ಅಸಹಿಷ್ಣುತೆ ಬಗ್ಗೆ ಪಾಠ ಮಾಡುವ ಕಾಂಗ್ರೆಸ್, 1984 ಗಲಭೆ ನೆನಪಿಸಿಕೊಳ್ಳಲಿ: ಮೋದಿ

ದೇಶದಲ್ಲಿ ನಡೆಯುತ್ತಿರುವ ಅಸಹಿಷ್ಣುತೆ ಬಗ್ಗೆ ಪ್ರತಿಭಟನೆಗಿಳಿದಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಅಸಹಿಷ್ಣುತೆಯ ಬಗ್ಗೆ ಪಾಠ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಮೊದಲು 1984ರ ಸಿಖ್ ಗಲಭೆ...
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ಪಾಟ್ನ: ದೇಶದಲ್ಲಿ ನಡೆಯುತ್ತಿರುವ ಅಸಹಿಷ್ಣುತೆ ಬಗ್ಗೆ ಪ್ರತಿಭಟನೆಗಿಳಿದಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಅಸಹಿಷ್ಣುತೆಯ ಬಗ್ಗೆ ಪಾಠ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಮೊದಲು 1984ರ ಸಿಖ್ ಗಲಭೆಯನ್ನು ನೆನಪಿಸಿಕೊಳ್ಳಲಿ ಎಂದು ಸೋಮವಾರ ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಪುರ್ನರ್ ನಲ್ಲಿ ಮಾತನಾಡಿರುವ ಅವರು, ಸಿಖ್ ಗಲಭೆ ನಡೆದು ಇಂದಿಗೆ 31 ವರ್ಷ. ಆದರೆ, ಅದೇ ಸಿಖ್ ಗಲಭೆಗೆ ಕಾರಣರಾದ ಕಾಂಗ್ರೆಸ್ ನಾಯಕರು ಇಂದು ಅಸಹಿಷ್ಣುತೆ ಬಗ್ಗೆ ಪಾಠ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಪಾಠ ಮಾಡುವ ಮೊದಲು 1984ರ ಗಲಭೆಯನ್ನು ನೆನಪಿಸಿಕೊಳ್ಳಬೇಕಿದೆ.
 
1984ರ ನವಂಬರ್ 2ರಂದು ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಸಾಕಷ್ಟು ಸಿಖ್ ಜನರು ಸಾವನ್ನಪ್ಪಿದ್ದರು. ಗಲಭೆ ನಡೆದಾಗ ಕಾಂಗ್ರೆಸ್ ನಾಯಕರ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದವು ಎಂದು ಹೇಳಿದ್ದಾರೆ.

ಈ ಹಿಂದೆಯಷ್ಟೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ದೇಶದಲ್ಲಿ ನಡೆಯುತ್ತಿರು ಅಸಹಿಷ್ಣುತೆ, ಗೋಮಾಂಸ ವಿವಾದ, ಸಾಹಿತಿಗಳ ಹತ್ಯೆ ಹಾಗೂ ರಾಜಕೀಯ ಪ್ರಸಕ್ತ ಪರಿಸ್ಥಿತಿ ಕುರಿತಂತೆ ರಾಷ್ಟ್ರಪತಿಯವರಿಗೆ ಗಮನಕ್ಕೆ ತರಲು ಭೇಟಿ ಮಾಡಲಿದ್ದಾರೆಂದು ಹೇಳಲಾಗುತ್ತಿತ್ತು. ದೇಶದಲ್ಲಿ ನಡೆಯುತ್ತಿರುವ ಅಹಿಷ್ಣುತೆ ಬಗ್ಗೆ ಮಾತನಾಡಿದ್ದ ಸೋನಿಯಾ ಅವರು, ಕೆಲವು ಸಂಘಟನೆಗಳು ಹಾಗೂ ತಮ್ಮದೇ ಸಿದ್ಧಾಂತಗಳನ್ನು ಹೊಂದಿರುವ ಕೆಲವು ಜನರು ಇದೀಗ ದೇಶದಲ್ಲಿರುವ ಜನತೆಯನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದ್ದಾರೆ.

ದೇಶದಲ್ಲಿ ಇದೀಗ ನಡೆಯುತ್ತಿರುವ ಎಲ್ಲಾ ಘಟನೆಗಳು ಅಕಸ್ಮಿಕವಾಗಿ ಆಗುತ್ತಿದೆ ಎಂದು ಕೊಳ್ಳಲು ನಾವು ಭ್ರಮೆಯಲ್ಲಿ ಇಲ್ಲ. ದ್ವೇಷ, ಹಿಂಸೆ ಹಾಗೂ ಸಣ್ಣ ಮನಸ್ಸುಳ್ಳ ಜನರು ಈ ಕೃತ್ಯಗಳನ್ನು ಉದ್ದೇಶ ಪೂರ್ವಕವಾಗಿ ಪೂರ್ವ ನಿರ್ಧರಿತದಂತೆ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ, ಇಂತಹ ಘಟನೆಗಳು ನಡೆಯಲು ನಾವು ಬಿಡುವುದಿಲ್ಲ. ಇಂತಹ ಕೃತ್ಯಗಳು ದೇಶದ ಬುಡವನ್ನೇ ಅಲುಗಾಡಿಸಲಿದ್ದು, ಇಂತಹ ಯೋಜನೆಗಳು ಯಶಸ್ವಿಯಾಗಲು ನಾವು ಬಿಡುವುದಿಲ್ಲ. ಕೃತ್ಯ ವಿರೋಧಿಸಿ ಯುದ್ಧ ಮಾಡಲು ನಾವು ಸಿದ್ಧ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com