ದಾವಣಗೆರೆ-ಹರಿಹರ ಅವಳಿ ನಗರ ಅಭಿವೃದ್ಧಿಗೆ 'ಮಾಸ್ಟರ್ ಪ್ಲಾನ್ 2041' ಕ್ಕೆ ಸರ್ಕಾರದ ಅನುಮೋದನೆ!

ವಿಧಾನಸಭೆಯಲ್ಲಿಂದು ಹರಿಹರ ಶಾಸಕ ಬಿ.ಪಿ. ಹರೀಶ್ ಅವರ ಪ್ರಶ್ನೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ 1961ರ ಅಡಿಯಲ್ಲಿ ಈ ಅನುಮೋದನೆಯನ್ನು ನೀಡಲಾಗಿದೆ.
Yathindra Siddaramaiah
ಯತೀಂದ್ರ ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (DHUDA) ಸಿದ್ಧಪಡಿಸಿರುವ ಪರಿಷ್ಕೃತ ಮಾಸ್ಟರ್ ಪ್ಲಾನ್ 2041ಕ್ಕೆ ನಗರಾಭಿವೃದ್ಧಿ ಇಲಾಖೆಯು ಅನುಮೋದನೆ ನೀಡಿದೆ. ಇದರೊಂದಿಗೆ ಮುಂದಿನ 15 ವರ್ಷಗಳಲ್ಲಿ ಈ ಅವಳಿ ನಗರ ಪ್ರದೇಶದ ಯೋಜಿತ ಅಭಿವೃದ್ಧಿಗೆ ದಾರಿ ಸುಗಮವಾಗಿದೆ.

ವಿಧಾನಸಭೆಯಲ್ಲಿಂದು ಹರಿಹರ ಶಾಸಕ ಬಿ.ಪಿ. ಹರೀಶ್ ಅವರ ಪ್ರಶ್ನೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ 1961ರ ಅಡಿಯಲ್ಲಿ ಈ ಅನುಮೋದನೆಯನ್ನು ನೀಡಲಾಗಿದೆ.

DHUDA ಸಲ್ಲಿಸಿದ ಪ್ರಸ್ತಾವನೆಗಳು ಮತ್ತು ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ನಿರ್ದೇಶನಾಲಯದ ಶಿಫಾರಸುಗಳ ಆಧಾರದ ಮೇಲೆ ಆಗಸ್ಟ್ 3 ರಂದು ಈ ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿಸಿದರು.

2011ರ ಜನಗಣತಿಯಲ್ಲಿ ದಾಖಲಾದ 5,47,943 ಜನಸಂಖ್ಯೆಗೆ ಹೋಲಿಸಿದರೆ, 2041ರ ವೇಳೆಗೆ ಈ ಯೋಜನಾ ಪ್ರದೇಶದ ಜನಸಂಖ್ಯೆಯು 14 ಲಕ್ಷವನ್ನು ತಲುಪಲಿದೆ ಎಂದು ಮಹಾ ಯೋಜನೆಯು ಅಂದಾಜಿಸಿದೆ. ಒಟ್ಟು 27,212.23 ಹೆಕ್ಟೇರ್ ವಿಸ್ತೀರ್ಣದ ಯೋಜನಾ ಪ್ರದೇಶದಲ್ಲಿ, ಸುಮಾರು 15,866.13 ಹೆಕ್ಟೇರ್ ಪ್ರದೇಶವನ್ನು ನಗರೀಕರಣಕ್ಕಾಗಿ ಮೀಸಲಿಡಲಾಗಿದೆ. ಈ ಮಹಾ ಯೋಜನೆಗೆ ಆಗಸ್ಟ್ 3 ರಂದು ಅನುಮೋದನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಪರಿಷ್ಕೃತ ಅನುಮೋದನೆಯ ಪ್ರಕಾರ, 15,866.13 ಹೆಕ್ಟೇರ್ ಪ್ರದೇಶದಲ್ಲಿ ನಗರೀಕರಣ ನಡೆಯಲಿದೆ. ಇದರಲ್ಲಿ 8,901.73 ಹೆಕ್ಟೇರ್ ವಸತಿ ಪ್ರದೇಶ ಅಭಿವೃದ್ಧಿಗೆ, 729.60 ಹೆಕ್ಟೇರ್ ವಾಣಿಜ್ಯ ಉದ್ದೇಶಗಳಿಗೆ, 770.61 ಹೆಕ್ಟೇರ್ ಕೈಗಾರಿಕೆಗಳಿಗೆ, 970.88 ಹೆಕ್ಟೇರ್ ASI ಸ್ಮಾರಕ ಮತ್ತು ಸಾರ್ವಜನಿಕ ಉಪಯುಕ್ತತೆಗಳಿಗೆ, 1791.93 ಹೆಕ್ಟೇರ್ ಉದ್ಯಾನವನ ಮತ್ತು ಕ್ರೀಡಾಂಗಣಗಳಿಗೆ, 119.40 ಹೆಕ್ಟೇರ್ ಸಾರ್ವಜನಿಕ ಸೌಕರ್ಯಗಳಿಗೆ ಹಾಗೂ 2,581.98 ಹೆಕ್ಟೇರ್ ಸಾರಿಗೆ ಮತ್ತು ಸಂವಹನ ಉದ್ದೇಶಗಳಿಗೆ ಮೀಸಲಿಡಲಾಗಿದೆ ಎಂದು ಅವರು ವಿವರಿಸಿದರು.

ಈ ಯೋಜನೆಯು ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಅಭಿವೃದ್ಧಿಯ ಜೊತೆಗೆ ಸಾರ್ವಜನಿಕ ಹಾಗೂ ಅರೆ-ಸಾರ್ವಜನಿಕ ಸೌಲಭ್ಯಗಳು, ಉದ್ಯಾನವನಗಳು ಮತ್ತು ಪುಟ್ ಪಾತ್, ರಸ್ತೆಗಳು ಮತ್ತಿತರ ಮೂಲಸೌಕರ್ಯಗಳಿಗಾಗಿ ಅವಕಾಶ ಕಲ್ಪಿಸುತ್ತದೆ. ಸಾಂಸ್ಕೃತಿಕ ಪರಂಪರೆ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ಸ್ಮಾರಕಗಳ ಸಂರಕ್ಷಣೆಗೂ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸರ್ಕಾರದ ಆದೇಶದ ಪ್ರಕಾರ, 'ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ'ಯ ನಿಬಂಧನೆಗಳಿಗೆ ಅನುಗುಣವಾಗಿ ಈ ಮಹಾ ಯೋಜನೆಯನ್ನು (Master Plan) ಪರಿಶೀಲಿಸಲಾಗಿದೆ ಮತ್ತು ಕಾಯ್ದೆಯಡಿ ವಿಧಿಸಲಾದ ಷರತ್ತುಗಳಿಗೆ ಒಳಪಟ್ಟು ಇದಕ್ಕೆ ಅನುಮೋದನೆ ನೀಡಲಾಗಿದೆ. ಅನುಮೋದಿತ ಯೋಜನೆಯನ್ನು ನಿಯಮಾವಳಿಗಳಿಗೆ ಅನುಗುಣವಾಗಿ ಜಾರಿಗೆ ತರುವಂತೆ ಸರ್ಕಾರವು DHUDA (ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ) ಅಧಿಕಾರಿಗಳು, ನಗರ ಹಾಗೂ ಗ್ರಾಮ ಪಂಚಾಯಿತಿ ಯೋಜನಾ ಪ್ರಾಧಿಕಾರಗಳು ಮತ್ತು ಇತರ ಸಂಬಂಧಿತ ಇಲಾಖೆಗಳಿಗೆ ನಿರ್ದೇಶನ ನೀಡಿದೆ.

Yathindra Siddaramaiah
'RSS ಸಾವಿರ ತಲೆಯ ವಿಷಪೂರಿತ ಹಾವು', ಜಾತಿವಾದ, ಕೋಮುವಾದ, ಮನುವಾದದ ವಿಷದಿಂದ ತುಂಬಿದೆ: ಯತೀಂದ್ರ ಸಿದ್ದರಾಮಯ್ಯ; Video

ಈ ಅನುಮೋದನೆಯು ದಾವಣಗೆರೆ, ಹರಿಹರ ಮತ್ತು ಅವುಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಭವಿಷ್ಯದ ನಗರ ವಿಸ್ತರಣೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಭೂ-ಬಳಕೆ ನಿಯಂತ್ರಣಕ್ಕೆ ಒಂದು ಶಾಸನಬದ್ಧ ಚೌಕಟ್ಟನ್ನು ಒದಗಿಸುವ ನಿರೀಕ್ಷೆಯಿದೆ.

ನಗರಾಭಿವೃದ್ಧಿ ಪ್ರಾಧಿಕಾರ, ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ನಿರ್ದೇಶನಾಲಯ, ಜಿಲ್ಲಾಡಳಿತ ಮತ್ತು ಸ್ಥಳೀಯ ಯೋಜನಾ ಪ್ರಾಧಿಕಾರಗಳು ಸೇರಿದಂತೆ ಮಹಾ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಇಲಾಖೆಗಳು ಮತ್ತು ಪ್ರಾಧಿಕಾರಗಳ ವಿವರಗಳನ್ನೂ ಸರ್ಕಾರದ ಆದೇಶವು ಒಳಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com