ಭಾಷಾ ನೀತಿ ಕುರಿತು ಕನ್ನಡಕ್ಕೆ ಆದ್ಯತೆ ನೀಡಿಯೇ ತೀರ್ಮಾನ: ಸಚಿವ ಮಧು ಬಂಗಾರಪ್

ಭಾಷಾ ನೀತಿ ಕುರಿತಂತೆ ಕನ್ನಡಕ್ಕೆ ಆದ್ಯತೆ ನೀಡಿಯೇ ತೀರ್ಮಾನ ಕೈಗೊಳ್ಳುತ್ತೇವೆ. ಬೇರೆ ಭಾಷೆಗೆ ಅಗೌರವ ಕೊಡುವುದಲ್ಲ. ಎಲ್ಲ ಭಾಷೆಯನ್ನು ಕಲಿಯಬೇಕು. ಆದರೆ ಕನ್ನಡವನ್ನು ಕಡ್ಡಾಯ ಮಾಡಲೇಬೇಕು.
Madhu Bangarappa
ಸಚಿವ ಮಧು ಬಂಗಾರಪ್ಪ
Updated on

ಶಿವಮೊಗ್ಗ: ಭಾಷಾ ನೀತಿ ಕುರಿತು ಕನ್ನಡಕ್ಕೆ ಆದ್ಯತೆ ನೀಡಿಯೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಭಾನುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾಷಾ ನೀತಿ ಕುರಿತಂತೆ ಕನ್ನಡಕ್ಕೆ ಆದ್ಯತೆ ನೀಡಿಯೇ ತೀರ್ಮಾನ ಕೈಗೊಳ್ಳುತ್ತೇವೆ. ಬೇರೆ ಭಾಷೆಗೆ ಅಗೌರವ ಕೊಡುವುದಲ್ಲ. ಎಲ್ಲ ಭಾಷೆಯನ್ನು ಕಲಿಯಬೇಕು. ಆದರೆ ಕನ್ನಡವನ್ನು ಕಡ್ಡಾಯ ಮಾಡಲೇಬೇಕು ಎಂದು ಹೇಳಿದರು.

ಬೇರೆ ರಾಜ್ಯದ ಮಕ್ಕಳು ಎಂಟನೇ ತರಗತಿಗೆ ವರ್ಗಾವಣೆ ಆಗಿ ಇಲ್ಲಿಗೆ ಬರುತ್ತಾರೆ. ಅವರ ಜೀವನದಲ್ಲೇ ಕನ್ನಡ ಕಲಿತಿರುವುದಿಲ್ಲ. ಅವರಿಗೆ ಒಂದೇ ಬಾರಿ ಕನ್ನಡ ಕಲಿಯಿರಿ ಎಂದರೆ ಆಗುವುದಿಲ್ಲ. ಅವರಿಗೆ ಕನ್ನಡ ಕಲಿಸಬೇಕು. ಇದು ಸೂಕ್ಷ್ಮ ವಿಚಾರ. ಪಾಲಿಸಿ ಮಾಡುವಾಗ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಮಾಡುತ್ತೇವೆ. ಎಸ್‌ಇಪಿ ಬರುವುದರಿಂದ ನೋಡಿಕೊಂಡು ಮಾಡುತ್ತೇವೆ ಎಂದು ತಿಳಿಸಿದರು,

ಎನ್​ಇ‌ಪಿ ಹಾಗೂ ಎಸ್​ಇಪಿ ಬಗ್ಗೆ ಗೂಂದಲವಿದೆ. ನಾವು ಎಸ್​ಇಪಿ ಅಂತ ಕೇಳುತ್ತಿದ್ದೇವೆ. ಈಗ ಮೊದಲಿನಂತೆ ಕಲಿಕೆ ಇರಲಿದೆ. ಬೇರೆ ಭಾಷೆ ಹೇರಿಕೆಯ ಕುರಿತು ನಾವು ಹುಷಾರಾಗಿರಬೇಕಾಗುತ್ತದೆ. ಕನ್ನಡವನ್ನು ಬಡವಾಗಲು ಈಗ ಅಲ್ಲ ಮುಂದೂ ಸಹ ಬಿಡುವುದಿಲ್ಲ. ಇದೆಲ್ಲಾ ತಾಂತ್ರಿಕವಾಗಿ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

Madhu Bangarappa
ಶಾಲೆಗೆ ದಾಖಲಾತಿಗೆ 6 ವರ್ಷ ವಯಸ್ಸಿನ ನಿಯಮದಲ್ಲಿ ಸಡಿಲಿಕೆಯಿಲ್ಲ: ಸಚಿವ ಮಧು ಬಂಗಾರಪ್ಪ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com