ಲಜ್ಜಾ ವಿರುದ್ಧದ ಪ್ರತಿಭಟನೆಯನ್ನು ಜಾತ್ಯಾತೀತವಾದಿಗಳೇಕೆ ಪ್ರಶ್ನಿಸಿಲ್ಲ?: ತಸ್ಲಿಮಾ ನಸ್ರಿನ್

ಭಾರತದಲ್ಲಿ ನಿಷೇಧಿಸಲ್ಪಟ್ಟ ತಮ್ಮ ವಿವಾದಿತ ಕೃತಿ "ಲಜ್ಜಾ'ದ ಮಾರಾಟಕ್ಕೆ ಆಕ್ಷೇಪ ಕೋರಿ ತಮ್ಮ ಬಂಧನಕ್ಕೆ...
ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್
ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್
Updated on

ನವದೆಹಲಿ: ಭಾರತದಲ್ಲಿ ನಿಷೇಧಿಸಲ್ಪಟ್ಟ ತಮ್ಮ ವಿವಾದಿತ ಕೃತಿ "ಲಜ್ಜಾ'ದ ಮಾರಾಟಕ್ಕೆ ಆಕ್ಷೇಪ ಕೋರಿ ತಮ್ಮ ಬಂಧನಕ್ಕೆ ಆಗ್ರಹಿಸಿ ಹೈದರಾಬಾದಿನ ಕೆಲವು ಮುಸ್ಲಿಂ ಮೂಲಭೂತವಾದಿಗಳು ಪ್ರತಿಭಟನೆ ನಡೆಸಿರುವುದಕ್ಕೆ ತಾವು ಸೆಕ್ಯುಲರ್ ಎಂದು ಹೇಳಿಕೊಂಡು ತಿರುಗುವವರು ಯಾರೂ ಕೂಡ ಆಕ್ಷೇಪ ವ್ಯಕ್ತಪಡಿಸಿಲ್ಲ ಮತ್ತು ಅಸಹಿಷ್ಣುತೆಯ ವಿರುದ್ಧ ಕೂಡ  ಧ್ವನಿಯನ್ನು ಎತ್ತಿಲ್ಲ ಎಂದು ಬಾಂಗ್ಲಾದೇಶದ ಖ್ಯಾತ ಲೇಖಕಿ ತಸ್ಲಿಮಾ ನಸ್ರಿನ್‌ ಅವರು ಆರೋಪಿಸಿದ್ದಾರೆ.

ಹೈದರಾಬಾದಿನ ಸುಂದರ್ಯಾ ವಿಜ್ಞಾನ ಕೇಂದ್ರದಲ್ಲಿ ಶಿಕ್ಷಕರ ಒಕ್ಕೂಟವು ಏರ್ಪಡಿಸಿದ ಪುಸ್ತಕ ಪ್ರದರ್ಶನ - ಮಾರಾಟದಲ್ಲಿ ತಸ್ಲಿಮಾ ಅವರ "ಲಜ್ಜಾ' ಕಾದಂಬರಿಯ ಪ್ರತಿಗಳನ್ನು ಕೂಡ ಇಡಲಾಗಿತ್ತು.

ತಸ್ಲಿಮಾ ಅವರ ಈ ಕೃತಿಗೆ ಭಾರತದಲ್ಲಿ ನಿಷೇಧ ಹೇರಲಾಗಿದೆ ಎಂದು ಭಾವಿಸಿದ್ದ ಮುಸ್ಲಿಂ ಮೂಲಭೂತವಾದಿಗಳು ಲಜ್ಜಾ ಕೃತಿಯ ಮಾರಾಟಕ್ಕೆ ಆಕ್ಷೇಪ ವ್ಯಕ್ತಪಡಿಸಿ ಲೇಖಕಿಯ ಬಂಧನಕ್ಕೆ ಆಗ್ರಹಿಸಿದರು. ಪುಸ್ತಕ ಮಾರಾಟದ ಕೌಂಟರ್‌ನಲ್ಲಿ ಸಿಬಂದಿಗಳೊಂದಿಗೆ ಮೂಲಭೂತವಾದಿಗಳು ಜಗಳವಾಡಿದರು. ಬಳಿಕ ಪೊಲೀಸರು ಮಧ್ಯಪ್ರವೇಶದಿಂದ ವಿವಾದ ತಣ್ಣಗಾಯಿತು.  

ಘಟನೆಯ ಬಗ್ಗೆ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಲೇಖಕಿ ತಸ್ಲಿಮಾ, ಅಸಹಿಷ್ಣುತೆ ಭಾರತದಲ್ಲಿ ಇದೆ ಎಂದು ಹೇಳಿಕೊಂಡು ಓಡಾಡುತ್ತಿರುವ ಯಾವುದೇ ಸೆಕ್ಯುಲರ್ ವಾದಿಗಳು ಮುಸ್ಲಿಂ ಮೂಲಭೂತವಾದಿಗಳನ್ನು ಅಸಹಿಷ್ಣುಗಳು ಎಂದು ಕರೆದಿಲ್ಲ. ಭಾರತದಲ್ಲಿನ ಯಾವುದೇ ಸೆಕ್ಯುಲರ್‌ವಾದಿಗಳು, ಲೇಖಕರು, ಚಿಂತಕರು ಈ ಅವಮಾನಕಾರಿ ಘಟನೆಯನ್ನು ಖಂಡಿಸಿದ್ದಾಗಲೀ, ಅಸಹಿಷ್ಣುತೆಯನ್ನು ದೂರಿಕೊಂಡದ್ದಾಗಲೀ ನನಗೆ ಕೇಳಿ ಬಂದಿಲ್ಲ' ಎಂದು ಹೇಳಿದ್ದಾರೆ. ಅಲ್ಲದೆ ಪುಸ್ತಕ ಮಾರಾಟ ಮಳಿಗೆಯಲ್ಲಿ ಮಾತ್ರವಲ್ಲದೆ ಮುಸ್ಲಿಂ ಮೂಲಭೂತವಾದಿಗಳು ನಡೆಸಿದ ಗಲಾಟೆಯ ವಿಡಿಯೋವನ್ನು ಕೂಡ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com