ಟಾಟಾ ಕನ್ಸಲ್ಟನ್ಸಿಯಿಂದ ಪ್ರವಾಹ ಸಂತ್ರಸ್ತರಿಗೆ 1.100 ಕೋಟಿ ರು. ಪರಿಹಾರ

ಭಾರಿ ಮಳೆಯಿಂದಾಗಿ ತಮಿಳುನಾಡು ಅಕ್ಷರಶಃ ತತ್ತರಿಸಿದ್ದು, ಟಾಟಾ ಕನ್ಸಲ್ಟನ್ಸಿ ಪ್ರವಾಹ ಸಂತ್ರಸ್ತರಿಗೆ 1.100 ಕೋಟಿ ರುಪಾಯಿ ಪರಿಹಾರ ನೀಡಿದೆ...
ಚೆನ್ನೈ ಪ್ರವಾಹ
ಚೆನ್ನೈ ಪ್ರವಾಹ
Updated on

ಚೆನ್ನೈ: ಭಾರಿ ಮಳೆಯಿಂದಾಗಿ ತಮಿಳುನಾಡು ಅಕ್ಷರಶಃ ತತ್ತರಿಸಿದ್ದು, ಚೆನ್ನೈನಲ್ಲಿರುವ ಟಾಟಾ ಕನ್ಸಲ್ಟನ್ಸಿಯಿಂದ ಪ್ರವಾಹ ಸಂತ್ರಸ್ತರಿಗೆ 1.100 ಕೋಟಿ ರುಪಾಯಿ ಪರಿಹಾರ ನೀಡಿದೆ.

ಭಾರಿ ಮಳೆಯಿಂದಾಗಿ ಚೆನ್ನೈ ಸೇರಿದಂತೆ ಇತರ ಜಿಲ್ಲೆಗಳಲ್ಲಿ ನೀರು ತುಂಬಿದ್ದು, ಭಾರಿ ಹಾನಿ ಸಂಭವಿಸಿವೆ. ಅಲ್ಲದೆ ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಟಾಟಾ ಕನ್ಸಲ್ಟನ್ಸಿ ಭಾರಿ ಮೊತ್ತದ ಪರಿಹಾರದ ಘೋಷಿಸಿದೆ.

ಪ್ರವಾಹ ಸಂತ್ರಸ್ತರು ಸೇರಿದಂತೆ ಚೆನ್ನೈನಲ್ಲಿನ ಟಿಸಿಎಸ್ ಉದ್ಯೋಗಿಗಳಿಗೂ ಆರ್ಥಿಕ ನೆರವನ್ನು ಟಾಟಾ ಕನ್ಸಲ್ಟನ್ಸಿ ನೀಡಲಿದೆ.

ಭಾರಿ ಮಳೆಯಿಂದಾಗಿ ತಮಿಳುನಾಡಿನಲ್ಲಿ ಇಲ್ಲಿಯವರೆಗೂ 347 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ ಒಟ್ಟು 17.64 ಲಕ್ಷ ಜನರನ್ನು ರಕ್ಷಿಸಿ 6605 ಕೇಂದ್ರಗಳಲ್ಲಿ ಆಶ್ರಯ ಒದಗಿಸಲಾಗಿದೆ. ಪರಿಹಾರ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದ್ದು, 1.28 ಕೋಟಿ ಆಹಾರ ಪೊಟ್ಟಣ. ಒಟ್ಟು 67.47 ಕೋಟಿ ರು. ಮೊತ್ತ ಪರಿಹಾರ ಸಾಮಗ್ರಿ ವಿತರಿಸಲಾಗಿದ್ದು, 1.11 ಲಕ್ಷ ಕುಟುಂಬಗಳಿಗೆ ನೆರವು ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com