ಸಾಂದರ್ಭಿಕ ಚಿತ್ರ
ಬಂಧನ

CM ಕಚೇರಿ ಲೆಟರ್ ಹಾಗೂ ಸಿದ್ದರಾಮಯ್ಯ ಸಹಿ ನಕಲು ಮಾಡಿ ವಂಚನೆ: ಆರೋಪಿ ಬಂಧನ

ಪೋಸ್ಟಿಂಗ್ ಕೊಡಿಸುವುದಾಗಿ ಆರೋಪಿ ರಾಘವೇಂದ್ರ ಅಧಿಕಾರಿಯ ಬಳಿ ಹಣ ಪಡೆದು ವಂಚಿಸಿದ್ದ. ಅಲ್ಲದೆ ರಾಜಕಾರಣಿಗಳ ಬಳಿ ಕೆಲಸ ಮಾಡಿಸಿಕೊಳ್ಳಲು ಬರುತ್ತಿದ್ದವರಿಗೂ ವಂಚಿಸಿದ್ದ ಎನ್ನಲಾಗಿದೆ.
Published on

ಬೆಂಗಳೂರು: ಮುಖ್ಯಮಂತ್ರಿಗಳ ಕಚೇರಿಯ ಟಿಪ್ಪಣಿ ನಕಲು ಮಾಡಿ ವಂಚಿಸಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ಮೂಲದ ರಾಘವೇಂದ್ರ ಬಂಧಿತ ಆರೋಪಿ.

ಕೆಎಎಸ್​ ಅಧಿಕಾರಿಯೊಬ್ಬರಿಗೆ ಪೋಸ್ಟಿಂಗ್ ನೀಡುವಂತೆ ಆರೋಪಿ ರಾಘವೇಂದ್ರ, ಮುಖ್ಯಮಂತ್ರಿಗಳ ಕಚೇರಿ ಹೆಸರಿನಲ್ಲಿ ನಕಲಿ ಟಿಪ್ಪಣಿ ಸೃಷ್ಟಿಸಿದ್ದನು. ಈ ಬಗ್ಗೆ ವಿಧಾನಸೌಧದ ಸಚಿವಾಲಯ ದೂರು ನೀಡಿತ್ತು. ಈತ ಈ ಹಿಂದೆ ಶಾಸಕರ ಖಾಸಗಿ ಸಹಾಯಕರ ಬಳಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ನಕಲಿ ಸಿಎಂ ಕಚೇರಿ ಪತ್ರ ಮತ್ತು ಸಹಿಯನ್ನು ಬಳಸಿದ್ದರ ವಿರುದ್ಧ ವಿಧಾನಸೌಧದ ಕಾರ್ಯದರ್ಶಿ ದೂರು ದಾಖಲಿಸಿದ ನಂತರ ಆತನನ್ನು ಇತ್ತೀಚೆಗೆ ಬಂಧಿಸಲಾಗಿದೆ.

ಪೋಸ್ಟಿಂಗ್ ಕೊಡಿಸುವುದಾಗಿ ಆರೋಪಿ ರಾಘವೇಂದ್ರ ಅಧಿಕಾರಿಯ ಬಳಿ ಹಣ ಪಡೆದು ವಂಚಿಸಿದ್ದ. ಅಲ್ಲದೆ ರಾಜಕಾರಣಿಗಳ ಬಳಿ ಕೆಲಸ ಮಾಡಿಸಿಕೊಳ್ಳಲು ಬರುತ್ತಿದ್ದವರಿಗೂ ವಂಚಿಸಿದ್ದ ಎನ್ನಲಾಗಿದೆ. ಸದ್ಯ ಪೊಲೀಸರು ಆರೋಪಿ ರಾಘವೇಂದ್ರನನ್ನು ವಿಚಾರಣೆ ನಡೆಸುತ್ತಿದ್ದಾರೆ.

ರಾಘವೇಂದ್ರ ಶಿಫಾರಸು ಪತ್ರದ ಭರವಸೆ ನೀಡಿ ಕೆಲವು ಲಕ್ಷಗಳಿಗೆ ಬೇಡಿಕೆ ಇಟ್ಟಿದ್ದ. ಹಲವು ಅಧಿಕಾರಿಗಳು ಹಣ ಪಾವತಿಸಿದ್ದಾರೆ ಎನ್ನಲಾಗಿದೆ, ನಂತರ ರಾಘವೇಂದ್ರ ಅವರಿಗೆಲ್ಲಾ ಮುಖ್ಯಮಂತ್ರಿಗಳ ನಕಲಿ ಸಹಿಯೊಂದಿಗೆ ನಕಲಿ ಪತ್ರವನ್ನು ನೀಡಿದ್ದಾನೆ. ಈ ಪತ್ರವನ್ನು ವಾಟ್ಸಾಪ್ ಮೂಲಕ ಅಧಿಕಾರಿಯೊಬ್ಬರಿಗೆ ಕಳುಹಿಸಿದಾಗ, ಅದು ನಕಲಿ ಎಂದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ ಪೊಲೀಸರು ಈ ಹಿಂದೆ ಅನೇಕ ಜನರಿಗೆ ಮೋಸ ಮಾಡಿದ್ದಾನೆಂದು ತಿಳಿದುಕೊಂಡರು, ಆದರೆ ಇದು ಅವನ ವಿರುದ್ಧ ದಾಖಲಾಗಿರುವ ಮೊದಲ ದೂರು. ಆದಾಗ್ಯೂ, ಕೆಎಎಸ್ ಅಧಿಕಾರಿ ಎಷ್ಟು ಹಣ ಪಾವತಿಸಿದ್ದಾರೆ ಎಂಬ ಬಗ್ಗೆ ನಿಖರವಾದ ವಿವರ ಪೊಲೀಸರು ಬಹಿರಂಗಪಡಿಸಿಲ್ಲ. ರಾಘವೇಂದ್ರ ವಿರುದ್ಧ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣ ದಾಖಲಿಸಲಾಗಿದೆ.

ಸಾಂದರ್ಭಿಕ ಚಿತ್ರ
ಆಕ್ಷೇಪಾರ್ಹ ವಿಡಿಯೋಗಳನ್ನು ಹಂಚಿಕೊಳ್ಳುವುದಾಗಿ ಬೆದರಿಕೆ; ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಯೂಟ್ಯೂಬರ್ ಬಂಧನ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com