ಸದ್ಯಕ್ಕೆ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚುವ ಕೆಲಸ, ಶಾಶ್ವತ ಪರಿಹಾರ ಇನ್ನೂ ದೂರ....

ವಲಯ ಆಯುಕ್ತರು ವಲಯಗಳಿಗೆ ನಿರಂತರ ಡಾಮರು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು 5 ಕೋಟಿ ರೂ. ಮೌಲ್ಯದ ಬ್ಯಾಚ್-ಮಿಶ್ರ ಸ್ಥಾವರಗಳೊಂದಿಗೆ ತಿಳುವಳಿಕೆ ಪತ್ರಗಳಿಗೆ (MoU) ಸಹಿ ಹಾಕಿದ್ದಾರೆ.
potholes in Bengaluru
ಬೆಂಗಳೂರಿನ ರಸ್ತೆ ಗುಂಡಿ
Updated on

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವಲಯ ಆಯುಕ್ತರು, ನಮ್ಮ ತಕ್ಷಣದ ಕಾರ್ಯಸೂಚಿ ಬೆಂಗಳೂರಿನ ರಸ್ತೆಗುಂಡಿಗಳನ್ನು ಸರಿಪಡಿಸುವುದು ಎಂದು ಹೇಳಿದ್ದಾರೆ. ರಸ್ತೆಗಳ ದುರಸ್ತಿ ಅಥವಾ ರಿಲೇಯಿಂಗ್ ನ್ನು ನವೆಂಬರ್ ನಂತರ ಮಾತ್ರ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ವಲಯ ಆಯುಕ್ತರು ವಲಯಗಳಿಗೆ ನಿರಂತರ ಡಾಮರು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು 5 ಕೋಟಿ ರೂ. ಮೌಲ್ಯದ ಬ್ಯಾಚ್-ಮಿಶ್ರ ಸ್ಥಾವರಗಳೊಂದಿಗೆ ತಿಳುವಳಿಕೆ ಪತ್ರಗಳಿಗೆ (MoU) ಸಹಿ ಹಾಕಿದ್ದಾರೆ. ಈ ಹಿಂದೆ ಕರೆಯಲಾಗಿದ್ದ ವೈಟ್ ಟಾಪಿಂಗ್ ಟೆಂಡರ್‌ಗಳನ್ನು ಸಹ ಗುಂಡಿಗಳನ್ನು ತುಂಬಲು ಬಳಸಲಾಗುತ್ತಿದೆ.

ಉತ್ತರ ವಲಯದ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್, ಉತ್ತರ ಬೆಂಗಳೂರಿನ ಬ್ಯಾಚ್-ಮಿಶ್ರ ಸ್ಥಾವರ ಗುತ್ತಿಗೆದಾರರೊಂದಿಗೆ 2.5 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಹೇಳಿದರು. ಇದಕ್ಕಾಗಿ ಹೆಚ್ಚುವರಿಯಾಗಿ 2.5 ಕೋಟಿ ರೂಪಾಯಿಗಳಿಗೆ ಇತರ ಆಯುಕ್ತರ ಪರವಾಗಿ ಒಪ್ಪಂದ ಮಾಡಿಕೊಂಡಿದ್ದೇನೆ. ಗುತ್ತಿಗೆದಾರರಿಗೆ ಗುಂಡಿಗಳನ್ನು ಸರಿಪಡಿಸಲು ತಿಳಿಸಲಾಗಿದೆ. ಇತರ ಸರ್ಕಾರಿ ಇಲಾಖೆಗಳಿಗೆ ರಸ್ತೆಗಳನ್ನು ದುರಸ್ತಿ ಮಾಡಲು ತಿಳಿಸಲಾಗಿದೆ ಎಂದರು.

potholes in Bengaluru
ಬಿಜೆಪಿ ಅವಧಿಯಲ್ಲಿ ಬೆಂಗಳೂರಿನಲ್ಲಿ ಸಣ್ಣ ಪಿಲ್ಲರ್ ಕೂಡ ಹಾಕಿಲ್ಲ; ಒಂದೇ ಒಂದು ಮೇಲ್ಸೇತುವೆ ಮಾಡಿಲ್ಲ: ಡಿ.ಕೆ ಶಿವಕುಮಾರ್ ತಿರುಗೇಟು

ವೈಟ್ ಟಾಪಿಂಗ್ ರಸ್ತೆಗಳನ್ನು ನಿರ್ವಹಿಸುವ ಏಜೆನ್ಸಿಗಳಿಗೆ ರಸ್ತೆಗಳನ್ನು ಸರಿಪಡಿಸಲು ತಿಳಿಸಲಾಗಿದೆ ಎಂದು ಕೇಂದ್ರ ವಲಯ ಆಯುಕ್ತ ರಾಜೇಂದ್ರ ಚೋಳನ್ ಹೇಳಿದರು. ಕಪ್ಪು ಟಾಪಿಂಗ್ ರಸ್ತೆಗಳಿಗಾಗಿ ಜಿಬಿಎಗೆ ಹಂಚಿಕೆ ಮಾಡಲಾದ 685 ಕೋಟಿ ರೂಪಾಯಿಗಳನ್ನು ಐದು ನಿಗಮಗಳ ನಡುವೆ ವಿಂಗಡಿಸಲಾಗಿದೆ.

ಗುಂಡಿಗಳನ್ನು ತುಂಬಲು ನಾವು ಬ್ಯಾಚ್ ಮಿಕ್ಸ್ ಪ್ಲಾಂಟ್‌ಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಗುಂಡಿಗಳನ್ನು ತುಂಬದಿದ್ದರೆ, ಪಾವತಿಗಳನ್ನು ತೆರವುಗೊಳಿಸುವಾಗ ಹಣವನ್ನು ಕಡಿತಗೊಳಿಸಲಾಗುತ್ತದೆ ಎಂದು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಹೆಚ್ಚುವರಿಯಾಗಿ, ಪ್ರತಿ ನಿಗಮಕ್ಕೆ 25 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

potholes in Bengaluru
ಗುಂಡಿ ಮುಚ್ಚುವ ಕೆಲಸ ಪ್ರಗತಿಯಲ್ಲಿ; ಮುಖ್ಯಮಂತ್ರಿಗಳಿಂದ 750 ಕೋಟಿ ರೂ ಅನುದಾನ; ಕೇಂದ್ರ ಸರಕಾರ ಯಾವುದೇ ನೆರವು ಕೊಟ್ಟಿಲ್ಲ: DKS

ಪಶ್ಚಿಮ ವಲಯದ ಆಯುಕ್ತ ರಾಜೇಂದ್ರ ಕೆ.ವಿ., ಪ್ರತಿ ವಾರ್ಡ್‌ಗೆ ನೀಡಲಾಗುವ 25 ಲಕ್ಷ ರೂಪಾಯಿಗಳನ್ನು ಗುಂಡಿಗಳನ್ನು ತುಂಬಲು ಬಳಸಲಾಗುತ್ತಿದೆ ಎಂದು ಹೇಳಿದರು. ಗುಂಡಿಗಳನ್ನು ಮುಚ್ಚಲು, ಸಾಮಗ್ರಿಗಳು ಮತ್ತು ಕಾರ್ಮಿಕರನ್ನು ಪೂರೈಸಲು ನಾವು ಮತ್ತೊಂದು ಏಜೆನ್ಸಿಯನ್ನು ನೇಮಿಸಿಕೊಂಡಿದ್ದೇವೆ. ಗುಂಡಿಗಳನ್ನು ಮುಚ್ಚಲು ಅಲ್ಪಾವಧಿಯ ಟೆಂಡರ್‌ಗಳನ್ನು ಸಹ ಕರೆಯಲಾಗಿದೆ. ರಸ್ತೆ ದುರಸ್ತಿ ಕಾರ್ಯಗಳನ್ನು ನಂತರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪೂರ್ವ ನಗರ ನಿಗಮದ ಅಭಿವೃದ್ಧಿ ವಿಭಾಗದ ಹೆಚ್ಚುವರಿ ಆಯುಕ್ತೆ ಲೋಖಂಡ್ರೆ ಸ್ನೇಹಲ್ ಸುಧಾಕರ್ ಅವರು ಬೇರೆ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ ಎಂದು ಹೇಳಿದರು. ಗುಂಡಿಗಳನ್ನು ತುಂಬಿದ ನಂತರವೇ ಪಾವತಿ ಮಾಡಲಾಗುವುದು. ಆದ್ದರಿಂದ ನಿಗದಿತ ಗಡುವಿನೊಳಗೆ ಕೆಲಸದ ಗುಣಮಟ್ಟದ ಅನುಷ್ಠಾನದತ್ತ ಗಮನ ಹರಿಸಲಾಗುವುದು ಎಂದು ಗುತ್ತಿಗೆದಾರರಿಗೆ ತಿಳಿಸಲಾಗಿದೆ.

ದಕ್ಷಿಣ ವಲಯ ಆಯುಕ್ತ ರಮೇಶ್ ಕೆ.ಎನ್. ಪ್ರತಿಕ್ರಿಯೆಗೆ ಲಭ್ಯವಿರಲಿಲ್ಲ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬಕು, ರಸ್ತೆಗಳನ್ನು ದುರಸ್ತಿ ಮಾಡುವುದು ಆದ್ಯತೆಯಲ್ಲ. ಪ್ಯಾಚ್ ಕೆಲಸ ಮತ್ತು ಗುಂಡಿಗಳನ್ನು ತುಂಬುವುದು. ಮಳೆ ಕಡಿಮೆಯಾದ ಬಳಿಕ ನವೆಂಬರ್ ನಂತರ ದುರಸ್ತಿ ಅಥವಾ ರಿಲೇಯಿಂಗ್ ಮಾಡಲಾಗುತ್ತದೆ.. ಸರ್ಕಾರವು ಪ್ರಸ್ತುತ ತ್ವರಿತ ಪರಿಹಾರವನ್ನು ಬಯಸುತ್ತಿದೆ. ರಸ್ತೆಗಳನ್ನು ರಿಲೇಯಿಂಗ್ ಮಾಡುವುದು ದೀರ್ಘಾವಧಿಯ ಕೆಲಸವಾಗಿದ್ದು, ರಸ್ತೆಗಳು ತೇವ ಮತ್ತು ಭಾರೀ ಸಂಚಾರ ದಟ್ಟಣೆಯಿಂದ ಕೂಡಿರುವುದರಿಂದ ಅದನ್ನು ತಕ್ಷಣ ಮಾಡಲು ಸಾಧ್ಯವಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com