ಬೆಂಗಳೂರು: ಅಪ್ಪ ಕ್ಷಮಿಸು, ಈ ಅವಮಾನ ಸಹಿಸಿಕೊಂಡು ಬದುಕಲಾರೇ... ಶಿಕ್ಷಕಿ ಬೈದರೆಂದು ನೇಣಿಗೆ ಶರಣಾದ ಶಾಲಾ ವಿದ್ಯಾರ್ಥಿನಿ!

ಬೆಂಗಳೂರು ನಗರ ಆನೇಕಲ್ ತಾಲೂಕಿನಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೋರ್ವಳು ಶಿಕ್ಷಕಿ ಬೈದಿದ್ದಕ್ಕೆ ಮನನೊಂದ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.
ಬೆಂಗಳೂರು: ಅಪ್ಪ ಕ್ಷಮಿಸು, ಈ ಅವಮಾನ ಸಹಿಸಿಕೊಂಡು ಬದುಕಲಾರೇ... ಶಿಕ್ಷಕಿ ಬೈದರೆಂದು ನೇಣಿಗೆ ಶರಣಾದ ಶಾಲಾ ವಿದ್ಯಾರ್ಥಿನಿ!
Updated on

ಆನೇಕಲ್: ಬೆಂಗಳೂರು ನಗರ ಆನೇಕಲ್ ತಾಲೂಕಿನಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೋರ್ವಳು ಶಿಕ್ಷಕಿ ಬೈದಿದ್ದಕ್ಕೆ ಮನನೊಂದ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಮರಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಮಧುಶ್ರೀ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂದು ಬೆಳಿಗ್ಗೆ ಪೋಷಕರು ಎದ್ದು ನೋಡಿದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಡೆಟ್ ನೋಟ್ ನಲ್ಲಿ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದ್ದಾರೆ. ವಿದ್ಯಾರ್ಥಿಗಳ ಮುಂದೆ ನನಗೆ ಅವಮಾನವಾಗಿದ್ದು, ನನಗೆ ಬದುಕಲು ಆಗುತ್ತಿಲ್ಲ. ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ ಎಂದು ಬರೆದು ವಿದ್ಯಾರ್ಥಿ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ವಿದ್ಯಾರ್ಥಿ ಸಾವಿನ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಬಿಇಒ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಕ್ಷಕಿ ಕಿರುಕುಳದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಬೆಂಗಳೂರು: ಅಪ್ಪ ಕ್ಷಮಿಸು, ಈ ಅವಮಾನ ಸಹಿಸಿಕೊಂಡು ಬದುಕಲಾರೇ... ಶಿಕ್ಷಕಿ ಬೈದರೆಂದು ನೇಣಿಗೆ ಶರಣಾದ ಶಾಲಾ ವಿದ್ಯಾರ್ಥಿನಿ!
ಸಿಗರೇಟ್ ಖರೀದಿಸಿ ಜೈಲು ಸೇರಿದ ಭೂಪ! ನಡೆದಿದ್ದಾದರೂ ಏನು?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com