ಅಂಬೇಡ್ಕರ್ ಸಹ ಘರ್ ವಾಪಸಿ ಬೆಂಬಲಿಸಿದ್ದರು

ಅಂಬೇಡ್ಕರ್ ಎಂದರೆ ಎಲ್ಲರಿಗೂ ದಲಿತ ನಾಯಕ ಎಂದಷ್ಟೇ ಗೊತ್ತು. ಆದರೆ, ಸಂವಿಧಾನ ಶಿಲ್ಪಿಯೂ ಘರ್ ವಾಪಸಿಗೆ ಬೆಂಬಲಿಸಿದ್ದರು ಎನ್ನುವುದನ್ನು...
ಡಾ.ಬಿಆರ್ ಅಂಬೇಡ್ಕರ್
ಡಾ.ಬಿಆರ್ ಅಂಬೇಡ್ಕರ್
Updated on

ನವದೆಹಲಿ: ಅಂಬೇಡ್ಕರ್ ಎಂದರೆ ಎಲ್ಲರಿಗೂ ದಲಿತ ನಾಯಕ ಎಂದಷ್ಟೇ ಗೊತ್ತು. ಆದರೆ, ಸಂವಿಧಾನ ಶಿಲ್ಪಿಯೂ ಘರ್ ವಾಪಸಿಗೆ ಬೆಂಬಲಿಸಿದ್ದರು ಎನ್ನುವುದನ್ನು ತಿಳಿದಿದ್ದೀರಾ? ಹೌದು ಎನ್ನುತ್ತಿದೆ ಆರ್‍ಎಸ್ಎಸ್.

ಮಂಗಳವಾರ ನಡೆಯಲಿರುವ ಅಂಬೇಡ್ಕರ್‍ರವರ 125ನೇ ಜನ್ಮ ದಿನೋತ್ಸವ ಕಾರ್ಯಕ್ರಮದಂದು 200 ಪುಟಗಳ ಸಂಗ್ರಹ ಸಂಚಿಕೆಯನ್ನು ಸಂಘದ ಸಂಘಟನಾ ಕಾರ್ಯದರ್ಶಿ ಭಯ್ಯಾಜಿ ಸುರೇಶ್ ಜೋಷಿ ಲೋಕಾರ್ಪಣೆ ಗೊಳಿಸಲಿದ್ದಾರೆ.

ಪಾಕ್ ಮೇಲಿನ ಅಂಬೇಡ್ಕರ್‍ರವರ ಅಭಿಪ್ರಾಯಗಳು ಪುಸ್ತಕದ ಪ್ರಮುಖ ಅಂಶವಾಗಿದ್ದು, ಕೃಷ್ಣ ಗೋಪಾಲ್ ಸೇರಿ ಸಂಘದ ಹಲವಾರು ದಲಿತ ಮುಖಂಡರ ಬರಹಗಳಿರುವ ಸಂಗ್ರಹ ಸಂಚಿಕೆಯಿದು. ಮುಸಲ್ಮಾನರು ಮತ್ತು ಹಿಂದೂಗಳನ್ನು ಅಂಬೇಡ್ಕರ್‍ರವರ ದೃಷ್ಟಿಯಲ್ಲಿ ಹೇಗಿತ್ತು ಎಂಬುದನ್ನೂ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com