ಹಾಡು ಕೇಳುವ ಹುಚ್ಚು ತಂದ ಸಾವು

ಕಿವಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡು ಹಾಡು ಹೇಳುತ್ತಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಿವಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡು ಹಾಡು ಹೇಳುತ್ತಾ ರೈಲ್ವೆ ಹಳಿ ದಾಟುತ್ತಿದ್ದ ಯುವಕ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಮಲ್ಲೇಶ್ವರ ಮಂತ್ರಿ ಮಾಲ್ ಹಿಂಭಾಗದ ಬಳಿ ಸಂಭವಿಸಿದೆ.

ಶ್ರೀರಾಮಪುರ ನಿವಾಸಿ ಬಿಬಿಎಂಪಿ ಪೌರ ಕಾರ್ಮಿಕ ಮುತ್ಯಾಲಯ್ಯ (21) ಮೃತ ದುರ್ದೈವಿ, ಬುಧವಾರ ರಾತ್ರಿ ಕೆಲಸ ಮುಗಿಸಿಕೊಂಡು ಇಯರ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ಮಲ್ಲೇಶ್ವರ ಹಿಂಭಾಗದ ರೈಲ್ವೆ ಹಳಿ ದಾಟುತ್ತಿದ್ದ.

ಹಾಡು ಕೇಳುತ್ತಿದ್ದರಿಂದ ರೈಲು ಬರುತ್ತಿರುವ ಸದ್ದು ಕೇಳಿಸಿಲ್ಲ. ಹಾಡಿನ ಗುಂಗಿನಲ್ಲಿದ್ದ ಮುತ್ಯಾಲಯ್ಯನಿಗೆ ರೈಲಿನ ಲೈಟ್ ಬೀಳುತ್ತಿರುವುದನ್ನು ಗ್ರಹಿಸದೆ ನಿರ್ಲಕ್ಷ ತೋರಿದ್ದರಿಂದ ದುರಂತ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಮುತ್ಯಾಲಯ್ಯ ತಂದೆ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು ಇತ್ತೀಚೆಗಷ್ಟೇ ನಿಧನರಾಗಿದ್ದರು. ಹೀಗಾಗಿ ಮುತ್ಯಾಲಯ್ಯನಿಗೆ ತಂದೆಯ ಕೆಲಸ ಸಿಕ್ಕಿತ್ತು. ಸರ್ಕಾರಿ ಕೆಲಸ ಸಿಕ್ಕಿದ್ದರಿಂದ 3 ದಿನಗಳ ಹಿಂದಷ್ಟೇ ಮುತ್ಯಾಲಯ್ಯನಿಗೆ ಹುಡುಗಿ ನಿಶ್ಚಯ ಮಾಡಲಾಗಿತ್ತು ಎಂದು ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ. ನಗರ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com