ಆಮಿರ್, ಶಾರುಖ್ ಖಾನ್, ದಿಲಿಪ್ ಕುಮಾರ್‌ರನ್ನು ಹಾವಿಗೆ ಹೋಲಿಸಿದ ಮಹಾ ಸಚಿವ

ಬಾಲಿವುಡ್ ನಟರಾದ ಆಮಿರ್ ಖಾನ್, ಶಾರುಖ್ ಖಾನ್ ಹಾಗೂ ದಿಲಿಪ್ ಕುಮಾರ್ ಅವರ ಹೇಳಿಕೆಯನ್ನು ಗಮನಿಸಿದರೆ, ಅವರು ಒಂಥರ ಹಾವು...
ರಾಮದಾಸ್ ಕದಂ
ರಾಮದಾಸ್ ಕದಂ

ಮುಂಬೈ: ಬಾಲಿವುಡ್ ನಟರಾದ ಆಮಿರ್ ಖಾನ್, ಶಾರುಖ್ ಖಾನ್ ಹಾಗೂ ದಿಲಿಪ್ ಕುಮಾರ್ ಅವರ ಹೇಳಿಕೆಯನ್ನು ಗಮನಿಸಿದರೆ, ಅವರು ಒಂಥರ ಹಾವು ಇದ್ದಂತೆ ಎಂದು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಶಿವಸೇನಾ ಸಚಿವರು ಹೇಳಿದ್ದಾರೆ.

ಅಸಹಿಷ್ಣುತೆ ಕುರಿತ ಆಮಿರ್ ಖಾನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಸೇನಾ ಹಿರಿಯ ನಾಯಕ ಹಾಗೂ ಅರಣ್ಯ ಸಚಿವ ರಾಮದಾಸ್ ಕದಂ ಅವರು, 'ಅವರು ದೇಶವನ್ನು ಪ್ರೀತಿಸದಿದ್ದರೆ, ಪಾಕಿಸ್ತಾನಕ್ಕೆ ಹೋಗಲಿ' ಎಂದಿದ್ದಾರೆ.

ಆಮಿರ್ ಖಾನ್ ಹೇಳಿಕೆ ದೇಶದ್ರೋಹ ಪ್ರಕರಣದಡಿ ಬರುತ್ತದೆಯೇ ಎಂಬುದರ ಬಗ್ಗೆ ಪೊಲೀಸರು ಪರಿಶೀಲಿಸಬೇಕು ಎಂದು ಕದಂ ಹೇಳಿದ್ದಾರೆ.

ಆಮಿರ್ ಖಾನ್, ಶಾರುಖ್ ಖಾನ್ ಹಾಗೂ ದಿಲಿಪ್ ಕುಮಾರ್ ಅವರನ್ನು ನಾವು ಎಲ್ಲರೂ ಪ್ರೀತಿಯಿಂದ ನೋಡಿಕೊಂಡಿದ್ದೇವೆ. ಆದರೆ ಕೃತಜ್ಞತೆ ಇಲ್ಲದ ಅವರು ಹಾವಿಗೆ ಸಮ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com