

ಬೆಂಗಳೂರು: 12 ವಸತಿ ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನಕಲಿ ಮಾಡಿ ಭೂಮಾಲೀಕರಿಗೆ ಹಲವಾರು ಕೋಟಿ ರೂಪಾಯಿಗಳನ್ನು ವಂಚಿಸಿದ ಆರೋಪದ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಸಬ್-ರಿಜಿಸ್ಟ್ರಾರ್ ಮತ್ತು ರಿಯಲ್ ಎಸ್ಟೇಟ್ ಸಂಸ್ಥೆ ಮಾಲೀಕನನ್ನು ಬಂಧಿಸಿದ್ದಾರೆ.
ಬಿಟಿಎಂ ಲೇಔಟ್ನ ಹಿಂದಿನ ಉಪ ನೋಂದಣಾಧಿಕಾರಿ ರೂಪಾ (40) ಮತ್ತು ಚಂದಾಪುರ ನಿವಾಸಿಯಾದ ನವಯುಗ ಪ್ರಾಪರ್ಟೀಸ್ ಕಂಪನಿಯ ಏಜೆಂಟ್ ನವೀನ್ ಕುಮಾರ್ (36) ಬಂಧಿತರು.
ಪರಪ್ಪನ ಅಗ್ರಹಾರ ನಿವಾಸಿಯಾಗಿರುವ ದೂರುದಾರರು 2019 ರಲ್ಲಿ ನವೀನ್ ಮತ್ತು ಇತರರೊಂದಿಗೆ ಮೌಖಿಕ ಒಪ್ಪಂದ ಮಾಡಿಕೊಂಡಿದ್ದರು, ಅಲ್ಲಿ 107 ಸೈಟ್ ನಿರ್ಮಾಣ ಮಾಡಲಾಗಿತ್ತು, ರಿಯಲ್ ಎಸ್ಟೇಟ್ ಎಜೆಂಟ್ ಇನ್ನೊಬ್ಬ ವ್ಯಕ್ತಿಯೊಂದಿಗೆ ಶಾಮೀಲಾಗಿ, ನಿವೇಶನಗಳನ್ನು ಮಾರಾಟ ಮಾಡಲು ತನಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿಕೊಂಡು ದಾರಿ ತಪ್ಪಿಸಿದ್ದಾನೆ ಎಂದು ಆರೋಪಿಸಲಾಗಿದೆ.
ದೂರುದಾರರನ್ನು ಸಬ್-ರಿಜಿಸ್ಟ್ರಾರ್ ಕಚೇರಿಗೆ ಕರೆದೊಯ್ದು, ಅವರ ಸಮ್ಮುಖದಲ್ಲಿ ಒಂದು ನಿವೇಶನವನ್ನು ರಿಜಿಸ್ಟರ್ ಮಾಡಿಸುವ ನೆಪದಲ್ಲಿ 12 ನಿವೇಶನಗಳಿಗೆ ನಕಲಿ ಮಾರಾಟ ಪತ್ರಗಳನ್ನು ಸೃಷ್ಟಿಸಿ, ಖರೀದಿದಾರರಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.
ತಮ್ಮ ಅರಿವಿಲ್ಲದೆ ಅಥವಾ ಒಪ್ಪಿಗೆಯಿಲ್ಲದೆ ಬಹು ನಿವೇಶನಗಳನ್ನು ಮಾರಾಟ ಮಾಡಲಾಗಿದೆ ಎಂದು ದೂರುದಾರ ವ್ಯಕ್ತಿಗೆ ವಂಚನೆ ಬಗ್ಗೆ ತಿಳಿದಿದೆ. ಆರಂಭದಲ್ಲಿ ಆಗಸ್ಟ್ 2022 ರಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಮತ್ತು ನಂತರ ಜನವರಿ 2024 ರಲ್ಲಿ ಸಿಸಿಬಿಯ ಸಂಘಟಿತ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಯಿತು. ತನಿಖೆಯ ನಂತರ, ನವೆಂಬರ್ ಎರಡನೇ ವಾರದಲ್ಲಿ ಸಿಸಿಬಿ ಈ ಇಬ್ಬರನ್ನು ಬಂಧಿಸಿತು.
Advertisement