ಕನ್ನಡಿಗರ ಮನಗೆದ್ದ ಪ್ರತಿಭಾನ್ವಿತ ಬರಹಗಾರ S. L. Bhyrappa

ಭೈರಪ್ಪ ಅವರ ಮೊದಲ ಕಾದಂಬರಿ, ಗತಜನ್ಮ ಮತ್ತೆರಡು ಕತೆಗಳು 1955 ರಲ್ಲಿ ಪ್ರಕಟವಾಯಿತು.
A younger SL Bhyrappa with his wife, Saraswathi, in this undated picture
ಎಸ್ ಎಲ್ ಭೈರಪ್ಪನವರು ಪತ್ನಿ ಸರಸ್ವತಿ ಜೊತೆ ಯೌವ್ವನದ ಸಮಯದಲ್ಲಿ
Updated on

ಬೆಂಗಳೂರು: ಎಸ್.ಎಲ್. ಭೈರಪ್ಪ ಎಂದೇ ಜನಪ್ರಿಯರಾಗಿರುವ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ, ಕರ್ನಾಟಕದ ಅತ್ಯಂತ ಪ್ರತಿಭಾನ್ವಿತ ಮತ್ತು ಗೌರವಾನ್ವಿತ ಬರಹಗಾರರಲ್ಲಿ ಒಬ್ಬರು. 60 ವರ್ಷಗಳ ವೃತ್ತಿಜೀವನದಲ್ಲಿ, ಅವರು 27 ಗದ್ಯ ಕೃತಿಗಳನ್ನು ರಚಿಸಿದರು, ಹೆಚ್ಚಾಗಿ ಕಾದಂಬರಿಗಳಾಗಿವೆ.

1934 ರಲ್ಲಿ ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದ ಭೈರಪ್ಪ, ಬುಬೊನಿಕ್ ಪ್ಲೇಗ್‌ನಿಂದಾಗಿ ತನ್ನ ತಾಯಿ ಮತ್ತು ಒಡಹುಟ್ಟಿದವರನ್ನು ಚಿಕ್ಕ ಬಾಲಕನಾಗಿದ್ದಾಗಲೇ ಕಳೆದುಕೊಂಡರು. ಮನೆಯಲ್ಲಿ ಬಡತನ, ತಮ್ಮ ಶಿಕ್ಷಣಕ್ಕೆ ಹಣಕಾಸು ಒದಗಿಸಲು ಚಿಕ್ಕ ವಯಸ್ಸಿನಲ್ಲಿಯೇ ಉದ್ಯೋಗದ ದಾರಿ ಹಿಡಿಯಬೇಕಾಯಿತು, ಆರಂಭ ದಿನಗಳಲ್ಲಿ ಮುಂಬೈನಲ್ಲಿ ಆಧ್ಯಾತ್ಮಿಕ ಅಲೆಮಾರಿಯ ಜೀವನವನ್ನು ನಡೆಸಿದ ನಂತರ ಅವರು ಮೈಸೂರಿನಲ್ಲಿ ಶಿಕ್ಷಣವನ್ನು ಮುಗಿಸಿದರು.

A younger SL Bhyrappa with his wife, Saraswathi, in this undated picture
ಯುವಜನತೆಯಲ್ಲಿ ಓದಿನ ಹುಚ್ಚು ಹಿಡಿಸಿದ್ದ ಸಾಹಿತಿ ದಿಗ್ಗಜ SL Bhyrappa: ಹಲವು ಕೃತಿಗಳು ದಾಖಲೆ !

ಭೈರಪ್ಪನವರ ಮೊದಲ ಕಾದಂಬರಿ

ಭೈರಪ್ಪ ಅವರ ಮೊದಲ ಕಾದಂಬರಿ, ಗತಜನ್ಮ ಮತ್ತೆರಡು ಕತೆಗಳು 1955 ರಲ್ಲಿ ಪ್ರಕಟವಾಯಿತು. ಅಂದಿನಿಂದ ಅವರು ಸಾಹಿತ್ಯಿಕ ದೈತ್ಯ ಆಗಿ ವಿಕಸನಗೊಂಡ ನಂತರ ಅವರ ಕಾದಂಬರಿಗಳನ್ನು ಕನ್ನಡದಿಂದ ಹಲವಾರು ಭಾರತೀಯ ಪ್ರಾದೇಶಿಕ ಭಾಷೆಗಳಿಗೆ, ಇಂಗ್ಲಿಷ್ ಮತ್ತು ರಷ್ಯನ್‌ನಂತಹ ವಿದೇಶಿ ಭಾಷೆಗಳಿಗೆ ಅನುವಾದಿಸಲಾಗಿದೆ. ಕೆಲವು ಹಿಂದಿ ಮತ್ತು ಮರಾಠಿ ಅನುವಾದಗಳು ಪ್ರಾದೇಶಿಕವಾಗಿ ಹೆಚ್ಚು ಮಾರಾಟಗೊಂಡ ಪುಸ್ತಕಗಳಾಗಿರುವುದರಿಂದ, ಕರ್ನಾಟಕವನ್ನು ಮೀರಿ ಭೈರಪ್ಪನವರನ್ನು ಸಾಹಿತ್ಯವಲಯದಲ್ಲಿ ಮನೆಮಾತಾಗಿಸಿದೆ.

ನಂತರದ ದಿನಗಳಲ್ಲಿ ಅವರ ಜನಪ್ರಿಯತೆಯು ಉತ್ತುಂಗಕ್ಕೇರಿತು, ಅವರ ಕಾದಂಬರಿ 'ಆವರಣ' ಪುಸ್ತಕ ಅಧಿಕೃತವಾಗಿ ಬಿಡುಗಡೆಯಾಗುವ ಮೊದಲೇ ಅದರ ಪ್ರತಿಗಳು ಮಾರಾಟವಾದವು. ಅವರ ಪ್ರಕಟಿತ ಏಕೈಕ ಸಣ್ಣ ಕಥೆ 'ಅವ್ವ' ಕನ್ನಡ ನಿಯತಕಾಲಿಕೆಯಲ್ಲಿ ಪ್ರಕಟವಾಯಿತು.

ಅನುವಾದಗಳಲ್ಲದೆ, ವಂಶ ವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಮತ್ತು ನಾಯಿ ನೆರಳು ಮುಂತಾದ ಕೃತಿಗಳನ್ನು ಚಲನಚಿತ್ರಗಳಾಗಿ ಮಾಡಲಾಗಿದೆ. 1996 ರಲ್ಲಿ ಪ್ರಕಟವಾದ ಅವರ ಆತ್ಮಚರಿತ್ರೆಯ ಕೃತಿಯಾದ ಭಿತ್ತಿ ಇಂಗ್ಲಿಷ್ ಸೇರಿದಂತೆ ವಿವಿಧ ಅನುವಾದಗಳಲ್ಲಿ ಲಭ್ಯವಿದೆ.

A younger SL Bhyrappa with his wife, Saraswathi, in this undated picture
S L Bhyrappa: ಕಾದಂಬರಿ ಬರೆಯುವ ಮುನ್ನ ತಯಾರಿ ಹೇಗಿತ್ತು?: ಭೈರಪ್ಪನವರ ಸಂಶೋಧನೆ, ಅಧ್ಯಯನ, ಸ್ಥಳಗಳಿಗೆ ಭೇಟಿ....

ಪ್ರಶಸ್ತಿ, ಸನ್ಮಾನಗಳು

ಲೇಖಕರ ಅನೇಕ ಪುರಸ್ಕಾರಗಳಲ್ಲಿ ಪ್ರತಿಷ್ಠಿತ ಪದ್ಮಭೂಷಣ (2023), ಮತ್ತು ಪದ್ಮಶ್ರೀ (2016) ಸೇರಿವೆ. ಅವರಿಗೆ 1975 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 2015 ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಸಹ ನೀಡಲಾಯಿತು. ರಾಜ್ಯ ಸರ್ಕಾರವು 1966 ರಲ್ಲಿ ಅವರಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಿತು. 2011 ರಲ್ಲಿ ಅವರ ಮಂದ್ರ ಕಾದಂಬರಿಗಾಗಿ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಸಹ ಅವರಿಗೆ ನೀಡಲಾಯಿತು. ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕದ ಕೇಂದ್ರ ವಿಶ್ವವಿದ್ಯಾಲಯ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ.

ಹಲವು ಹುದ್ದೆಗಳು

ಸಾಹಿತ್ಯಿಕ ವೃತ್ತಿಜೀವನದ ಮೊದಲು, ಭೈರಪ್ಪನವರು ರೈಲ್ವೆ ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದರು

ಅವರು ಮುಂಬೈನಲ್ಲಿ ಕೆಲವು ತಪಸ್ವಿಗಳನ್ನು ಭೇಟಿಯಾಗಿ ಅವರಿಂದ ಪ್ರಭಾವಿತರಾಗಿ ಆಧ್ಯಾತ್ಮಿಕ ಅಲೆಮಾರಿಯ ಜೀವನವನ್ನು ನಡೆಸಿದ್ದರು.

ಹಲವಾರು ಕಾದಂಬರಿಗಳನ್ನು ಬರೆದಿದ್ದರೂ, ಭೈರಪ್ಪ ಅವರು ಬರೆದ ಒಂದೇ ಒಂದು ಸಣ್ಣ ಕಥೆ- 'ಅವ್ವ'

ಅವರ ಕಾದಂಬರಿಗಳಾದ ದಾಟು ಮತ್ತು ಗೃಹಭಂಗವನ್ನು ಭಾರತದ 14 ನಿರ್ದಿಷ್ಟ ಭಾಷೆಗಳಿಗೆ ಅನುವಾದಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com