ಕಮಲೇಶ್ ತಿವಾರಿಯನ್ನು ಗಲ್ಲಿಗೇರಿಸಲು ಮುಸ್ಲಿಮರ ಒತ್ತಾಯ

ಹಿಂದೂ ಮಹಾಸಭಾ ಕಾರ್ಯಕರ್ತ ಕಮಲೇಶ್ ತಿವಾರಿಯನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ 1ಲಕ್ಷ ಮುಸ್ಲಿಮರು ಉತ್ತರ ಪ್ರದೇಶ ಮುಜಾಫರ್ ನಗರದಲ್ಲಿ ಪ್ರತಿಭಟನೆ ನಡೆಸಿದರು....
ಪ್ರತಿಭಟನಾ ನಿರತ ಮುಸ್ಲಿಮರು
ಪ್ರತಿಭಟನಾ ನಿರತ ಮುಸ್ಲಿಮರು

ಮುಜಾಫರ್ ನಗರ; ಮುಸ್ಲಿಮರ ಬಗ್ಗೆ ಹಾಗೂ ಪ್ರವಾದಿ ಮಹಮದ್ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಹಿಂದೂ ಮಹಾಸಭಾ ಕಾರ್ಯಕರ್ತ ಕಮಲೇಶ್ ತಿವಾರಿಯನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ 1ಲಕ್ಷ ಮುಸ್ಲಿಮರು ಉತ್ತರ ಪ್ರದೇಶ ಮುಜಾಫರ್ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಪ್ರವಾದಿ ಮಹಮದ್ ಬಗ್ಗೆ ಒಂದು ಮಾತು ಕೆಟ್ಟದ್ದಾಗಿ ಹೇಳಿದರು ನಾವು ಸಹಿಸುವುದಿಲ್ಲ. ತಿವಾರಿ ಹೇಳಿಕೆಯಿಂದ ನಮ್ಮ ಭಾವನೆಗಳಿಗೆ ನೋವುಂಟಾಗಿದೆ, ಹೀಗಾಗಿ ಕಮಲೇಶ್ ತಿವಾರಿಯನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ ಮುಸ್ಲಿಂ ವ್ಯಾಪಾರಿಗಳೆಲ್ಲಾ ತಮ್ಮ ವ್ಯಾಪಾರ ವಹಿವಾಟು ಬಂದ್ ಮಾಡಿ ಹೋರಾಟಗಾರ ಮೌಲಾನಾ ಖಾಲಿದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಕಮಲೇಶ್ ತಿವಾರಿ ಅಲ್ಪಸಂಖ್ಯಾತ ಸಮುದಾಯಗಳ ಬಗ್ಗೆ ಅವಹಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಉತ್ತರ ಪ್ರದೇಶದ ಹಲವು ಕಡೆ ಪ್ರತಿಭಟನೆಗಳು ನಡೆದವು.

ಮುನ್ನೆಚ್ಚರಿಕಾ ಕ್ರಮವಾಗಿ ಮುಜಾಫರ್ ನಗರದಲ್ಲಿ ಬಿಗಿಭದ್ರತೆ ಒದಗಿಸಲಾಗಿದ್ದು, ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com