ಜೂನ್ 1ಕ್ಕೆ ರಾಜ್ಯಾದ್ಯಂತ ಶಾಲೆ ಪುನಾರಂಭ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಪಠ್ಯಪುಸ್ತಕಗಳು, ನೋಟ್‌ಬುಕ್‌ಗಳು ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲಾಗಿದೆ. ಉಳಿದ ಸಾಮಗ್ರಿಗಳು ತಿಂಗಳೊಳಗೆ ಶಿಕ್ಷಣ ಸಂಸ್ಥೆಗಳಿಗೆ ತಲುಪಲಿವೆ ಎಂದು ಸಚಿವರು ತಿಳಿಸಿದರು.
Madhu Bangarappa
ಮಧು ಬಂಗಾರಪ್ಪ
Updated on

ಶಿವಮೊಗ್ಗ: ರಾಜ್ಯದ ಎಲ್ಲಾ ಶಾಲೆಗಳು ನಿಗದಿಯಂತೆ ಜೂನ್ 1ರಂದು ಪುನಾಾರಂಭವಾಗಲಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಶಾಲೆಗಳು ಸಜ್ಜಾಗಿರುವುದನ್ನು ಖಚಿತಪಡಿಸಿಕೊಳ್ಳಲು ಇಲಾಖೆ ಸಾವಿರಾರು ಶಾಲೆಗಳು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳ (SDMC) ಜೊತೆ ಸಭೆಗಳನ್ನು ನಡೆಸಿ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದು ಸಚಿವರು ಹೇಳಿದರು.

ಪಠ್ಯಪುಸ್ತಕಗಳು, ನೋಟ್‌ಬುಕ್‌ಗಳು ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲಾಗಿದೆ. ಉಳಿದ ಸಾಮಗ್ರಿಗಳು ತಿಂಗಳೊಳಗೆ ಶಿಕ್ಷಣ ಸಂಸ್ಥೆಗಳಿಗೆ ತಲುಪಲಿವೆ ಎಂದು ಸಚಿವರು ತಿಳಿಸಿದರು. ಎಲ್ಲವೂ ಸರಿಯಾಗಿ ಸಿದ್ಧವಾಗಿದೆ. ಮಂಗಳವಾರದೊಳಗೆ ಸುಮಾರು 95 ಶೇಕಡಾದಿಂದ 96 ಶೇಕಡಾವರೆಗೆ ಸಾಮಗ್ರಿಗಳು ಶಾಲೆಗಳಿಗೆ ತಲುಪಿವೆ ಎಂದು ಅವರು ಹೇಳಿದರು.

Madhu Bangarappa
ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ್ಲ, ಹಾಕಿಕೊಂಡು ಬಂದ್ರೆ ಕಾನೂನು ಕ್ರಮ: ಮಧು ಬಂಗಾರಪ್ಪ ಎಚ್ಚರಿಕೆ

ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಸ್ವಾಗತಿಸಲು ಆಯೋಜಿಸಲಾಗುತ್ತಿರುವ ಕಾರ್ಯಕ್ರಮಗಳಲ್ಲಿ ಪೋಷಕರು ಮತ್ತು ಸ್ಥಳೀಯ ಸಮುದಾಯಗಳು ಭಾಗವಹಿಸಬೇಕು ಎಂದು ಮಧು ಬಂಗಾರಪ್ಪ ಮನವಿ ಮಾಡಿದರು.

ಜೂನ್ 1ರಂದು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1,000 ಕರ್ನಾಟಕ ಪಬ್ಲಿಕ್ ಶಾಲೆಗಳ ಶಿಲಾನ್ಯಾಸ ಕಾರ್ಯಕ್ರಮ ನಡೆಸಲಿರುವ ಕುರಿತು ಕೇಳಿದಾಗ, ಸಮಯ ಬಹಳ ಸೀಮಿತವಾಗಿರಬಹುದು ಎಂದು ಸಚಿವರು ಹೇಳಿದರು.

ಆದರೆ ಇದು ಅತ್ಯಂತ ಉತ್ತಮ ಕಾರ್ಯಕ್ರಮವಾಗಿದೆ. ರಾಜ್ಯದಾದ್ಯಂತ ಸಾಮಾನ್ಯ ಜನರು ಮತ್ತು ಪೋಷಕರು ಇದನ್ನು ಎದುರು ನೋಡುತ್ತಿದ್ದಾರೆ. ಹಣ ಸೇರಿದಂತೆ ಎಲ್ಲಾ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿರುವುದರಿಂದ, ಕಾರ್ಯಕ್ರಮ ಯೋಜನೆಯಂತೆ ಮುಂದುವರಿಯಲಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com