ಟಿವಿ.9 ಸುದ್ದಿ ವಾಚಕ ಅಪಘಾತದಲ್ಲಿ ಸಾವು, 4 ಗಾಯ

ಆಂಧ್ರಪ್ರದೇಶದ ಟಿವಿ.9 ಸುದ್ದಿ ವಾಹಿನಿಯಲ್ಲಿ ಸುದ್ದಿ ವಾಚಕನಾಗಿ ಖ್ಯಾತಿ ಗಳಿಸಿದ್ದ ಬದ್ರಿ (40) ರಸ್ತೆ ಅಪಘಾತ...
ಅಪಘಾತದಲ್ಲಿ ಸಾವಿಗೀಡಾದ ಟಿವಿ.9 ಸುದ್ದಿ ವಾಚಕ ಬದ್ರಿ
ಅಪಘಾತದಲ್ಲಿ ಸಾವಿಗೀಡಾದ ಟಿವಿ.9 ಸುದ್ದಿ ವಾಚಕ ಬದ್ರಿ
Updated on

ರಾಜಮಂಡ್ರಿ: ಆಂಧ್ರಪ್ರದೇಶದ ಟಿವಿ.9 ಸುದ್ದಿ ವಾಹಿನಿಯಲ್ಲಿ ಸುದ್ದಿ ವಾಚಕನಾಗಿ ಖ್ಯಾತಿ ಗಳಿಸಿದ್ದ ಬದ್ರಿ (40) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಗೋದಾವರಿಯಲ್ಲಿ ನಡೆದಿದೆ.

ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಮದುವೆಗೆ ಹೋಗಲೆಂದು ಕುಟುಂಬಸ್ಥರೊಂದಿಗೆ ನಿನ್ನೆ ತೆರಳಿದ್ದರು. ಇಂದು ಬೆಳಗ್ಗೆ ತಿರುಗಿ ಮನೆಗೆ ಬರುವಾಗ ದ್ವಾರಕ ತಿರುಮಲ ಹಳ್ಳಿಯ ರಸ್ತೆ ಮಧ್ಯದಲ್ಲಿ ಅವರಿದ್ದ ಕಾರಿನ ಟೈರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇದೇ ವೇಳೆ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಅವರ ಪತ್ನಿ, ಇಬ್ಬರು ಮಕ್ಕಳು ಹಾಗೂ ಅವರ ಭಾವ ಗಂಭೀರ ಗಾಯಗೊಂಡಿದ್ದು, ಟಿವಿ.9 ಸುದ್ದಿ ವಾಚಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಗೊಂಡವರನ್ನು ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾವನ್ನಪ್ಪಿದ್ದ ಸುದ್ದಿ ವಾಚಕ ಭದ್ರಿ ಅವರ ದೇಹವನ್ನು ಶವ ಪರೀಕ್ಷೆಗಾಗಿ ಯಲ್ಲೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com