ಭಾರೀ ಮಳೆ, ಕೆಟ್ಟ ಹವಾಮಾನ: ಅಮರನಾಥ್ ಯಾತ್ರೆ ಸ್ಥಗಿತ

ಭಾರೀ ಮಳೆ ಹಾಗೂ ಕೆಟ್ಟ ಹವಾಮಾನದ ಪರಿಣಾಮ ದಕ್ಷಿಣ ಕಾಶ್ಮೀರದ ಪಹಲ್ಲಮ್ ಮತ್ತು ಉತ್ತರ ಕಾಶ್ಮೀರದ ಬಲ್ತಾಲ್ ಮಾರ್ಗದಲ್ಲಿ ಸಂಚಾರ...
ಅಮರನಾಥ್ ಯಾತ್ರೆ
ಅಮರನಾಥ್ ಯಾತ್ರೆ

ಶ್ರೀನಗರ: ಭಾರೀ ಮಳೆ ಹಾಗೂ ಕೆಟ್ಟ ಹವಾಮಾನದ ಪರಿಣಾಮ ದಕ್ಷಿಣ ಕಾಶ್ಮೀರದ ಪಹಲ್ಲಮ್ ಮತ್ತು ಉತ್ತರ ಕಾಶ್ಮೀರದ ಬಲ್ತಾಲ್ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಅಮರನಾಥ್ ಯಾತ್ರೆ ಸ್ಥಗಿತಗೊಳಿಸಲಾಗಿದೆ.

ಬೆಳಗ್ಗಿನಿಂದಲೇ ಕಣಿವೆ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಅಮರನಾಥ ಯಾತ್ರಿಗಳನ್ನು ಬಲ್ತಾಲ್ ಹಾಗೂ ಪಹಲ್ಲಮ್ ಶಿಬಿರಗಳಲ್ಲೇ ಉಳಿಸಲಾಗಿದೆ. ಹವಾಮಾನ ಸುಧಾರಣೆಯ ನಂತರವಷ್ಟೇ ಯಾತ್ರೆ ಮುಂದುವರೆಸುವ ಬಗ್ಗೆ ನಿರ್ಧಾರ ಕೈಗೊಳ್ಳುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಗಳ ಪವಿತ್ರ ಸ್ಥಳವಾಗಿರುವ ಅಮರನಾಥ್ ಹಿಮಲಿಂಗದ ದರ್ಶನ ಪಡೆಯಲು ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಈ ಮಾರ್ಗದಲ್ಲಿ ತೆರಳುತ್ತಿದ್ದಾರೆ. ಎಲ್ಲ ಭಕ್ತರಿಗೂ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com