ಕೋಲ್ಕತಾ: ಶಾರದಾ ಬಹುಕೋಟಿ ಚಿಟ್ ಫಂಡ್ ಹಗರಣದ ಬಳಿಕ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ವಂಚನೆ ಹಗರಣ ಬೆಳಕಿಗೆ ಬಂದಿದೆ. ರೋಸ್ ವ್ಯಾಲಿ ಎಂಬ ಚಿಟ್ ಫಂಡ್ ಕಂಪನಿಯು ಸುಮಾರು 1 ಕೋಟಿ ಜನರಿಗೆ ವಂಚನೆ ಮಾಡಿದ್ದು, ಬರೋಬರಿ ರು . 60 ಸಾವಿರ ಕೋಟಿಯ ಹಗರಣ ಇದಾಗಿದೆ. ರೋಸ್ ವ್ಯಾಲಿ ಮುಖ್ಯಸ್ಥ ಗೌತಮ್ ಕಂಡು ಎಂಬಾತನನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಜತೆಗೆ, ವಿವಿಧ ರಾಜಕೀಯ ಪಕ್ಷಗಳ ನಾಯಕರ ಮೇಲೆ ತನಿಖಾ ಸಂಸ್ಥೆ ಕಣ್ಣು ನೆಟ್ಟಿದೆ. ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರೂ ಗೌತಮ್ ಕಂಡು ಜತೆ ವೇದಿಕೆ ಹಂಚಿಕೊಂಡಿದ್ದ ಫೋಟೋ ಕೂಡ ಎಲ್ಲೆಡೆ ಹರಿದಾಡುತ್ತಿದೆ. ಇದೇ ವೇಳೆ, ತ್ರಿಪುರ ಸಿಎಂ ಮಣಿಕ್ ಸರ್ಕಾರ್ ಹೆಸರೂ ಕೇಳಿಬಂದಿದೆ.
Advertisement