ಅಂಗನವಾಡಿ ಕೇಂದ್ರದಲ್ಲಿ 4 ವರ್ಷದ ಮಗುವಿಗೆ ಆಟಿಕೆಯಲ್ಲಿ ಅಡಗಿದ್ದ ಹಾವು ಕಡಿತ!

ಬೆಳ್ತಂಗಡಿ ತಾಲೂಕಿನ ಸೌತಡ್ಕದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ನಾಲ್ಕು ವರ್ಷದ ಬಾಲಕಿಗೆ ಆಟಿಕೆಯಲ್ಲಿ ಅಡಗಿದ್ದ ಹಾವು ಕಚ್ಚಿದೆ. ಮಲ್ಲಿಗೆ ಮಜಲು ನಿವಾಸಿ ಸಿಯಾಬ್ ಅವರ ಪುತ್ರಿ ಫಾತಿಮತ್ ಸಅದಿಯಾಗೆ ಹಾವು ಕಚ್ಚಿದ್ದು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
representation purpose only
ಸಂಗ್ರಹ ಚಿತ್ರ
Updated on

ಮಂಗಳೂರು: ಬೆಳ್ತಂಗಡಿ ತಾಲೂಕಿನ ಸೌತಡ್ಕದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ನಾಲ್ಕು ವರ್ಷದ ಬಾಲಕಿಗೆ ಆಟಿಕೆಯಲ್ಲಿ ಅಡಗಿದ್ದ ಹಾವು ಕಚ್ಚಿದೆ. ಮಲ್ಲಿಗೆ ಮಜಲು ನಿವಾಸಿ ಸಿಯಾಬ್ ಅವರ ಪುತ್ರಿ ಫಾತಿಮತ್ ಸಅದಿಯಾಗೆ ಹಾವು ಕಚ್ಚಿದ್ದು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಬೆಳಿಗ್ಗೆ 11.45ರ ಸುಮಾರಿಗೆ 11 ಮಕ್ಕಳು ಅಂಗನವಾಡಿಯಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಶಿಕ್ಷಕಿ ಸರಿತಾ ವಿಶೇಷ ತೀವ್ರ ಪರಿಷ್ಕರಣೆ (SIR) ಕರ್ತವ್ಯದ ಮೇಲೆ ಹೊರಗಿದ್ದರಿಂದ ಅಂಗನವಾಡಿ ಸಹಾಯಕಿ ಅಶ್ವಿತ ಕೇಂದ್ರದ ಉಸ್ತುವಾರಿ ವಹಿಸಿಕೊಂಡಿದ್ದರು. ಮಕ್ಕಳು ಆಟಿಕೆ ಕೇಳಿದರು. ಕೊಟ್ಟು ನಾನು ಊಟ ತಯಾರಿಸಲು ಅಡುಗೆಮನೆಗೆ ಹೋದೆ. ಕೆಲ ಕ್ಷಣಗಳ ನಂತರ ಫಾತಿಮತ್ ಅಳುತ್ತ ಹಾವು ಕಚ್ಚಿತ್ತು ಎಂದು ತಿಳಿಸಿದಳು ಎಂದು ಅಶ್ವಿತ ಹೇಳಿದರು.

representation purpose only
ಧರ್ಮಸ್ಥಳ ಬುರಡೆ ಪ್ರಕರಣ: ಕೊನೆಗೂ ಬೆಳ್ತಂಗಡಿ ನ್ಯಾಯಾಲಯಕ್ಕೆ 7000 ಪುಟಗಳ ಅಂತಿಮ ವರದಿ ಸಲ್ಲಿಸಿದ SIT!

ಕೊಠಡಿಯಲ್ಲಿ ತಕ್ಷಣ ಹುಡುಕಿದಾಗ ಯಾವುದೇ ಹಾವು ಪತ್ತೆಯಾಗಲಿಲ್ಲ. ಬಾಲಕಿಯ ಪೋಷಕರು ಆಕೆಯನ್ನು ಸೌತಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ವೈದ್ಯರು ಆರಂಭದಲ್ಲಿ ಇದು ಕೀಟ ಕಡಿತ ಎಂದು ಶಂಕಿಸಿ ಚಿಕಿತ್ಸೆ ನೀಡಿದರು. ನಂತರ ಆಕೆಯನ್ನು ಅಂಗನವಾಡಿಗೆ ಕರೆತರಲಾಯಿತು.

ಆದಾಗ್ಯೂ, ಮಗುವಿನ ಪೋಷಕರು ಮತ್ತು ಸಹಾಯಕರು ನಂತರ ಆಟಿಕೆಗಳನ್ನು ಮರುಪರಿಶೀಲಿಸಿದಾಗ, ಆಟಿಕೆಗಳಲ್ಲಿ ಒಂದರೊಳಗೆ ಸಣ್ಣ ಹಾವೊಂದು ಅಡಗಿರುವುದು ಕಂಡುಬಂದಿತ್ತು. ಕೂಡಲೇ ಬಾಲಕಿಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನಂತರ ವಿಶೇಷ ಚಿಕಿತ್ಸೆಗಾಗಿ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com