ಇಸ್ಲಾಮಾಬಾದ್: ಭಾರತವು ಪಾಕಿಸ್ತಾನವನ್ನು ಅಸ್ಥಿರಗೊಳಿಸಲು ಹೊರಟಿದೆ ಎಂದು ಆರೋಪಿಸಿರುವ ಪಾಕ್ ನ ನಿವೃತ್ತ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ 'ನಮ್ಮಲ್ಲಿ ಅಣ್ವಸ್ತ್ರಗಳಿರುವುದು ದೇಶದ ರಕ್ಷಣೆಗೇ ಹೊರತು, ಹಬ್ಬಗಳ ಆಚರಣೆಗಲ್ಲ' ಎಂದಿದ್ದಾರೆ.
ನಾವು ನಮ್ಮ ಅಣ್ವಸ್ತ್ರ ಸಾಮರ್ಥ್ಯ ಪ್ರದರ್ಶಿಸಲು ಬಯಸುವುದಿಲ್ಲ. ಆದರೆ, ನಮ್ಮ ಅಸ್ತಿತ್ವಕ್ಕೆ ಧಕ್ಕೆಯುಂಟಾದಾಗ ಸುಮ್ಮನಿರುವುದಿಲ್ಲ. ನಮ್ಮ ಮೇಲೆ ದಾಳಿ ನಡೆಸಬೇಡಿ, ನಮ್ಮ ಗಡಿ ಸಮಗ್ರತೆಗೆ ಸವಾಲು ಹಾಕಬೇಡಿ. ಏಕೆಂದರೆ ನಮ್ಮದು ಬೃಹತ್, ಅಣ್ವಸ್ತ್ರಶಕ್ತಿ. ನಮ್ಮನ್ನು ನಿಶ್ಶಸ್ತ್ರಿಕರಣಗೊಳಿಸುವ ಭಾರತದ ಕನಸು ಎಂದಿಗೂ ನನಸಾಗದು'' ಎಂದೂ ಹೇಳಿದ್ದಾರೆ.
Advertisement