
ಬೆಂಗಳೂರು: ಎರಡು ಕೊಲೆ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಕುಖ್ಯಾತ ರೌಡಿ ಬಳ್ಳಾರಿ ಎರಡು ಬಾರಿ ಎರಡು ಕೊಲೆಗೆ ಯತ್ನ ನಡೆಸಿದ ನಂತರ 36 ವರ್ಷದ ವ್ಯಕ್ತಿಯೊಬ್ಬರು ಪೊಲೀಸ್ ರಕ್ಷಣೆ ಕೋರಿದ್ದಾರೆ.
ಇಸ್ಪೀಟು ಆಡಲು ಹಣ ನೀಡದ ಕಾರಣ ರೌಡಿ ಸಂತ್ರಸ್ತನ ಮೇಲೆ ಕೋಪಗೊಂಡಿದ್ದ ಎನ್ನಲಾಗಿದೆ. ಪ್ರಾಣಭಯದಿಂದ ಬಳ್ಳಾರಿ ಶಿವನಿಗೆ ಈಗಾಗಲೇ 30 ಸಾವಿರ ರೂ.ಗೂ ಅಧಿಕ ಹಣ ನೀಡಿರುವುದಾಗಿ ಸಂತ್ರಸ್ತ ಸಿ.ಶಿವಪ್ಪ ಪೊಲೀಸರಿಗೆ ತಿಳಿಸಿದ್ದಾರೆ. ಸಾತನೂರು ಪೊಲೀಸರು ಬಳ್ಳಾರಿ ಶಿವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸಂಬಂಧ ಕನಕಪುರದ ನಲ್ಲಹಳ್ಳಿ ದೊಡ್ಡಿ ಗ್ರಾಮದ ಶಿವಪ್ಪ ಎಂಬುವರು ಬಳ್ಳಾರಿ ಶಿವನ ವಿರುದ್ಧ ಸೋಮವಾರ ದೂರು ದಾಖಲಿಸಿದ್ದಾರೆ. ಶಿವಪ್ಪ ಮತ್ತು ಆತನ ಸ್ನೇಹಿತರಾದ ಸುರೇಶ್ ಮತ್ತು ಮಂಜುನಾಥ್ ಕನಕಪುರಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಆರೋಪಿಗಳು ಮೊದಲ ಪ್ರಯತ್ನ ನಡೆಸಿದ್ದರು. ಏಪ್ರಿಲ್ 24 ರಂದು ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ದೂರುದಾರರ ಕಾರನು ತಡೆದ ರೌಡಿ, ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದ ಎನ್ನಲಾಗಿದೆ.
ಶಿವಪ್ಪ ತನ್ನ ಸ್ನೇಹಿತರೊಂದಿಗೆ ಕಾರಿನಿಂದ ಇಳಿದು ಅಲ್ಲಿಂದ ಓಡಿಹೋಗಿ ಪರಾರಿಯಾಗಿದ್ದರು. ಸ್ವಲ್ಪ ಸಮಯದ ನಂತರ ಹಿಂತಿರುಗಿ ಕಾರನ್ನು ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ.
ಮತ್ತೆ ರಾತ್ರಿ 9 ಗಂಟೆ ಸುಮಾರಿಗೆ ಸಂತ್ರಸ್ತನ ಮನೆ ಬಳಿ ತೆರಳಿದ ಶಿವ, ಅವಾಚ್ಯ ಪದಗಳಿಂದ ನಿಂದಿಸಿ ಮನೆಯಿಂದ ಹೊರಗೆ ಬರುವಂತೆ ಹೇಳಿದ್ದಾನೆ. ಶಿವಪ್ಪ ಪ್ರಾಣಭಯದಿಂದ ಮನೆಯೊಳಗೆಯೇ ಇದ್ದು, ಆರೋಪಿಗಳು ತಮ್ಮ ಸ್ಕೂಟರ್ ಮತ್ತು ಇತರ ಕೆಲವು ಬೆಲೆಬಾಳುವ ವಸ್ತುಗಳನ್ನು ಹಾನಿಗೊಳಿಸಿದ್ದಾರೆ ಎಂದು ದೂರಿನಲ್ಲಿ ಅವರು ಆರೋಪಿಸಿದ್ದಾರೆ.
ಆರೋಪಿ ಕೆ ಶಿವಕುಮಾರ್ ಅಲಿಯಾಸ್ ಬಳ್ಳಾರಿ ಶಿವ (37) ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹುಯಂಬಳ್ಳಿ ಹೋಬಳಿಯ ದೊಡ್ಡಹಾಲಹಳ್ಳಿ ಗ್ರಾಮದವನು. ಆತ ತನ್ನಿಂದಲೇ ಹಣ ಪಡೆದು ಕೊಲೆ ಬೆದರಿಕೆ ಹಾಕುತ್ತಿದ್ದ ಎಂದು ದೂರುದಾರರು ತಿಳಿಸಿದ್ದಾರೆ.
ಪ್ರಾಬಲ್ಯ ಸಾಧಿಸಲು ಅಲ್ಲಿದ್ದ ಕೆಲವರಿಗೆ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ. ಆತನ ಅಪರಾಧ ಚಟುವಟಿಕೆಗಳಿಂದಾಗಿ ಯಾರೂ ಅವರ ವಿರುದ್ಧ ದೂರು ನೀಡಲು ಬಯಸುವುದಿಲ್ಲ. ಆರೋಪಿ ವಿರುದ್ಧ ಬಿಎನ್ಎಸ್ನ ಇತರ ಸೆಕ್ಷನ್ ಗಳಡಿ ಕೊಲೆ ಯತ್ನ, ಸುಲಿಗೆ, ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.
Advertisement