ಕಲಬುರಗಿ: ಮಳಸಾಪೂರ ಸೇರಿ ಹಲವಡೆ ಭೂಕಂಪನ, ಗ್ರಾಮಸ್ಥರಲ್ಲಿ ಆತಂಕ

ಭೂಕಂಪನದಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಮನೆಗಳಿಂದ ಹೊರಬಂದಿದ್ದಾರೆ. ಈ ಕುರಿತು ಮಾಹಿತಿ ಅರಿತ ಕಮಲಾಪುರ ತಾಲ್ಲೂಕು ತಹಶೀಲ್ದಾರ್ ಅವರು ಮಳಸಾಪೂರ ಮತ್ತು ಪಟವಾದ ಗ್ರಾಮಕ್ಕೆ ಭೇಟಿ ನೀಡಿ. ಸಾರ್ವಜನಿಕರಿಗೆ ಭೂಕಂಪನ ಕುರಿತು ವಿಚಾರಿಸಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳಿಸಿದ್ದಾರೆ.
 Earthquake
ಭೂಕಂಪನ (ಸಾಂದರ್ಭಿಕ ಚಿತ್ರ)online desk
Updated on

ಕಲಬುರಗಿ: ಕಲಬುರಗಿ ಜಿಲ್ಲೆಯ ಮರಗುತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಸಾಪೂರ ಗ್ರಾಮ ಸೇರಿದಂತೆ ಹಲವೆಡೆ ಶನಿವಾರ ಭೂ ಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆ ದಾಖಲಾಗಿದೆ.

ಭೂಕಂಪನದಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಮನೆಗಳಿಂದ ಹೊರಬಂದಿದ್ದಾರೆ. ಈ ಕುರಿತು ಮಾಹಿತಿ ಅರಿತ ಕಮಲಾಪುರ ತಾಲ್ಲೂಕು ತಹಶೀಲ್ದಾರ್ ಅವರು ಮಳಸಾಪೂರ ಮತ್ತು ಪಟವಾದ ಗ್ರಾಮಕ್ಕೆ ಭೇಟಿ ನೀಡಿ. ಸಾರ್ವಜನಿಕರಿಗೆ ಭೂಕಂಪನ ಕುರಿತು ವಿಚಾರಿಸಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳಿಸಿದ್ದಾರೆ.

ಭೂಕಂಪನದ ತೀವ್ರತೆ ಕಡಿಮೆಯಾಗಿದ್ದು, ಭೂಕಂಪದ ಕೇಂದ್ರ ಬಿಂದುವಿನಿಂದ 30-40 ಕಿ.ಮೀ. ಗರಿಷ್ಠ ರೇಡಿಯಲ್ ದೂರದವರೆಗೆ ಕಂಪನದ ಅನುಭವವಾಗಬಹುದು.

ಈ ರೀತಿಯ ಭೂಕಂಪವು ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ, ಆದರೂ ಸ್ಥಳೀಯವಾಗಿ ಸ್ವಲ್ಪ ಕಂಪನ ಕಂಡುಬರಬಹುದು. ಭೂಕಂಪದ ಕೇಂದ್ರ ಬಿಂದುವು ಭೂಕಂಪ ವಲಯ II ರ ಆಳದಲ್ಲಿ ಕಂಡು ಬರುತ್ತದೆ, ಅಲ್ಲಿ ಭೂಕಂಪದಿಂದ ಹಾನಿಯಾಗುವ ಸಾಧ್ಯತೆ ತುಂಬಾ ಕಡಿಮೆ ಎಂದು ಎಂದು ಮೂಲಗಳು ತಿಳಿಸಿವೆ.

 Earthquake
ಬೀದರ್:ಲಘು ಭೂ ಕಂಪನ, ಚಳಿಯನ್ನು ಲೆಕ್ಕಿಸದೆ ಇಡೀ ರಾತ್ರಿ ಮನೆಯಿಂದ ಹೊರಗೆ ಕಾಲಕಳೆದ ಗ್ರಾಮಸ್ಥರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com