ಬೆಂಗಳೂರು: ಹವಾಲಾ ಹಣ ಸಾಗಣೆ ದಂಧೆಯಲ್ಲಿ ತೊಡಗಿದ್ದ ಮಳಿಗೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿ 44.63 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನ ಮೂಲದ ಭೀಮರಾಂ ಪಟೇಲ್ (24) ಹಾಗೂ ಸುರೇಶ್ ಪಟೇಲ್ (22) ಬಂಧಿತರು.
ಅಲಸೂರು ಗೇಟ್ ಠಾಣೆ ವ್ಯಾಪ್ತಿಯ ಕುಂಬಾರಪೇಟೆ ಮುಖ್ಯ ರಸ್ತೆಯಲ್ಲಿ ರಾಜೇಶ್ವರಿ ಏಜೆನ್ಸಿ ಹೆಸರಿನಲ್ಲಿ ಹವಾಲಾ ಹಣ ಸಾಗಣೆ ದಂಧೆ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಡಿ.13 ರಂದು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ 44.63 ಲಕ್ಷ ನಗದು, ಹಣ ಎಣಿಸುವ ಯಂತ್ರಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement