ನಮ್ಮ ಗಡಿಯೊಳಗೆ ಚೀನಾ ರಸ್ತೆ ನಿರ್ಮಿಸಿದರೆ 'ಧ್ವಂಸ' ಮಾಡುತ್ತೇವೆ: ರಾಜನಾಥ್

ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
Updated on

ಕನ್ಹಾ ಚಟ್ಟಿ(ಜಾರ್ಖಂಡ್): ಭಾರತದ ಗಡಿಯೊಳಗೆ ರಸ್ತೆಗಳನ್ನು ನಿರ್ಮಿಸದಂತೆ ಚೀನಾಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೋಮವಾರ ಎಚ್ಚರಿಸಿದ್ದಾರೆ.

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಭಾರತದ ಸೀಮೆಯೊಳಗೆ ರಸ್ತೆಗಳನ್ನು ನಿರ್ಮಿಸಿದಂತೆ ಚೀನಾಗೆ ಎಚ್ಚರಿಸಿದ್ದು, ಒಂದು ವೇಳೆ ಚೀನಾ ಭಾರತದಲ್ಲಿ ರಸ್ತೆಗಳನ್ನು ನಿರ್ಮಿಸಿದ್ದೆ ಆದರೆ ಅಂತಹ ನಿರ್ಮಾಣ ಕಾಮಗಾರಿಗಳನ್ನು ಧ್ವಂಸ ಮಾಡಲಾಗುವುದು ಎಂಬ ಕಟು ಸಂದೇಶವನ್ನು ರವಾನಿಸಿದ್ದಾರೆ.

ಭಾರತದ ಗಡಿಯೊಳಗೆ ನುಸುಳಿ ಚೀನಾ ಇಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ನಾವು ಚೀನಾದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತೇವೆ. ಅದೇ ರೀತಿ ಚೀನಾ ಸಹ ನಮ್ಮ ಭಾವನೆಗೆ ಬೆಲೆ ಕೊಡಬೇಕಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಇದನ್ನು ಮೀರಿ ಚೀನಾ ರಸ್ತೆ ನಿರ್ಮಿಸುವ ಕಾಮಗಾರಿಯನ್ನು ಮುಂದುವರೆಸಿದರೆ ಅದನ್ನು ನೋಡುತ್ತಾ ನಾವು ಕೈ ಕಟ್ಟಿ ಕೂರುವುದಿಲ್ಲ. ಅಂತಹ ನಿರ್ಮಾಣ ಕಾಮಗಾರಿಗಳನ್ನು ಧ್ವಂಸ ಮಾಡಲಾಗುವುದು. ಅದನ್ನು ಬಿಟ್ಟು ನಮ್ಮಗೆ ಬೇರೆ ದಾರಿಯಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com