ಭೂ ಸ್ವಾಧೀನ ಮಸೂದೆ: ರೈತರ ಸಲಹೆ ಪಡೆಯಲು ಸಮಿತಿ ರಚಿಸಿದ ಶಾ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ವಿವಾದಾತ್ಮಕ ಭೂ ಸ್ವಾಧೀನ ಮಸೂದೆ ಕುರಿತು ರೈತರ ಸಲಹೆ ಪಡೆಯಲು ಎಂಟು ಸದಸ್ಯರನ್ನು ಒಳಗೊಂಡ...
ಅಮಿತ್ ಶಾ
ಅಮಿತ್ ಶಾ
Updated on

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ವಿವಾದಾತ್ಮಕ ಭೂ ಸ್ವಾಧೀನ ಮಸೂದೆ ಕುರಿತು ರೈತರ ಸಲಹೆ ಪಡೆಯಲು ಎಂಟು ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ಸತ್ಯಪಾಲ್ ಮಲಿಕ್ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗಿದ್ದು, ಸಮಿತಿಯಲ್ಲಿ ಮಲಿಕ್ ಸೇರಿದಂತೆ ಬಿಜೆಪಿಯ ಏಳು ಸಂಸದರು ಹಾಗೂ ಓರ್ವ ಚಾರ್ಟೆಡ್ ಅಕೌಂಟೆಂಟ್‌ನ್ನು ಒಳಗೊಂಡಿದೆ.

ಈ ಸಮಿತಿಯ ಸದಸ್ಯರು ಉದ್ದೇಶಿತ ಭೂ ಸ್ವಾಧೀನ ಮಸೂದೆ ಬಗ್ಗೆ ರೈತರು ಹಾಗೂ ಇತರೆ ಸಂಘ-ಸಂಸ್ಥೆಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

ಸಂಸದರಾದ ಭುಪೇಂದರ್ ಯಾದವ್, ರಾಮ್ ನಾರಾಯಣ ದುಡಿ, ಹುಕಮ್ ದೇವ್ ನಾರಾಯಣ್, ರಾಕೇಶ್ ಸಿಂಗ್, ಸಂಜಯ್ ದೋತ್ರೆ ಮತ್ತು ಸುರೇಶ್ ಅಂಗಡಿ ಹಾಗೂ ಚಾರ್ಟೆಡ್ ಅಕೌಂಟೆಂಟ್ ಗೋಪಾಲ್ ಅಗರವಾಲ್ ಅವರು ಶಾ ಸಮಿತಿಯ ಸದಸ್ಯರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com