ಅತ್ಯಾಚಾರಿ ಆರೋಪಿಯನ್ನು ಬಡಿದು ಕೊಂದ ಉದ್ರಿಕ್ತ ಗುಂಪು

ಉದ್ರಿಕ್ತ ಗುಂಪು
ಉದ್ರಿಕ್ತ ಗುಂಪು

ಗುವಾಹಟಿ(ನಾಗಾಲ್ಯಾಂಡ್): ಅತ್ಯಾಚಾರದ ಆರೋಪದ ಮೇಲೆ ಸೆಂಟ್ರಲ್ ಜೈಲಿಗೆ ಹಾಕಲಾಗಿದ್ದ ಆರೋಪಿಯನ್ನು ಉದ್ರಿಕ್ತ ಗುಂಪೊಂದು ಥಳಿಸಿ ಹತ್ಯೆ ಮಾಡಿದೆ.

ಗುವಾಹಟಿಯ ದಿಮಾಪುರ್ ಜೈಲಿಗೆ ನುಗ್ಗಿದ ಉದ್ರಿಕ್ತರ ಗುಂಪು ಆರೋಪಿಯನ್ನು ಜೈಲಿನಿಂದ ಹೊರಗೆ ಎಳೆದುಕೊಂಡು ಬಂದು ತೀವ್ರ ಥಳಿಸಿ ಕೊಲೆ ಮಾಡಿದ್ದಾರೆ. ಮೃತ ಆರೋಪಿಯನ್ನು 35 ವರ್ಷದ ಸೈಯದ್ ಫರೀದ್ ಖಾನ್ ಎಂದು ಗುರುತಿಸಲಾಗಿದ್ದು ಇತ ಉದ್ಯಮಿಯಾಗಿದ್ದ. ನಾಗಾ ಯುವತಿಯನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ಫೆಬ್ರವರಿ 23 ರಂದು ಇತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ನೂರಾರು ಸಂಖ್ಯೆಯಲ್ಲಿ ಬಂದ ಉದ್ರಿಕ್ತರ ಗುಂಪು ಈ ಕೃತ್ಯ ಎಸಗಿದೆ. ಜೈಲಿನ ಎರಡು ಗೇಟುಗಳನ್ನು ಕಿತ್ತು ಒಳ ಬಂದ ಉದ್ರಿಕ್ತರು ಆರೋಪಿಯನ್ನು ಜೈಲಿನಿಂದ ಹೊರಕ್ಕೆ ಎಳೆ ತಂದಿದ್ದಾರೆ. ಈ ವೇಳೆ ಜೈಲಿನ ಭದ್ರತಾ ಸಿಬ್ಬಂದಿಗಳು ಏನು ಮಾಡಲಾಗದೆ ಮೂಖ ಪ್ರೇಕ್ಷಕರಂತಾಗಿದ್ದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಉದ್ರಿಕ್ತರ ಗುಂಪೊಂದು ಜೈಲಿಗೆ ಲಗ್ಗೆ ಇಟ್ಟು ಅತ್ಯಾಚಾರಿ ಆರೋಪಿಯನ್ನು ತೀವ್ರವಾಗಿ ಥಳಿಸಿದ್ದಾರೆ. ಪರಿಣಾಮ ಆರೋಪಿ ಸಾವನ್ನಪ್ಪಿದ್ದಾನೆ. ಮತ್ತೊಂದೆಡೆ ಜೈಲಿನಲ್ಲಿದ್ದ ಮತ್ತಿಬ್ಬರು ಕೈದಿಗಳು ಈ ಸನ್ನಿವೇಶವನ್ನು ಬಳಸಿಕೊಂಡು ಜೈಲಿನಿಂದ ಪರಾರಿಯಾಗಿದ್ದಾರೆ. ಘಟನೆ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com