ಪೇಶಾ'ವಾರ್‌'ಗೆ ಪಾಕ್ ಮೌನ: ಸರ್ವಪಕ್ಷ ಸಭೆ ಕರೆದ ಷರೀಫ್

132 ಮಕ್ಕಳು ಸೇರಿದಂತೆ 148 ಮಂದಿಯನ್ನು ಬಲಿ ಪಡೆದ ಪೇಶಾವರದ ಸೇನಾ ಶಾಲೆಯ ಮೇಲಿನ ಉಗ್ರರ ದಾಳಿಯ...
ಪೇಶಾ'ವಾರ್‌'ಗೆ ಪಾಕ್ ಮೌನ: ಸರ್ವಪಕ್ಷ ಸಭೆ ಕರೆದ ಷರೀಫ್

ಪೇಶಾವರ: 132 ಮಕ್ಕಳು ಸೇರಿದಂತೆ 148 ಮಂದಿಯನ್ನು ಬಲಿ ಪಡೆದ ಪೇಶಾವರದ ಸೇನಾ ಶಾಲೆಯ ಮೇಲಿನ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಬುಧವಾರ ಸರ್ವಪಕ್ಷ ಸಭೆ ಕರೆದಿದ್ದಾರೆ.

ಶಾಲೆಯಲ್ಲಿ ನಡೆದ ಮಕ್ಕಳ ಮಾರಣ ಹೋಮದಿಂದ ಇಡೀ ಪಾಕಿಸ್ತಾನವೇ ಶೋಕ ಸಾಗರದಲ್ಲಿ ಮುಳಿಗಿದ್ದು, ದೇಶಾದ್ಯಂತ ಮೂರು ದಿನಗಳ ಕಾಲ ಶೋಕಾಚಾರಣೆ ಘೋಷಿಸಲಾಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಪೇಶಾವರದಲ್ಲೇ ಇಂದು ಸಂಸದರ ಸರ್ವಪಕ್ಷ ಸಭೆ ಕರೆದಿದ್ದಾರೆ.

ಪಾಕಿಸ್ತಾನದ ಪ್ರಮುಖ ನಗರ ಪೇಶಾವರದ ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿ ಮಂಗಳವಾರ ನಡೆದ ಹೇಡಿ ಭಯೋತ್ಪಾದಕ ದಾಳಿಯನ್ನು ವಿಶ್ವ ನಾಯಕರು ತೀವ್ರ ಖಂಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com