
ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕ ಅಖಿಲೇಶ್ ತ್ರಿಪಾಠಿ ಅವರನ್ನು ಗುರುವಾರ ದೆಹಲಿ ಪೊಲೀಸರು ಬಂಧಿಸಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ಗೆ ಮತ್ತೆ ಮುಖಭಂಗವಾಗಿದೆ.
ಮೂಲಗಳ ಪ್ರಕಾರ, 2013ರಲ್ಲೆ ನಡೆದ ಗಲಭೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ತ್ರಿಪಾಠಿ ಅವರನ್ನು ಬಂಧಿಸಿ ಕೋರ್ಟ್ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ಎಎಪಿ ಶಾಸಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಅಖಿಲೇಶ್ ಮಾಡೆಲ್ ಟೌನ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾದ ಐದನೇ ಎಎಪಿ ಶಾಸಕರಾಗಿದ್ದಾರೆ.
Advertisement