10 ಸಾವಿರ ರೂ ಹಣಕ್ಕಾಗಿ ಜೀವ ಕಳೆದುಕೊಂಡ 21 ವರ್ಷದ ಯುವಕ; ನೀರು ಬೆರೆಸದೆ 5 ಬಾಟಲಿ ಮದ್ಯ ಕುಡಿದು ಸಾವು

ಕಾರ್ತಿಕ್ ಐದು ಬಾಟಲಿ ಮದ್ಯವನ್ನು ಸೇವಿದ್ದಾನೆ. ಬಳಿಕ ತೀವ್ರ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆತನನ್ನು ಕೋಲಾರ ಜಿಲ್ಲೆಯ ಮುಳಬಾಗಿಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೆ ಆತ ಸಾವಿಗೀಡಾಗಿದ್ದಾನೆ.
ಮೃತಪಟ್ಟ ಕಾರ್ತಿಕ್
ಮೃತಪಟ್ಟ ಕಾರ್ತಿಕ್
Updated on

ಬೆಂಗಳೂರು: ತನ್ನ ಸ್ನೇಹಿತರೊಂದಿಗೆ 10,000 ರೂ. ಬೆಟ್‌ ಕಟ್ಟಿ ಐದು ಬಾಟಲಿ ಕಚ್ಚಾ ಮದ್ಯ ಕುಡಿದು 21 ವರ್ಷದ ಯುವಕ ಸಾವಿಗೀಡಾಗಿರುವ ಘಟನೆ ನಡೆದಿದೆ.

ಮದ್ಯದೊಂದಿಗೆ ನೀರನ್ನು ಸೇರಿಸದೆಯೇ ಐದು ಬಾಟಲ್ ಕುಡಿಯುವುದಾಗಿ ಕಾರ್ತಿಕ್ ತನ್ನ ಸ್ನೇಹಿತರಾದ ವೆಂಕಟ ರೆಡ್ಡಿ, ಸುಬ್ರಮಣಿ ಮತ್ತು ಇತರ ಮೂವರಿಗೆ ಹೇಳಿದ್ದಾನೆ. ಒಂದು ವೇಳೆ ಕಾರ್ತಿಕ್‌ ನೀರನ್ನು ಮಿಶ್ರಣ ಮಾಡದೆಯೇ ಮದ್ಯ ಸೇವಿಸಿದರೆ 10,000 ರೂ. ನೀಡುವುದಾಗಿ ವೆಂಕಟ ರೆಡ್ಡಿ ಹೇಳಿದ್ದಾನೆ.

ಅದಾದ ಬಳಿಕ ಕಾರ್ತಿಕ್ ಐದು ಬಾಟಲಿ ಮದ್ಯವನ್ನು ಸೇವಿದ್ದಾನೆ. ಬಳಿಕ ತೀವ್ರ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆತನನ್ನು ಕೋಲಾರ ಜಿಲ್ಲೆಯ ಮುಳಬಾಗಿಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೆ ಆತ ಸಾವಿಗೀಡಾಗಿದ್ದಾನೆ. ಕಾರ್ತಿಕ್ ಮದುವೆಯಾಗಿ ಒಂದು ವರ್ಷವಾಗಿತ್ತು ಮತ್ತು ಅವರ ಪತ್ನಿ ಎಂಟು ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದರು.

ವೆಂಕಟ ರೆಡ್ಡಿ ಮತ್ತು ಸುಬ್ರಮಣಿ ಸೇರಿದಂತೆ ಆರು ಜನರ ವಿರುದ್ಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರನ್ನೂ ಬಂಧಿಸಲಾಗಿದ್ದು, ಪೊಲೀಸರು ಇತರ ಆರೋಪಿಗಳಿಗಾಗಿ ಶೋಧಕಾರ್ಯ ಕೈಗೊಂಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಸುಮಾರು 2.6 ಮಿಲಿಯನ್ ಜನರು ಮದ್ಯ ಸೇವನೆಯಿಂದ ಸಾಯುತ್ತಾರೆ. ಇದು ಜಾಗತಿಕ ಸಾವುಗಳಲ್ಲಿ ಶೇ 4.7 ರಷ್ಟಿದೆ.

ಮೃತಪಟ್ಟ ಕಾರ್ತಿಕ್
'ಎಣ್ಣೆ' ಪ್ರಿಯರಿಗೆ ಶಾಕಿಂಗ್ ಸುದ್ದಿ: ಮತ್ತೆ ಮದ್ಯದ ಬೆಲೆ ಏರಿಕೆಗೆ ಸರ್ಕಾರ ಅಧಿಸೂಚನೆ?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com