Bengaluru's Diwali: 'ಬೆಳಕಿನ ಚಿತ್ತಾರ'ದಲ್ಲಿ ಝಗಮಗಿಸಿದ ಬೆಂಗಳೂರು; ಸ್ಟನ್ನಿಂಗ್ ವಿಡಿಯೋ; ಬೆರಗಾದ ನಿರ್ಮಲಾ ಸೀತಾರಾಮನ್!

ಈ ವೀಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಮಾತ್ರವಲ್ಲದೇ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಆಕರ್ಷಿಸಿದೆ.
Bengaluru
ಬೆಂಗಳೂರು
Updated on

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ 'ಬೆಳಕಿನ ಹಬ್ಬ' ದೀಪಾವಳಿ ಆಚರಣೆಯ ಕುರಿತು ಬೆಂಗಳೂರಿನ ಶ್ರೀಹರಿ ಕಾರನಾಥ್ ಸೆರೆಹಿಡಿದಿರುವ ಅತ್ಯಾಕರ್ಷಕ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ.

ಕರ್ನಾಟಕ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ DGCA-ಪ್ರಮಾಣೀಕೃತ ಡ್ರೋನ್ ಪೈಲಟ್ ಆಗಿರುವ ಕಾರನಾಥ್, ಪಟಾಕಿಗಳಿಂದ ಆಗಸದಲ್ಲಿ ಮೂಡಿದ ಚಿತ್ತಾರಗಳು, ವಿದ್ಯುತ್ ದೀಪಗಳಿಂದ ಝಗಮಗಿಸಿದ ಬೆಂಗಳೂರನ್ನು ಡ್ರೋನ್ ಹೈಪರ್‌ಲ್ಯಾಪ್ಸ್ (Drone Hyperlapse)ಯಿಂದ ಸೆರೆ ಹಿಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ವೀಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಮಾತ್ರವಲ್ಲದೇ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಆಕರ್ಷಿಸಿದೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ನಿರ್ಮಲಾ ಸೀತಾರಾಮನ್, ಇದು ಅತ್ಯಾದ್ಬುತವಾಗಿ ಮೂಡಿಬಂದಿದೆ. ಕ್ಯಾನ್ವಾಸ್ ಕಲಾತ್ಮಕವಾಗಿದೆ. ಉತ್ತಮ ಪ್ರಯತ್ನ" ಎಂದು ಸೀತಾರಾಮನ್ ಬರೆದುಕೊಂಡಿದ್ದಾರೆ.

Bengaluru
ನಂಬಿಕೆ ಇರುವವರಿಗೆ ಮಾತ್ರ ದೀಪಾವಳಿ ಶುಭಾಶಯ: ಮತ್ತೆ ವಿವಾದ ಎಬ್ಬಿಸಿದ ಉದಯನಿಧಿ ಸ್ಟಾಲಿನ್; ಬಿಜೆಪಿ ಕಿಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com