ಶಾರದಾವನ್ನು ಮೀರಿದ ಹಗರಣ ಬಯಲಿಗೆ

ಶಾರದಾ ಬಹುಕೋಟಿ ಚಿಟ್ ಫಂಡ್ ಹಗರಣದ ಬಳಿಕ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ವಂಚನೆ ಹಗರಣ ಬೆಳಕಿಗೆ ಬಂದಿದೆ. ರೋಸ್ ವ್ಯಾಲಿ...
ಚಿಟ್  ಫಂಡ್  ಹಗರಣ (ಸಾಂದರ್ಭಿಕ ಚಿತ್ರ)
ಚಿಟ್ ಫಂಡ್ ಹಗರಣ (ಸಾಂದರ್ಭಿಕ ಚಿತ್ರ)
Updated on

ಕೋಲ್ಕತಾ: ಶಾರದಾ ಬಹುಕೋಟಿ ಚಿಟ್  ಫಂಡ್  ಹಗರಣದ ಬಳಿಕ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ವಂಚನೆ ಹಗರಣ ಬೆಳಕಿಗೆ ಬಂದಿದೆ. ರೋಸ್ ವ್ಯಾಲಿ ಎಂಬ ಚಿಟ್ ಫಂಡ್ ಕಂಪನಿಯು ಸುಮಾರು 1 ಕೋಟಿ ಜನರಿಗೆ ವಂಚನೆ  ಮಾಡಿದ್ದು, ಬರೋಬರಿ ರು . 60 ಸಾವಿರ ಕೋಟಿಯ ಹಗರಣ ಇದಾಗಿದೆ. ರೋಸ್ ವ್ಯಾಲಿ ಮುಖ್ಯಸ್ಥ ಗೌತಮ್ ಕಂಡು ಎಂಬಾತನನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಜತೆಗೆ, ವಿವಿಧ ರಾಜಕೀಯ ಪಕ್ಷಗಳ ನಾಯಕರ ಮೇಲೆ ತನಿಖಾ ಸಂಸ್ಥೆ ಕಣ್ಣು ನೆಟ್ಟಿದೆ. ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ  ಅವರೂ ಗೌತಮ್  ಕಂಡು ಜತೆ ವೇದಿಕೆ ಹಂಚಿಕೊಂಡಿದ್ದ  ಫೋಟೋ ಕೂಡ ಎಲ್ಲೆಡೆ ಹರಿದಾಡುತ್ತಿದೆ. ಇದೇ ವೇಳೆ, ತ್ರಿಪುರ ಸಿಎಂ ಮಣಿಕ್ ಸರ್ಕಾರ್ ಹೆಸರೂ ಕೇಳಿಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com