ಮಳೆ ಕೊರತೆ, ರಸಗೊಬ್ಬರ ಅಭಾವ: ರಾಜ್ಯದ ಅನ್ನದಾತರಿಗೆ ಎರಡೆರಡು ಸವಾಲು; DAP ಗಾಗಿ ರೈತರ ಬೇಡಿಕೆ!

ಜೂನ್ ಅಂತ್ಯದ ವೇಳೆಗೆ, ರಾಜ್ಯವು 11.53 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಮಾರಾಟ ಮಾಡಿದೆ ಮತ್ತು 10.93 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಹೊಂದಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಈ ಬಾರಿಯ ಮುಂಗಾರಿನಲ್ಲಿ, ರಾಜ್ಯದ ರೈತರು ಎರಡರಡು ಸವಾಲುಗಳನ್ನು ಎದುರಿಸುತ್ತಿದ್ದಾರೆ, ಇದರಲ್ಲಿ ಗರಿಷ್ಠ ಬಿತ್ತನೆ ಋತುವಿಗೆ ಮುಂಚಿತವಾಗಿ ಸುಮಾರು 20 ಜಿಲ್ಲೆಗಳು ತೀವ್ರ ಮಳೆ ಕೊರತೆ ಮತ್ತು ರಸಗೊಬ್ಬರ ಅಭಾವ ಎದುರಿಸುತ್ತಿವೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (KSNDMC) ದತ್ತಾಂಶದ ಪ್ರಕಾರ, ರಾಜ್ಯದಲ್ಲಿ ವಾಡಿಕೆಯಂತೆ 191 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 105 ಮಿ.ಮೀ. ಮಳೆಯಾಗಿದ್ದು, ಶೇ. 45 ರಷ್ಟು ಭಾರಿ ಕೊರತೆಯಾಗಿದೆ. ಮಲೆನಾಡು ಅತಿ ಹೆಚ್ಚು ಅಂದರೆ ಶೇ. 62 ರಷ್ಟು ಮಳೆ ಕೊರತೆ ಎದುರಿಸುತ್ತಿದೆ, ನಂತರ ಕರಾವಳಿ ಕರ್ನಾಟಕದಲ್ಲಿ ಶೇ. 54 ರಷ್ಟು ಮತ್ತು ಉತ್ತರ ಒಳನಾಡಿನಲ್ಲಿ ಶೇ.30 ರಷ್ಟು ಮಳೆ ಕೊರತೆಯಿದೆ.

ದಕ್ಷಿಣ-ಒಳನಾಡಿನಲ್ಲಿ, ಸಾಮಾನ್ಯಕ್ಕಿಂತ ಶೇ. 6 ರಷ್ಟು ವ್ಯತ್ಯಾಸವಿದೆ. 18 ಜಿಲ್ಲೆಗಳು ಕೊರತೆ ಮತ್ತು ದೊಡ್ಡ ಕೊರತೆಯ ಅಡಿಯಲ್ಲಿ ಬಂದರೆ, ಹತ್ತು ಜಿಲ್ಲೆಗಳು ಸಾಮಾನ್ಯ ವರ್ಗಕ್ಕೆ ಸೇರಿವೆ, ಈ ಜಿಲ್ಲೆಗಳೊಳಗಿನ ಅನೇಕ ತಾಲ್ಲೂಕುಗಳು ಮತ್ತು ಹೋಬಳಿಗಳಲ್ಲಿ ಮಳೆ ಕೊರತೆ ಇದೆ.

ರಸಗೊಬ್ಬರ ದಾಸ್ತಾನಿಗೆ ಸಂಬಂಧಿಸಿದಂತೆ, ಜೂನ್ ಅಂತ್ಯದ ವೇಳೆಗೆ, ರಾಜ್ಯವು 11.53 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಮಾರಾಟ ಮಾಡಿದೆ ಮತ್ತು 10.93 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಹೊಂದಿದೆ. ಆದರೆ ಲಭ್ಯವಿರುವ 84,000 ಮೆಟ್ರಿಕ್ ಟನ್ ದಾಸ್ತಾನು 4 ಲಕ್ಷ ಮೆಟ್ರಿಕ್ ಟನ್ ಅಗತ್ಯವನ್ನು ಪೂರೈಸಲು ಸಾಕಾಗುವುದಿಲ್ಲವಾದ್ದರಿಂದ ಡಿಎಪಿ (ಡೈಅಮೋನಿಯಂ ಫಾಸ್ಫೇಟ್) ಕೊರತೆ ಉಂಟಾಗಬಹುದು.

Representational image
ರಾಜ್ಯದಲ್ಲಿ ಭಾರೀ ಮಳೆ: ಕರಾವಳಿಗೆ ಜುಲೈ 6ರ ವರೆಗೆ Orange ಅಲರ್ಟ್ ಘೋಷಣೆ, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ..!

ಪ್ರಸ್ತುತ ಡಿಎಪಿ ಕೊರತೆ ಇದೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ಇದು ಇನ್ನಷ್ಟು ಹದಗೆಡುತ್ತದೆ. "ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡುವ ರೈತರು ಡಿಎಪಿಗೆ ಪರ್ಯಾಯಗಳನ್ನು ಬಳಸುವಂತೆ ನಾವು ಹೇಳುತ್ತಿದ್ದೇವೆ. ಜಾಗೃತಿ ಮೂಡಿಸಲು ನಾವು ಕರಪತ್ರಗಳು ಮತ್ತು ಜಾಹೀರಾತುಗಳನ್ನು ಸಹ ವಿತರಿಸುತ್ತಿದ್ದೇವೆ. ಆದರೆ ರೈತರು ಡಿಎಪಿಗೆ ಒತ್ತಾಯಿಸುತ್ತಿದ್ದಾರೆ" ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದ್ದಾರೆ.

ಕೆಎಸ್‌ಎನ್‌ಡಿಎಂಸಿಯ ಮಾಜಿ ನಿರ್ದೇಶಕ ಜಿಎಸ್ ಶ್ರೀನಿವಾಸ ರೆಡ್ಡಿ, ಈ ಬಾರಿ ಬರಗಾಲದಿಂದಾಗಿ ಬಿತ್ತನೆ ಕಡಿಮೆಯಾಗಿದೆ, ಇದು ರಸಗೊಬ್ಬರಗಳ ಬೇಡಿಕೆಯನ್ನು ಕಡಿಮೆ ಮಾಡಿದೆ ಎಂದು ಹೇಳಿದರು. "ಜುಲೈನಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿರುವುದರಿಂದ, ಬಿತ್ತನೆ ಚಟುವಟಿಕೆಗಳು ಚುರುಕುಗೊಳ್ಳುತ್ತವೆ ಹೀಗಾಗಿ ರಸಗೊಬ್ಬರಕ್ಕೆ ತೀವ್ರ ಬೇಡಿಕೆಗೆ ಕಾರಣವಾಗಬಹುದು.

ಪೂರೈಕೆಯಲ್ಲಿ ಬಿಕ್ಕಟ್ಟಿಗೆ ಕಾರಣವಾಗಬಹುದು. ಬಿತ್ತನೆ ಪೂರ್ಣಗೊಂಡ ನಂತರ ರಸಗೊಬ್ಬರ ಪೂರೈಕೆಯ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗುತ್ತದೆ" ಎಂದು ಅವರು ಹೇಳಿದರು. ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ರಸಗೊಬ್ಬರ ತಯಾರಕರಿಗೆ ಕಚ್ಚಾ ವಸ್ತುಗಳ ಪೂರೈಕೆಯನ್ನು ನಿರ್ಬಂಧಿಸಲಾಗಿದೆ, ಇದು ಕೇಂದ್ರ ಸರ್ಕಾರದಿಂದ ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ಮುಂದಿನ ಒಂದು ವಾರದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿರುವುದರಿಂದ ಭಾರತೀಯ ಹವಾಮಾನ ಇಲಾಖೆ ಸೋಮವಾರ ರಾಜ್ಯದ ಕೆಲವು ಭಾಗಗಳಿಗೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ನೀಡಿದೆ. ಮಳೆ ಉತ್ತಮವಾಗಿದ್ದರೂ, ಭಾರಿ ಮಳೆಯಿಂದಾಗಿ ಹೊಸದಾಗಿ ಬಿತ್ತಿದ ಬೀಜಗಳು ಮತ್ತು ರಸಗೊಬ್ಬರಗಳು ಕೊಚ್ಚಿಹೋಗಬಹುದು, ಇದರಿಂದಾಗಿ ರೈತರು ತಮ್ಮ ಭೂಮಿಯಲ್ಲಿ ಮತ್ತೆ ಬಿತ್ತನೆ ಮಾಡಿ ರಸ ಗೊಬ್ಬರ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com