KRS–ಕಬಿನಿಯಲ್ಲಿ 52 ಟಿಎಂಸಿ ಅಡಿ ನೀರಿದ್ದು, ಈ ಬೇಸಿಗೆಯಲ್ಲಿ ಬೆಂಗಳೂರಿಗೆ ನೀರಿನ ಕೊರತೆ ಇಲ್ಲ: BWSSB

ಮಾರ್ಚ್‌ನಿಂದ ಬೇಸಿಗೆ ಆರಂಭವಾಗುವ ಹಿನ್ನೆಲೆಯಲ್ಲಿ ನೀರಿನ ಕೊರತೆ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿತ್ತು. ಆದರೆ, ಪ್ರಸ್ತುತ ಜಲಾಶಯಗಳಲ್ಲಿ ಉತ್ತಮ ಮಟ್ಟದ ನೀರು ಸಂಗ್ರಹವಿರುವುದರಿಂದ ಈ ಬೇಸಿಗೆಯಲ್ಲಿ ತೀವ್ರ ಸಂಕಷ್ಟ ಎದುರಾಗುವುದಿಲ್ಲ.
KRS Dam
KRS ಜಲಾಶಯ
Updated on

ಬೆಂಗಳೂರು: ಬೇಸಿಗೆ ಆರಂಭವಾಗಲಿದ್ದು, ನೀರಿನ ಕೊರತೆ ಬಗ್ಗೆ ಆತಂಕ ಹೆಚ್ಚುತ್ತಿರುವ ನಡುವೆಯೇ, ಈ ಬಾರಿ ಬೆಂಗಳೂರಿಗೆ ಕುಡಿಯುವ ನೀರಿನ ಸಂಕಷ್ಟ ಎದುರಾಗುವ ಸಾಧ್ಯತೆ ಕಡಿಮೆ ಎಂದು ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಭರವಸೆ ನೀಡಿದೆ.

ನಗರಕ್ಕೆ ಪ್ರಮುಖ ನೀರಿನ ಮೂಲವಾಗಿರುವ ಕೃಷ್ಣ ರಾಜ ಸಾಗರ (ಕೆಆರ್‌ಎಸ್) ಮತ್ತು ಕಬಿನಿ ಅಣೆಕಟ್ಟುಗಳಲ್ಲಿ ಪ್ರಸ್ತುತ 52.39 ಸಾವಿರ ಮಿಲಿಯನ್ ಕ್ಯೂಬಿಕ್ (ಟಿಎಂಸಿ) ಅಡಿ ನೀರು ಲಭ್ಯವಿದೆ. ಇದು ನಗರಕ್ಕೆ ಅಗತ್ಯವಿರುವ ಕುಡಿಯುವ ನೀರಿಯನ್ನು ಪೂರೈಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್‌ನಿಂದ ಬೇಸಿಗೆ ಆರಂಭವಾಗುವ ಹಿನ್ನೆಲೆಯಲ್ಲಿ ನೀರಿನ ಕೊರತೆ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿತ್ತು. ಆದರೆ, ಪ್ರಸ್ತುತ ಜಲಾಶಯಗಳಲ್ಲಿ ಉತ್ತಮ ಮಟ್ಟದ ನೀರು ಸಂಗ್ರಹವಿರುವುದರಿಂದ ಈ ಬೇಸಿಗೆಯಲ್ಲಿ ತೀವ್ರ ಸಂಕಷ್ಟ ಎದುರಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

KRS ಅಣೆಕಟ್ಟಿನಲ್ಲಿ (ಡೆಡ್ ಸ್ಟೋರೇಜ್ ಸೇರಿ) 39.0 ಟಿಎಂಸಿ ಅಡಿ ನೀರು ಮತ್ತು ಕಬಿನಿಯಲ್ಲಿ 13.39 ಟಿಎಂಸಿ ಅಡಿ ನೀರು ಲಭ್ಯವಿದೆ. ಈ ನೀರು ಬೆಂಗಳೂರು ನಗರ ಕುಡಿಯುವ ನೀರಿನ ಅಗತ್ಯಕ್ಕೆ ಸಾಕಾಗಲಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಜುಲೈವರೆಗೆ ಕುಡಿಯುವ ನೀರಿಗಾಗಿ 11 ಟಿಎಂಸಿ ಅಡಿ ನೀರನ್ನು ಮೀಸಲಿಡುವಂತೆ ಕಾವೇರಿ ನೀರಾವರಿ ನಿಗಮ (CNNL)ಕ್ಕೆ ಮಂಡಳಿ ಪತ್ರ ಬರೆದಿದೆ.

KRS ಅಣೆಕಟ್ಟಿನ ನೀರಿನ ಮಟ್ಟ ಪ್ರಸ್ತುತ 117 ಅಡಿಗಳಿದ್ದು, ಪೂರ್ಣ ಸಾಮರ್ಥ್ಯ 124 ಅಡಿಗಳಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ನೀರಿನ ಮಟ್ಟ 92 ಅಡಿಗಳಷ್ಟೇ ಇದ್ದುದನ್ನು ಹೋಲಿಸಿದರೆ ಈ ಬಾರಿ ಹೆಚ್ಚಿನ ನೀರು ಲಭ್ಯವಿರುವುದು ಸ್ಪಷ್ಟವಾಗಿದೆ.

KRS Dam
ಕಾವೇರಿ ನದಿ ಸಂರಕ್ಷಣೆಗೆ ಹಣ ಮೀಸಲಿಡಿ: ಕೇಂದ್ರ ಸಚಿವರಿಗೆ ಸಂಸದ ಯದುವೀರ್ ಒಡೆಯರ್ ಪತ್ರ!

ಕಾವೇರಿ ನೀರಾವರಿ ನಿಗಮ ಮೇಲ್ವಿಚಾರಣಾ ಎಂಜಿನಿಯರ್ ರಘುರಾಮ್ ಮಾತನಾಡಿ, KRS ಮತ್ತು ಕಬಿನಿ ಅಣೆಕಟ್ಟಿನಲ್ಲಿ ಸಾಕಷ್ಟು ನೀರು ಲಭ್ಯವಿದ್ದು, ಈ ನೀರನ್ನು ಕುಡಿಯುವ ಉದ್ದೇಶಕ್ಕೆ ಮೀಸಲಿಡಲಾಗಿದೆ. ಹಿಂದಿನ ವರ್ಷಗಳಂತೆ, ಬೇಸಿಗೆಯಲ್ಲಿ ನೀರು ವ್ಯರ್ಥವಾಗುವುದನ್ನು ತಡೆಯಲು ಕ್ರಮಗಳನ್ನು ಸಹ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಹಳ್ಳಿಗಳಿಗೆ ಮತ್ತು ಬೆಂಗಳೂರಿಗೆ ಕುಡಿಯುವ ನೀರನ್ನು ಕೆಆರ್‌ಎಸ್ ಮತ್ತು ಕಬಿನಿ ಎರಡರಿಂದಲೂ ನೀರನ್ನು ಸರಬರಾಜು ಮಾಡಲಾಗುತ್ತದೆ. ಆದಾಗ್ಯೂ, ದೀರ್ಘಕಾಲಿಕ ಬೆಳೆಗಳಿಗೆ ಕೆಆರ್‌ಎಸ್‌ನಿಂದ ಮಾತ್ರ ನೀರನ್ನು ಬಿಡುಗಡೆ ಮಾಡಲಾಗುವುದು. ಕೆಆರ್‌ಎಸ್‌ನಿಂದ ನೀರು ಬಿಡುಗಡೆಯಾದಾಗಲೆಲ್ಲಾ, ಕಬಿನಿಯಿಂದ ಟಿಕೆ ಹಳ್ಳಿಗೆ ಕುಡಿಯುವ ನೀರನ್ನು ಬಿಡುಗಡೆ ಮಾಡಲಾಗುತ್ತದೆ.

ಆವಿಯಾಗುವಿಕೆ ಮತ್ತು ನದಿ ಹರಿವಿನ ಅವಶ್ಯಕತೆಗಳನ್ನು ಅವಲಂಬಿಸಿ, ಕೃಷಿ ಮತ್ತು ಕೈಗಾರಿಕಾ ಬಳಕೆಗೆ ಸುಮಾರು 12–15 ಟಿಎಂಸಿಎಫ್‌ಟಿ ನೀರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಬೇಸಿಗೆ ನಿರ್ವಹಣಾ ಯೋಜನೆ ಮೇ ಅಂತ್ಯದವರೆಗೆ ಮಾತ್ರ ವಿಸ್ತರಿಸಿದ್ದರೂ, ಯಾವುದೇ ತುರ್ತು ಪರಿಸ್ಥಿತಿಯನ್ನು ತಪ್ಪಿಸಲು ಬಿಡಬ್ಲ್ಯೂಎಸ್‌ಎಸ್‌ಬಿ ಜುಲೈ ವರೆಗೆ ನೀರನ್ನು ಕಾಯ್ದಿರಿಸಲು ಸಿದ್ಧತೆಗಳನ್ನು ನಡೆಸುತ್ತಿದೆ.

ಇದರಂತೆ ರಸ್ತೆ ತೊಳೆಯುವುದು, ಕಾರು ತೊಳೆಯುವುದು ಹಾಗೂ ಈಜುಕೊಳಗಳಲ್ಲಿ ಕುಡಿಯುವ ನೀರಿನ ಬಳಕೆಗೆ ನಿರ್ಬಂಧ ಹಾಗೂ ದಂಡ ವಿಧಿಸುವ ಸಾಧ್ಯತೆ ಇದೆ. ಜೊತೆಗೆ, ಖಾಸಗಿ ನೀರು ಟ್ಯಾಂಕರ್‌ಗಳ ನೋಂದಣಿ ಪುನರಾರಂಭಿಸಿ ಅಧಿಕ ದರ ಮತ್ತು ಕಿರುಕುಳ ತಡೆಯುವ ಕ್ರಮಗಳನ್ನೂ ಪರಿಗಣಿಸುತ್ತಿದೆ.

ನಗರದ ಹೊರವಲಯ ಹಾಗೂ ಕೇಂದ್ರ ವ್ಯಾಪಾರ ಪ್ರದೇಶಗಳಲ್ಲಿ ನೀರಿನ ಕೊರತೆ ಎದುರಾದಲ್ಲಿ ‘ಸಂಚಾರಿ ಕಾವೇರಿ’ ಸೇವೆಯ 108 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲು ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com