ನೇಪಾಳದಂತೆ ದಕ್ಷಿಣ ಭಾರತಕ್ಕೂ ಜಲ ಕಂಟಕ: ಊರುಗಳು ಕೊಚ್ಚಿಹೋಗುವವು, ಸಾವು-ನೋವು ಹೆಚ್ಚಾಗುವುದು; ಕೋಡಿಮಠ ಶ್ರೀಗಳ ಭವಿಷ್ಯ

ನೇಪಾಳದಲ್ಲಿ ನಡೆದ ಈ ಘಟನೆಯು ಎಲ್ಲರ ಮನಸ್ಸಿನಿಂದ ಮರೆಯಾಗುವ ಮುನ್ನವೇ ಇಂಥದ್ದೇ ಒಂದು ಪರಿಸ್ಥಿತಿಯ ಬಗ್ಗೆ ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ
Kodi mutt swamiji
ಕೋಡಿ ಮಠದ ಸ್ವಾಮೀಜಿ
Updated on

ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಿಂದಾಗಿ ಸಾವಿಗೀಡಾದವರ ಸಂಖ್ಯೆ 1,377ಕ್ಕೆ ಏರಿದ್ದು, ಅಧಿಕಾರಿಗಳು ಪ್ರವಾಹ ಪೀಡಿತ ಜಿಲ್ಲೆಗಳಿಂದ ಹೆಚ್ಚಿನ ಶವಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಇನ್ನೂ 5,000ಕ್ಕೂ ಹೆಚ್ಚು ಮಂದಿ ಪತ್ತೆಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ನೇಪಾಳದಲ್ಲಿ ನಡೆದ ಈ ಘಟನೆಯು ಎಲ್ಲರ ಮನಸ್ಸಿನಿಂದ ಮರೆಯಾಗುವ ಮುನ್ನವೇ ಇಂಥದ್ದೇ ಒಂದು ಪರಿಸ್ಥಿತಿಯ ಬಗ್ಗೆ ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ

ಹಾಸನದಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಯುದ್ಧ, ಸಮರ, ಸಮಸ್ಯೆ, ಪ್ರವಾಹ ಸೇರಿ ಹಲವಾರು ಸಂಗತಿಗಳ ಬಗ್ಗೆಯೂ ಭವಿಷ್ಯ ನುಡಿದಿದ್ದು, ದಕ್ಷಿಣ ಭಾರತದಲ್ಲಿ ನೇಪಾಳದ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದಿದ್ದಾರೆ.

'ಜನ ಜಂಗುಳಿ ಆಗುತ್ತದೆ. ಯುದ್ಧ ಆಗುತ್ತದೆ, ಜನ ನಿಯಂತ್ರಣ ತಪ್ಪುತ್ತದೆ, ಪ್ರಕೃತಿ ವಿಕೋಪ ಆಗುತ್ತದೆ. ದಕ್ಷಿಣ ಭಾರತದಲ್ಲಿ ನೇಪಾಳದಲ್ಲಿ ಆದಂತೆ ಆಗುತ್ತದೆ' ಎಂದಿರುವ ವಿಡಿಯೋ ವೈರಲ್ ಆಗಿದೆ.

Kodi mutt swamiji
ಕುರ್ಚಿ ಕದನ: ಡಿಕೆಶಿ ಸಿಎಂ ಆಗುವುದು ಯಾವಾಗ?; ಕೋಡಿಮಠ ಶ್ರೀ ಮತ್ತೆ ಭವಿಷ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com