, ಇತಿಹಾಸ ಮತ್ತು ಮೂಲಸೌಕರ್ಯವಿದೆ, ಅದು ನಮಗೆ ಜಾಗತಿಕವಾಗಿ ಸ್ಪರ್ಧೆ ನೀಡಲು ಸಹಾಯವಾಗುತ್ತದೆ ಎಂದು ಪಾಟೀಲ್ ಹೇಳಿದರು.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಹೂಡಿಕೆಯ ಇತ್ತೀಚಿನ ಟ್ರೆಂಡ್ ನೋಡಿದರೆ ರಾಜಧಾನಿ ಬೆಂಗಳೂರಿನಾಚೆಗೆ ವೇಗವಾಗಿ ವಿಸ್ತರಿಸುತ್ತಿದೆ. ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಮತ್ತು ಇತರ ದ್ವಿತೀಯ ದರ್ಜೆ ನಗರಗಳು ಜನರ ಹೂಡಿಕೆಯ ಆಕರ್ಷಣೆ ಕೇಂದ್ರವಾಗಿ ಬೆಳೆಯುತ್ತಿವೆ. ಕ್ರಿಯಾತ್ಮಕ ಹೂಡಿಕೆ ವಾತಾವರಣ ಮತ್ತು ಹೇರಳವಾದ ಕೌಶಲ್ಯಪೂರ್ಣ ಕಾರ್ಯಪಡೆಯೇ ಇದಕ್ಕೆ ಕಾರಣವಾಗಿದೆ.

ಈ ಅವಕಾಶಗಳನ್ನು ಸ್ಪಷ್ಟ ಹೂಡಿಕೆಗಳಾಗಿ ಪರಿವರ್ತಿಸಲು ರಾಜ್ಯವು ಸಜ್ಜಾಗುತ್ತಿದೆ ಎಂದು ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಜಾಗತಿಕ ಹೂಡಿಕೆದಾರರ ಸಭೆಗೆ ಮುಂಚಿತವಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ನಮ್ಮ ಗುರಿ ಸ್ಪಷ್ಟವಾಗಿದೆ: ನಾವು ಆಸಕ್ತಿಯ ಪ್ರತಿಯೊಂದು ಅಭಿವ್ಯಕ್ತಿಯ ಶೇಕಡಾ 70 ರಷ್ಟು ಭಾಗವನ್ನು ನಿಜವಾದ, ಮೂಲಭೂತ ಹೂಡಿಕೆಯಾಗಿ ಪರಿವರ್ತಿಸಲು ಬಯಸುತ್ತೇವೆ. ಅದು ನಮ್ಮ ಗುರಿ, ಅದನ್ನು ನನಸಾಗಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ರಾಜ್ಯದ ಪ್ರಯತ್ನಗಳು ಫಲ ನೀಡುತ್ತಿವೆ. ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮುಂತಾದ ರಾಜ್ಯಗಳು ಹೂಡಿಕೆದಾರರನ್ನು ಆಕರ್ಷಿಸಲು ತೀವ್ರ ಸ್ಪರ್ಧೆಯಲ್ಲಿದ್ದರೂ, ಕರ್ನಾಟಕದ ಪರಂಪರೆಗೆ ಸಾಟಿಯಿಲ್ಲ ಎಂದರು.

Representational image
ಉಡಾನ್‌ ಯೋಜನೆಯಡಿ ರಾಜ್ಯದಲ್ಲಿ 5 ಹೊಸ ಮಿನಿ ಏರ್‌ಪೋರ್ಟ್‌ ನಿರ್ಮಾಣ!

ಬೆಂಗಳೂರಿನ ಮೂಲಸೌಕರ್ಯವು ವಿಶ್ವ ದರ್ಜೆಯದ್ದಾಗಿದೆ, ನಮ್ಮಲ್ಲಿ ಪ್ರತಿಭೆ, ಇತಿಹಾಸ ಮತ್ತು ಮೂಲಸೌಕರ್ಯವಿದೆ, ಅದು ನಮಗೆ ಜಾಗತಿಕವಾಗಿ ಸ್ಪರ್ಧೆ ನೀಡಲು ಸಹಾಯವಾಗುತ್ತದೆ ಎಂದು ಪಾಟೀಲ್ ಹೇಳಿದರು. ಐಐಎಸ್ಸಿ, ಐಐಎಂ, ಇಸ್ರೊ, ಬಿಇಎಲ್ ಬಿಹೆಚ್ ಇಎಲ್ ನಂತಹ ಪ್ರಮುಖ ರಕ್ಷಣಾ ಕೇಂದ್ರಗಳು ಬೆಂಗಳೂರಿನಲ್ಲಿರುವುದು ನಗರಕ್ಕೆ ಧನಾತ್ಮಕ ಅಂಶವಾಗಿದೆ ಎಂದರು.

ಕರ್ನಾಟಕದ ಪ್ರತಿಭಾ ಪೂಲ್ ಅದರ ಅತಿದೊಡ್ಡ ಆಸ್ತಿಗಳಲ್ಲಿ ಒಂದಾಗಿದೆ, ಆದರೆ ಪದವೀಧರರಲ್ಲಿ ಉದ್ಯೋಗಾವಕಾಶದ ಸವಾಲುಗಳಿವೆ. ಇದು ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಯುಜಿಸಿ ಮೂಲಕ ಪರಿಹರಿಸಬೇಕಾದ ಸಮಸ್ಯೆಯಾಗಿದೆ. ಇದು ನನ್ನ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲವಾದರೂ, ನಾನು ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದೇನೆ ಮತ್ತು ಅದನ್ನು ಸರಿಪಡಿಸಬೇಕು.ನಮ್ಮಲ್ಲಿ ವಿಶಾಲವಾದ, ಕೌಶಲ್ಯಪೂರ್ಣ ಕಾರ್ಯಪಡೆ ಇದೆ ಎಂದರು.

ನವೆಂಬರ್ 2022 ರಲ್ಲಿ ನಡೆದ ಕೊನೆಯ ಜಾಗತಿಕ ಹೂಡಿಕೆದಾರರ ಸಮಾವೇಶ(GIM) ಸಮಯದಲ್ಲಿ ಎದುರಿಸಿದ ಸವಾಲುಗಳನ್ನು ಒಪ್ಪಿಕೊಂಡ ಅವರು, ಆಸಕ್ತಿಯ ಅಭಿವ್ಯಕ್ತಿಯ ಪರಿವರ್ತನೆ ದರವು ಶೇಕಡಾ 45ರಷ್ಟು ಮಾತ್ರವಿದೆ. ಮಾರ್ಚ್ 2023 ರಲ್ಲಿ ಚುನಾವಣೆಗಳ ಘೋಷಣೆಯಿಂದ ಇದು ಜಟಿಲವಾಯಿತು, ಇದು ವಿಳಂಬಕ್ಕೆ ಕಾರಣವಾಯಿತು. ಈ ಬಾರಿ ಉತ್ತಮವಾಗಿ ಕಾರ್ಯನಿರ್ವಹಿಸಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com