ಎಲ್ಇಟಿ ಉಗ್ರರ ವಿರುದ್ಧ ಎನ್‌ಕೌಂಟರ್: ಭಾರತೀಯ ಕರ್ನಲ್ ಸಾವು

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಗಡಿಯಲ್ಲಿ ಲಷ್ಕರ್ ಎ ತೊಯ್ಬಾ ಉಗ್ರರ ವಿರುದ್ಧದ ಎನ್‌ಕೌಂಟರ್ ವೇಳೆ ಭಾರತೀಯ ಕರ್ನಲ್...
ಬಿಎಸ್ಎಫ್
ಬಿಎಸ್ಎಫ್
ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಗಡಿಯಲ್ಲಿ ಲಷ್ಕರ್ ಎ ತೊಯ್ಬಾ ಉಗ್ರರ ವಿರುದ್ಧದ ಎನ್‌ಕೌಂಟರ್ ವೇಳೆ ಭಾರತೀಯ ಕರ್ನಲ್ ಸಂತೋಷ್ ಮಹಾಧಿಕ್ ಹುತಾತ್ಮರಾಗಿದ್ದಾರೆ. 
ನವೆಂಬರ್ 13 ರಿಂದ ಅಡಗಿರುವ 5 ರಿಂದ 8 ಲಷ್ಕರ್ ಎ ತೊಯ್ಬಾ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದರು. ಇಂದು ನಡೆದ ಎನ್‌ಕೌಂಟರ್ ವೇಳೆ 41
41 ಆರ್‌ಆರ್‌ನ ಕಮಾಂಡಿಂಗ್ ಅಧಿಕಾರಿಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕರ್ನಲ್ ಮೃತಪಟ್ಟಿದ್ದಾರೆ. ಇನ್ನು ಮೂವರು ಯೋಧರಿಗೆ ಗಾಯಗಳಾಗಿದ್ದು, ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 
5 ರಿಂದ 8 ಮಂದಿ ಉಗ್ರರು ಅಡಗಿರುವ ಮಾಹಿತಿ ಹಿನ್ನೆಲೆಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com