Moodbidri: ದಿಢೀರ್ ತುಂಬಿ ಹರಿದ ಎರುಗುಂಡಿ ಫಾಲ್ಸ್‌; ಸ್ಥಳೀಯರಿಂದ ಐವರು ಪ್ರವಾಸಿಗರ ರಕ್ಷಣೆ, Video Viral

ತುಂಬಿ ಹರಿಯುತ್ತಿರುವ ಫಾಲ್ಸ್‌ನ ಮೇಲೆ ಐವರು ಪ್ರವಾಸಿಗರು ತೆರಳಿದ್ದು, ಸ್ಥಳೀಯರು ಹೇಳಿದರೂ ಕೇಳದೆ ಹೋಗಿದ್ದಾರೆ. ಈ ಸಂದರ್ಭ ಏಕಾಏಕಿ ನೀರು ನುಗ್ಗಿದೆ. ಐವರು ಬಂಡೆಗಳ ನಡುವೆ ಸಿಲುಕಿದ್ದಾರೆ.
Eragundi waterfall
ಎರಗುಂಡಿ ಜಲಪಾತದಲ್ಲಿ ಸಿಲುಕಿದ್ದ ಪ್ರವಾಸಿಗರು
Updated on

ಮಂಗಳೂರು: ನಿಗದಿಗಿಂತ ಮೊದಲೇ ರಾಜ್ಯಕ್ಕೆ ಮುಂಗಾರು ಕಾಲಿಟ್ಟಿದ್ದು, ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಇತ್ತ ಎರುಗುಂಡಿ ಫಾಲ್ಸ್‌ನಲ್ಲಿ ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗರನ್ನು ಸ್ಥಳೀಯರು ರಕ್ಷಣೆ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಬಳಿಯ ಎರುಗುಂಡಿ ಫಾಲ್ಸ್‌ ಗೆ ಪ್ರವಾಸಕ್ಕೆಂದು ತೆರಳಿ ಅಪಾಯಕ್ಕೆ ಸಿಲುಕಿದ್ದ ಐದು ಮಂದಿ ಪ್ರವಾಸಿಗರನ್ನು ಸ್ಥಳೀಯರು ರಕ್ಷಿಸಿದ್ದಾರೆ. ತುಂಬಿ ಹರಿಯುತ್ತಿರುವ ಫಾಲ್ಸ್‌ನ ಮೇಲೆ ಐವರು ಪ್ರವಾಸಿಗರು ತೆರಳಿದ್ದು, ಸ್ಥಳೀಯರು ಹೇಳಿದರೂ ಕೇಳದೆ ಹೋಗಿದ್ದಾರೆ.

ಈ ಸಂದರ್ಭ ಏಕಾಏಕಿ ನೀರು ನುಗ್ಗಿದೆ. ಐವರು ಬಂಡೆಗಳ ನಡುವೆ ಸಿಲುಕಿದ್ದಾರೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗಲಿದ್ದ ಐವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಎರುಗುಂಡಿ ಫಾಲ್ಸ್‌ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತಿಗೆ ಗ್ರಾಮದ ಪಾಲಡ್ಕದಲ್ಲಿ ಇದ್ದು, ಮುಂಗಾರು ಮಳೆಯ ಕಾರಣದಿಂದ ಫಾಲ್ಸ್‌ ತುಂಬಿ ಹರಿಯುತ್ತಿದೆ. ಪ್ರವಾಸಿಗರ ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

Eragundi waterfall
Belagavi: ಭಾರಿ ಮಳೆಗೆ ಗೋಡೆ ಕುಸಿದು 3 ವರ್ಷದ ಬಾಲಕಿ ಸಾವು; Video

ಎಚ್ಚರಿಕೆ ನೀಡಿದರೂ ಜಲಪಾತ ಏರಿದ ಪ್ರವಾಸಿಗರು

ಇನ್ನು ಭಾರಿ ಮಳೆ ಕಾರಣ ನೀರು ರಭಸವಾಗಿ ಹರಿಯುತ್ತಿದೆ. ಜಲಪಾತ ಯಾವಾಗ ಬೇಕಾದರೂ ಉಕ್ಕಿ ಹರಿಯಬಹುದು. ಜಲಪಾತದ ಬಳಿ ಹೋಗಬೇಡಿ ಎಂದು ಸ್ಥಳೀಯರು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದರು. ಆದರೂ ಪ್ರವಾಸಿಗರೂ ಸ್ಥಳೀಯರನ್ನು ನಿರ್ಲಕ್ಷಿಸಿ ಜಲಪಾತ ಏರಿದ್ದರು.

ಪ್ರವಾಸಿಗರು ಜಲಪಾತ ಏರುತ್ತಲೇ ಜಲಪಾತದಲ್ಲಿ ನೀರು ತುಂಬಿ ಹರಿದಿದೆ. ಈ ವೇಳೆ ಪ್ರವಾಸಿಗರು ಪಾರಾಗುವ ಪ್ರಯತ್ನ ಮಾಡಿದರಾದರೂ ನೀರಿನ ರಭ ಹೆಚ್ಚಾದ ಹಿನ್ನಲೆಯಲ್ಲಿ ಬಂಡೆಗಳ ನಡುವೆ ಸಿಲುಕಿದ್ದರು. ನದಿಯಲ್ಲಿ ನೀರಿನ ಮಟ್ಟ ಹಠಾತ್ತನೆ ಏರಿಕೆಯಾದ ಕಾರಣ, ಪ್ರವಾಸಿಗರು ಸಿಲುಕಿಕೊಂಡರು ಮತ್ತು ಸಹಾಯಕ್ಕಾಗಿ ಕೂಗಿಕೊಂಡರು.

ಈ ವೇಳೆ ಇದನ್ನು ಗಮನಿಸಿದ ಸ್ಥಳೀಯರು ತಮ್ಮ ಬಳಿ ಇದ್ದ ಹಗ್ಗಗಳನ್ನು ಸೇರಿಸಿ ಜಲಪಾತದಿಂದ ಪ್ರವಾಸಿಗರನ್ನು ಒಬ್ಬೊಬ್ಬರನ್ನಾಗಿಯೇ ಕೆಳಗಿಳಿಸಿದ್ದಾರೆ. ಅದೃಷ್ಟವಶಾತ್, ಯಾವುದೇ ಸಾವುನೋವುಗಳು ಅಥವಾ ಗಾಯಗಳು ವರದಿಯಾಗಿಲ್ಲ.

ಅಧಿಕಾರಿಗಳ ಎಚ್ಚರಿಕೆ

ತೀವ್ರ ಮಳೆಯ ಸಮಯದಲ್ಲಿ ಜಲಪಾತಗಳು ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಭೇಟಿ ನೀಡದಂತೆ ಜಿಲ್ಲಾ ಅಧಿಕಾರಿಗಳು ಮೊದಲೇ ಜನರಿಗೆ ಎಚ್ಚರಿಕೆ ನೀಡಿದ್ದರು. ಆದಾಗ್ಯೂ, ಈ ಸಲಹೆಗಳನ್ನು ನಿರ್ಲಕ್ಷಿಸುವ ಕೆಲವು ಪ್ರವಾಸಿಗರ ಪ್ರವೃತ್ತಿ ಸ್ಥಳೀಯ ಸಮುದಾಯಗಳು ಮತ್ತು ರಕ್ಷಣಾ ತಂಡಗಳಿಗೆ ಸವಾಲುಗಳನ್ನು ಒಡ್ಡುತ್ತಲೇ ಇದೆ ಎಂದು ಅಧಿಕಾರಿಗಳು ಹೇಳಿದರು.

ರೆಡ್ ಅಲರ್ಟ್

ಕಳೆದ ಮೂರು ದಿನಗಳಿಂದ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯ ಜನಜೀವನ ತೀವ್ರವಾಗಿ ಅಸ್ತವ್ಯಸ್ತಗೊಂಡಿದ್ದು, ಅಧಿಕಾರಿಗಳು ರೆಡ್ ಅಲರ್ಟ್ ಹೊರಡಿಸಲು ಮತ್ತು ವಿಪತ್ತು ಪ್ರತಿಕ್ರಿಯೆ ತಂಡಗಳನ್ನು ನಿಯೋಜಿಸಲು ಉತ್ತೇಜನ ನೀಡಿದ್ದಾರೆ. ಕರಾವಳಿ ಕರ್ನಾಟಕದ ರೆಡ್ ಅಲರ್ಟ್ ಮುಂದಿನ ಐದು ದಿನಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಐಎಂಡಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com