ಲೋಕಾಯುಕ್ತ ಮಧ್ಯಪ್ರವೇಶ: ಕಲ್ಲುಗಣಿಯಲ್ಲಿ ಮೃತಪಟ್ಟ ಟಿಪ್ಪರ್ ಚಾಲಕನ ವಿಧವೆ ಪತ್ನಿಗೆ 30 ಲಕ್ಷ ರೂ. ಪರಿಹಾರ!

ನೀರು ಮತ್ತು ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಗಳ ಅಡಿಯಲ್ಲಿ ರೂಪಿಸಲಾದ ನಿಯಮದ ಪ್ರಕಾರ ನೋಟಿಸ್ ನೀಡಿದ ನಂತರ ಪರಿಸರ ಅಧಿಕಾರಿ (EO) ಕ್ರಷರ್ ಘಟಕದ ಪರವಾನಗಿಯನ್ನು ಅಮಾನತುಗೊಳಿಸಿದರು.
File image
ಸಂಗ್ರಹ ಚಿತ್ರ
Updated on

ಬೆಂಗಳೂರು: ನಾಗಮಂಗಲ ತಾಲ್ಲೂಕಿನಲ್ಲಿ ಜೆಲ್ಲಿ ಕಲ್ಲು ತುಂಬಿದ ಟಿಪ್ಪರ್ ಚಾಲನೆ ಮಾಡುವಾಗ ಸುಮಾರು 40 ಅಡಿ ಆಳದ ಕ್ವಾರಿ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ ಚಾಲಕ ಲಕ್ಷ್ಮಣ ಅವರ ಪತ್ನಿ ಶಶಿಕಲಾ ಅವರಿಗೆ ಕಾರ್ಮಿಕ ಇಲಾಖೆಯಿಂದ 5 ಲಕ್ಷ ರೂ. ಮತ್ತು ಕ್ರಷರ್ ಘಟಕದ ಮಾಲೀಕರಿಂದ 25 ಲಕ್ಷ ರೂ. ಸೇರಿದಂತೆ 30 ಲಕ್ಷ ರೂ. ಪರಿಹಾರ ನೀಡಲಾಗಿದೆ.

ಡಿಸೆಂಬರ್ 26, 2026 ರಂದು ಬೆಳ್ಳೂರು ಪೊಲೀಸ್ ವ್ಯಾಪ್ತಿಯಲ್ಲಿ ದುರಂತಕ್ಕೆ ಕಾರಣವಾದ ಕ್ರಷರ್ ಘಟಕದಲ್ಲಿನ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲು ವಿಫಲವಾದ ಆರೋಪದ ಮೇಲೆ ಮಂಡ್ಯ ಜಿಲ್ಲೆಯ 10 ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದರು. ನಂತರ ಸಂತ್ರಸ್ತ ಚಾಲಕನ ಕುಟುಂಬಕ್ಕೆ ಪರಿಹಾರ ನೀಡಲಾಯಿತು.

ನೀರು ಮತ್ತು ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಗಳ ಅಡಿಯಲ್ಲಿ ರೂಪಿಸಲಾದ ನಿಯಮದ ಪ್ರಕಾರ ನೋಟಿಸ್ ನೀಡಿದ ನಂತರ ಪರಿಸರ ಅಧಿಕಾರಿ (EO) ಕ್ರಷರ್ ಘಟಕದ ಪರವಾನಗಿಯನ್ನು ಅಮಾನತುಗೊಳಿಸಿದರು.

ತೆರಿಗೆ ಬಾಕಿ ಇರುವ 11 ಕ್ರಷರ್ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಈ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳಲು ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ತೆರಿಗೆ ಪಾವತಿಸದ ಒಟ್ಟು 17 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಕ್ರಷರ್‌ನ 3 ವಾಹನಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಒಂಬತ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ರೂ. 71,826 ತೆರಿಗೆ ಮತ್ತು ರೂ. 35,000 ದಂಡವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಎಆರ್‌ಟಿಒ ತಿಳಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 8 ಕ್ಕೆ ಮುಂದೂಡಲಾಗಿದೆ.

File image
ವೈಜಾಗ್ ದುರಂತ: ಮೃತರ ಕುಟುಂಬಕ್ಕೆ ತಲಾ 1.72 ಕೋಟಿ ರೂ ಪರಿಹಾರ, ಉದ್ಯೋಗ ಘೋಷಿಸಿದ ಪವನ್ ಕಲ್ಯಾಣ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com