ಬೆಂಗಳೂರು: ವ್ಯಕ್ತಿ ಕೊಂದು ಚೀಲದಲ್ಲಿ ಮೃತದೇಹ ತುಂಬಿ ಬಿಸಾಡಿದ ದುರುಳರು..!

ಕೊಲೆಯಾದ ವ್ಯಕ್ತಿ 30-35 ವರ್ಷ ವಯೋಮಾನದವನಾಗಿದ್ದು, ಬೇರೆಡೆ ಹತ್ಯೆಗೈದು ಬಳಿಕ ಮೃತದೇಹ ತಂದು ಬಿಸಾಡಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
crime, file photo
ಅಪರಾಧonline desk
Updated on

ಬೆಂಗಳೂರು: ವ್ಯಕ್ತಿಯೊಬ್ಬನ್ನು ಹತ್ಯೆಗೈದು ಬಳಿಕ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ ಖಾಲಿ ನಿವೇಶನದಲ್ಲಿ ಬಿಸಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆಯೊಂದು ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.

ಕೊಲೆಯಾದ ವ್ಯಕ್ತಿ 30-35 ವರ್ಷ ವಯೋಮಾನದವನಾಗಿದ್ದು, ಬೇರೆಡೆ ಹತ್ಯೆಗೈದು ಬಳಿಕ ಮೃತದೇಹ ತಂದು ಬಿಸಾಡಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

ಮೂರು ದಿನಗಳ ಹಿಂದೆ ಆ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ವ್ಯಕ್ತಿಯನ್ನು ಹತ್ಯೆ ಮಾಡಿರುವ ದುಷ್ಕರ್ಮಿಗಳು ಶವವನ್ನು ಚೀಲದಲ್ಲಿ ತುಂಬಿ ಉದ್ಯಾನವನದಲ್ಲಿ ಎಸೆದಿದ್ದಾರೆ.

ಬೆಳಿಗ್ಗೆ 7.30 ರ ಸುಮಾರಿಗೆ ಉದ್ಯಾನವನದ ಬೇಲಿಯಿಂದ ಬೀದಿ ನಾಯಿಗಳು ಗೋಣಿ ಚೀಲವನ್ನು ಎಳೆಯುತ್ತಿರುವುದನ್ನು ವಾಕಿಂಗ್‌ಗೆ ಬಂದಿದ್ದ ಜನರು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಕೂಡಲೇ ಪೊಲೀಸರಿಗೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಿಎನ್‌ಎಸ್ ಸೆಕ್ಷನ್ 103 ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ.

crime, file photo
ಯೋಗೇಶ್ ಗೌಡ ಹತ್ಯೆ ಪ್ರಕರಣ: ಕೆಲವು ಪೊಲೀಸರು ಸುಳ್ಳು ಸಾಕ್ಷ್ಯ ನೀಡಿದ್ದಾರೆ; ವಿಶೇಷ ಕೋರ್ಟ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com