ಚೆನ್ನೈ: ಚೆನ್ನೈ ಜಲಪ್ರಳಯದಲ್ಲಿ ನಷ್ಟವಾಗಿರುವ ಸೊತ್ತುಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಮಿಳ್ನಾಡು ಸರ್ಕಾರ ರು. 25,912 ಕೋಟಿ ಬೇಡಿಕೆಯನ್ನಿರಿಸಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ತಮಿಳ್ನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು, ಚೆನ್ನೈ ಜಲಪ್ರಳಯದ ನಷ್ಟ ಪರಿಹಾರ ರು. 17, 431.51 ಕೋಟಿಯನ್ನು ಕೋರಿ ನಿವೇದನೆ ಕಳುಹಿಸಿದೆ.
ಆ ಹಿಂದೆ ಡಿಸೆಂಬರ್ನಲ್ಲಿ ಮಳೆ ಬೀಳಲು ಆರಂಭವಾದಾಗ ತಮಿಳ್ನಾಡು ರು. 8,481 ಕೋಟಿ ಪರಿಹಾರ ಧನವನ್ನು ಕೇಳಿತ್ತು.
ಚೆನ್ನೈ ಜಲಪ್ರಳಯಕ್ಕೆ ತುತ್ತಾಗಿ ನಾಶ ನಷ್ಟ ಸಂಭವಿಸಿದ್ದನ್ನು ಪುನರ್ ನಿರ್ಮಾಣಗೊಳಿಸಲೋಸುಗ ತಮಿಳ್ನಾಡು ಸರ್ಕಾರ ಕೇಂದ್ರದಲ್ಲಿ ಈ ಸಹಾಯವನ್ನು ಬೇಡಿದೆ.